<p><strong>ಹೊರ್ತಿ:</strong> ಮಂಗಳವಾರ ಸಂಜೆ ಬಿರುಗಾಳಿ ಮತ್ತು ಮಳೆಗೆ ಸಮೀಪದ ಇಂಚಗೇರಿ ಗ್ರಾಮದ ಜ್ಞಾನ ಸಂಗಮ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಖಾಸಗಿ ಶಾಲೆಯ ತಗಡಿನ ಚಾವಣಿ ಹಾರಿ ಹಾನಿಯಾಗಿದೆ.</p>.<p>ತಗಡುಗಳು ಹಾರಿ ₹ 2 ಲಕ್ಷಕ್ಕೂ ಹೆಚ್ಚಿನ ಹಾನಿಯಾಗಿದೆ. ಎರಡು ಕೋಣೆಗಳ ಒಳಗಿನ ವಿವಿಧ ಸಾಹಿತಿಗಳ ಸೇರಿದಂತೆ 25ಕ್ಕೂ ಹೆಚ್ಚು ಮಹಾತ್ಮರ ಫೋಟೊ ಹಾಗೂ ಟ್ರೆಜರಿಗಳಿಗೂ ಹಾನಿ ಆಗಿದೆ. ಅಲ್ಲದೇ ಶಾಲೆಯ ಹಿಂದೆ ಇರುವ ವಿದ್ಯುತ್ ಕಂಬ ಮುರಿದು ಬಿದ್ದಿದೆ ಎಂದು ಶಾಲೆಯ ಸಂಸ್ಥಾಪಕ-ಅಧ್ಯಕ್ಷ ಅಲಿಸಾಬ ಚಡಚಣ ತಿಳಿಸಿದರು.</p>.<p>ಶಾಲೆಯ 70ಕ್ಕೂ ಹೆಚ್ವು ತಗಡುಗಳು ಹಾರಿ ಹೋಗಿ ದೂರದ ಬೂದಿಹಾಳ ವಸತಿ ಪ್ರದೇಶ ಮತ್ತು ಮಡ್ಡಿಯ ಅವರಣಗಳಲ್ಲಿ ಬಿದ್ದಿವೆ. ಇಂಚಗೇರಿ-ಕನ್ನೂರು ರಸ್ತೆಯ ಮೇಲೆ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಆಗಿಲ್ಲ ಎಂದು ಸ್ಥಳೀಯ ವಸತಿ ಪ್ರದೇಶದ ನಿವಾಸಿ ರೇವಣಸಿದ್ಧ ಈರಪ್ಪ ಬೂದಿಹಾಳ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-26-1807482080</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊರ್ತಿ:</strong> ಮಂಗಳವಾರ ಸಂಜೆ ಬಿರುಗಾಳಿ ಮತ್ತು ಮಳೆಗೆ ಸಮೀಪದ ಇಂಚಗೇರಿ ಗ್ರಾಮದ ಜ್ಞಾನ ಸಂಗಮ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಖಾಸಗಿ ಶಾಲೆಯ ತಗಡಿನ ಚಾವಣಿ ಹಾರಿ ಹಾನಿಯಾಗಿದೆ.</p>.<p>ತಗಡುಗಳು ಹಾರಿ ₹ 2 ಲಕ್ಷಕ್ಕೂ ಹೆಚ್ಚಿನ ಹಾನಿಯಾಗಿದೆ. ಎರಡು ಕೋಣೆಗಳ ಒಳಗಿನ ವಿವಿಧ ಸಾಹಿತಿಗಳ ಸೇರಿದಂತೆ 25ಕ್ಕೂ ಹೆಚ್ಚು ಮಹಾತ್ಮರ ಫೋಟೊ ಹಾಗೂ ಟ್ರೆಜರಿಗಳಿಗೂ ಹಾನಿ ಆಗಿದೆ. ಅಲ್ಲದೇ ಶಾಲೆಯ ಹಿಂದೆ ಇರುವ ವಿದ್ಯುತ್ ಕಂಬ ಮುರಿದು ಬಿದ್ದಿದೆ ಎಂದು ಶಾಲೆಯ ಸಂಸ್ಥಾಪಕ-ಅಧ್ಯಕ್ಷ ಅಲಿಸಾಬ ಚಡಚಣ ತಿಳಿಸಿದರು.</p>.<p>ಶಾಲೆಯ 70ಕ್ಕೂ ಹೆಚ್ವು ತಗಡುಗಳು ಹಾರಿ ಹೋಗಿ ದೂರದ ಬೂದಿಹಾಳ ವಸತಿ ಪ್ರದೇಶ ಮತ್ತು ಮಡ್ಡಿಯ ಅವರಣಗಳಲ್ಲಿ ಬಿದ್ದಿವೆ. ಇಂಚಗೇರಿ-ಕನ್ನೂರು ರಸ್ತೆಯ ಮೇಲೆ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಆಗಿಲ್ಲ ಎಂದು ಸ್ಥಳೀಯ ವಸತಿ ಪ್ರದೇಶದ ನಿವಾಸಿ ರೇವಣಸಿದ್ಧ ಈರಪ್ಪ ಬೂದಿಹಾಳ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-26-1807482080</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>