<p>ಇಂಡಿ: ‘ಅಹಿಂಸಾ ಪರಮೋ ಧರ್ಮ ಎಂಬ ಸಂದೇಶ ಸಾರಿದ ಮಹಾವೀರರ ಜೀವನಾದರ್ಶಗಳು ನಮಗೆ ದಾರಿದೀಪವಾಗಬೇಕು. ಶಾಂತಿ - ಸೌಹಾರ್ದತೆ ಯನ್ನು ಕಾಪಾಡುವ ಕಾರ್ಯ ಎಲ್ಲರಿಂದಾಗಬೇಕು’ ಎಂದು ಶಾಠಸಕ ಯಶವಂತರಾಯಗೌಡ ಪಾಟೀಲ ಕರೆ ನೀಡಿದರು.</p>.<p>ನಗರದಲ್ಲಿ ಜೈನ್ ಸಮುದಾಯದಿಂದ ಸೋಮವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ವಿಜಯಪುರ ಜಿಲ್ಲೆಯಲ್ಲಿ ಇಂಡಿ ಅತೀ ದೊಡ್ಡ ನಗರವಾಗಿದ್ದು, ಇಲ್ಲಿ ನಗರಸಭೆ, ನಗರ ಯೋಜನಾ ಪ್ರಾಧಿಕಾರ ರಚಿಸಲಾಗಿದೆ. ರಾಜ್ಯದ 6 ತಾಲ್ಲೂಕು, ನಗರಗಳು ಮಾತ್ರ ಮಾಸ್ಟರ್ ಪ್ಲಾನ್ಗೆ ಅಳವಡಿಸಲಾಗಿದೆ, ಅದರಲ್ಲಿ ಇಂಡಿಯೂ ಒಂದು. ಮಾಸ್ಟರ್ ಪ್ಲ್ಯಾನ್ ಜಾರಿಯಾದರೆ ಶಿಕ್ಷಣ, ಕೈಗಾರಿಕೆ ಬೇರೆ ಬೇರೆ ಕ್ಷೇತ್ರ, ವಲಯಗಳನ್ನು ರಚಿಸಿ ಸಮಗ್ರ ಬದಲಾವಣೆಗೆ ಪೂರಕವಾಗುತ್ತದೆ’ ಎಂದರು.</p>.<p>ಜೈನ್ ಮುದಾಯದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಜೀತ ಧನಶೆಟ್ಟಿ ಮಾತನಾಡಿದರು.</p>.<p>ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ನಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಸಂಜೀವ ಧನಪಾಲ, ವೀರಭಾರತಿ ವಿದ್ಯಾಕೇಂದ್ರದ ಅಧ್ಯಕ್ಷ ಅಭಿನಂದನಾ ಕಿರಣಗಿ, ಸಂದೀಪ ಧನಶೇಟ್ಟಿ, ಪ್ರಕಾಶ ಧನಶೆಟ್ಟಿ, ಕೂಲಭೂಷಣ ಕೋಟಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-26-1843320429</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂಡಿ: ‘ಅಹಿಂಸಾ ಪರಮೋ ಧರ್ಮ ಎಂಬ ಸಂದೇಶ ಸಾರಿದ ಮಹಾವೀರರ ಜೀವನಾದರ್ಶಗಳು ನಮಗೆ ದಾರಿದೀಪವಾಗಬೇಕು. ಶಾಂತಿ - ಸೌಹಾರ್ದತೆ ಯನ್ನು ಕಾಪಾಡುವ ಕಾರ್ಯ ಎಲ್ಲರಿಂದಾಗಬೇಕು’ ಎಂದು ಶಾಠಸಕ ಯಶವಂತರಾಯಗೌಡ ಪಾಟೀಲ ಕರೆ ನೀಡಿದರು.</p>.<p>ನಗರದಲ್ಲಿ ಜೈನ್ ಸಮುದಾಯದಿಂದ ಸೋಮವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ವಿಜಯಪುರ ಜಿಲ್ಲೆಯಲ್ಲಿ ಇಂಡಿ ಅತೀ ದೊಡ್ಡ ನಗರವಾಗಿದ್ದು, ಇಲ್ಲಿ ನಗರಸಭೆ, ನಗರ ಯೋಜನಾ ಪ್ರಾಧಿಕಾರ ರಚಿಸಲಾಗಿದೆ. ರಾಜ್ಯದ 6 ತಾಲ್ಲೂಕು, ನಗರಗಳು ಮಾತ್ರ ಮಾಸ್ಟರ್ ಪ್ಲಾನ್ಗೆ ಅಳವಡಿಸಲಾಗಿದೆ, ಅದರಲ್ಲಿ ಇಂಡಿಯೂ ಒಂದು. ಮಾಸ್ಟರ್ ಪ್ಲ್ಯಾನ್ ಜಾರಿಯಾದರೆ ಶಿಕ್ಷಣ, ಕೈಗಾರಿಕೆ ಬೇರೆ ಬೇರೆ ಕ್ಷೇತ್ರ, ವಲಯಗಳನ್ನು ರಚಿಸಿ ಸಮಗ್ರ ಬದಲಾವಣೆಗೆ ಪೂರಕವಾಗುತ್ತದೆ’ ಎಂದರು.</p>.<p>ಜೈನ್ ಮುದಾಯದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಜೀತ ಧನಶೆಟ್ಟಿ ಮಾತನಾಡಿದರು.</p>.<p>ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ನಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಸಂಜೀವ ಧನಪಾಲ, ವೀರಭಾರತಿ ವಿದ್ಯಾಕೇಂದ್ರದ ಅಧ್ಯಕ್ಷ ಅಭಿನಂದನಾ ಕಿರಣಗಿ, ಸಂದೀಪ ಧನಶೇಟ್ಟಿ, ಪ್ರಕಾಶ ಧನಶೆಟ್ಟಿ, ಕೂಲಭೂಷಣ ಕೋಟಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-26-1843320429</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>