ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ಮುಂಜಾನೆ ಹಾಗೂ ಸಂಜೆ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ.
ಮಳೆಯ ಆರ್ಭಟದಿಂದ ರಸ್ತೆ ಮೇಲೆ ನೀರು ಹರಿಯಿತು. ಹೊಲಗಳಲ್ಲಿ ನೀರು ನಿಂತಿರುವ ದೃಶ್ಯ ಕಂಡುಬಂದಿತು. ಮಳೆಯ ಪರಿಣಾಮವಿಜಯಪುರ ನಗರದಲ್ಲಿ ಭಾನುವಾರ ಸಂಜೆ 5 ರಿಂದ 7.30ರ ವರೆಗೆ ವಿದ್ಯುತ್ ಸಂಪರ್ಕ ಸ್ಥಗಿತವಾಗಿತ್ತು. ಭಾನುವಾರದ ಸಂತೆಗೆ ಹಾಗೂ ಗಣಪತಿ ವೀಕ್ಷಣೆಗೂ ತೊಂದರೆಯಾಯಿತು. ಗಣಪತಿ ವಿಸರ್ಜನೆಗೂ ಅಡಚಣೆಯಾಯಿತು.
ಹೊಂಡ, ಗುಂಡಿಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಕಾಟವೂಅತಿಯಾಗಿದೆ. ಜೊತೆಗೆ ಮಳೆ, ಬಿಸಿಲಿನ ಆಟದಲ್ಲಿ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಶೀತ, ಜ್ವರ, ಮೈಕೈನೋವಿನಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.