ವಿಜಯಪುರ: ಮನುಷ್ಯರು ಆರೋಗ್ಯದಿಂದ ಇರಬೇಕಾದರೆ ಯೋಗ ಮುಖ್ಯ. ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡಬೇಕು ಎಂದು ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ನಿಡೋಣಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣ, ಶ್ರೀ ಅಕ್ಕಮಹಾದೇವಿ ಜಯಂತಿ ಹಾಗೂ ಶ್ರೀ ಚನ್ನವೀರ ವಿರಕ್ತಮಠ ಶ್ರೀಮಠದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಪ್ರತಿಯೊಬ್ಬರೂ ಯೋಗ ಕಲಿಯಬೇಕು. ಯೋಗಾಭ್ಯಾಸ ಮಾಡುವುದರ ಮೂಲಕ ಜೀವನದಲ್ಲಿ ಚೈತನ್ಯ, ಉತ್ಸಾಹ, ಲವಲಿಕೆ, ನೆಮ್ಮದಿಯಿಂದ ಬದುಕು ಸಾಗಬಲ್ಲದು, ಯೋಗವು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ರೂಢಿಯಲ್ಲಿದೆಎಂದರು.