<p>ಇಂಡಿ: ವಿಶ್ವಕರ್ಮ ಸಮಾಜ ಕುಶಲಕರ್ಮಿ ಸಮುದಾಯಗಳಲ್ಲಿ ಒಂದಾಗಿದ್ದು, ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಲೋಹದ ಕೆಲಸಗಳಲ್ಲಿ ಪರಿಣಿತರಿದ್ದು, ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.</p>.<p>ನಗರದಲ್ಲಿ ಕಾಳಿಕಾದೇವಿ ಜಾತ್ರಾ ಮಹೋತ್ಸವ, ಉಚಿತ ಸಾಮೂಹಿಕ ಉಪನಯನ ಹಾಗೂ ನೂತನ ರಥೋತ್ಸವದ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.</p>.<p>ಕಾಳಿಕಾ ದೇವಸ್ಥಾನಕ್ಕೆ ಒಂದು ವ್ಯವಸ್ಥಿತ ರಸ್ತೆ , ದೇವಸ್ಥಾನ ಸುತ್ತ ವಿದ್ಯುತ್ ವ್ಯವಸ್ಥೆ ಮತ್ತು ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.</p>.<p>ಕಲಬುರಗಿಯ ಪ್ರಣಯ ನಿರಂಜನ ಶ್ರೀ ಮಾತನಾಡಿ, ವಿಶ್ವಕರ್ಮ ಸಮಾಜ ಮಾನವನ ಜೀವನದ ಪ್ರತಿಯೊಂದು ಹಂತದಲ್ಲೂ ಮಹತ್ವದ ಪಾತ್ರ ವಹಿಸುತ್ತಿದೆ’ ಎಂದು ತಿಳಿಸಿದರು.</p>.<p>ಕನ್ನೂರ ಪ್ರಕಾಶ ಶ್ರೀಗಳು ಮಾತನಾಡಿದರು. ಪುರಾಣ ಮಹಾಮಂಗಲ, ಉಡಿ ತುಂಬುವ ಕಾರ್ಯಕ್ರಮ, ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆದವು. ಮುರನಾಳದ ಶ್ರೀ ಜಗನ್ನಾಥ ಶ್ರೀಗಳು, ಬೌರಮ್ಮ ಕಣ್ಣಿ ಇದ್ದರು.</p>.<p>ಶ್ರೀಕಾಳಿಕಾ ಸೇವಾ ಭೂಷಣ ಪ್ರಶಸ್ತಿ ಸಮಾರಂಭವನ್ನು ಅಗರಖೇಡದ ಪ್ರಭುಲಿಂಗೇಶ್ವರ ಶ್ರೀ, ಹಿಕ್ಕಣಗುತ್ತಿ ಪ್ರಭುಲಿಂಗ ಶ್ರೀ, ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ನಡೆಸಿಕೊಟ್ಟರು.</p>.<p>ಶಾಸಕ ಯಶವಂತರಾಯಗೌಡ ಪಾಟೀಲ, ಭಾಗ್ಯಶ್ರೀ ಯಶವಂತರಾಯಗೌಡ ಪಾಟೀಲ ಹಾಗೂ ಡಾ. ಪವಿತ್ರಾ ಬೆಂಗಳೂರು ಅವರಿಂದ ರಥದಉದ್ಘಾಟನೆ ಮಾಡಿ ಚಾಲನೆ ನೀಡಲಾಯಿತು. ರಥದ ಪೂಜೆಯನ್ನು ಬೌರಮ್ಮ ಬಸವರಾಜ ಕಣ್ಣಿ ನೆರವೇರಿಸಿದರು.</p>.<p>ದತ್ತಾತ್ರೆಯ ಸುತಾರ, ನರಸಿಂಹ ಬಡಿಗೇರ, ಮಲ್ಲಿಕಾರ್ಜುನ ಬಡಿಗೇರ ಮಾತನಾಡಿದರು. ಭೀಮರಾವ ಬಡಿಗೇರ, ಶಿವಾನಂದ ಬಡಿಗೇರ, ಸುಜಿತ ಲಾಳಸಂಗಿ, ರಮೇಶ ಪೋದ್ದಾರ, ಶಂಕರ ಕಮ್ಮಾರ, ಮೋನಮ್ಮ ಬಡಿಗೇರ ಶ್ರೀಮತಿ ಜಯಶ್ರೀ ಪತ್ತಾರ, ವಿಠ್ಠಲಾಚಾರ್ಯ ಕಾಳಿಕಾ ದೇವಸ್ಥಾನದ ಅರ್ಚಕರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-26-519700813</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂಡಿ: ವಿಶ್ವಕರ್ಮ ಸಮಾಜ ಕುಶಲಕರ್ಮಿ ಸಮುದಾಯಗಳಲ್ಲಿ ಒಂದಾಗಿದ್ದು, ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಲೋಹದ ಕೆಲಸಗಳಲ್ಲಿ ಪರಿಣಿತರಿದ್ದು, ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.</p>.<p>ನಗರದಲ್ಲಿ ಕಾಳಿಕಾದೇವಿ ಜಾತ್ರಾ ಮಹೋತ್ಸವ, ಉಚಿತ ಸಾಮೂಹಿಕ ಉಪನಯನ ಹಾಗೂ ನೂತನ ರಥೋತ್ಸವದ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.</p>.<p>ಕಾಳಿಕಾ ದೇವಸ್ಥಾನಕ್ಕೆ ಒಂದು ವ್ಯವಸ್ಥಿತ ರಸ್ತೆ , ದೇವಸ್ಥಾನ ಸುತ್ತ ವಿದ್ಯುತ್ ವ್ಯವಸ್ಥೆ ಮತ್ತು ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.</p>.<p>ಕಲಬುರಗಿಯ ಪ್ರಣಯ ನಿರಂಜನ ಶ್ರೀ ಮಾತನಾಡಿ, ವಿಶ್ವಕರ್ಮ ಸಮಾಜ ಮಾನವನ ಜೀವನದ ಪ್ರತಿಯೊಂದು ಹಂತದಲ್ಲೂ ಮಹತ್ವದ ಪಾತ್ರ ವಹಿಸುತ್ತಿದೆ’ ಎಂದು ತಿಳಿಸಿದರು.</p>.<p>ಕನ್ನೂರ ಪ್ರಕಾಶ ಶ್ರೀಗಳು ಮಾತನಾಡಿದರು. ಪುರಾಣ ಮಹಾಮಂಗಲ, ಉಡಿ ತುಂಬುವ ಕಾರ್ಯಕ್ರಮ, ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆದವು. ಮುರನಾಳದ ಶ್ರೀ ಜಗನ್ನಾಥ ಶ್ರೀಗಳು, ಬೌರಮ್ಮ ಕಣ್ಣಿ ಇದ್ದರು.</p>.<p>ಶ್ರೀಕಾಳಿಕಾ ಸೇವಾ ಭೂಷಣ ಪ್ರಶಸ್ತಿ ಸಮಾರಂಭವನ್ನು ಅಗರಖೇಡದ ಪ್ರಭುಲಿಂಗೇಶ್ವರ ಶ್ರೀ, ಹಿಕ್ಕಣಗುತ್ತಿ ಪ್ರಭುಲಿಂಗ ಶ್ರೀ, ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ನಡೆಸಿಕೊಟ್ಟರು.</p>.<p>ಶಾಸಕ ಯಶವಂತರಾಯಗೌಡ ಪಾಟೀಲ, ಭಾಗ್ಯಶ್ರೀ ಯಶವಂತರಾಯಗೌಡ ಪಾಟೀಲ ಹಾಗೂ ಡಾ. ಪವಿತ್ರಾ ಬೆಂಗಳೂರು ಅವರಿಂದ ರಥದಉದ್ಘಾಟನೆ ಮಾಡಿ ಚಾಲನೆ ನೀಡಲಾಯಿತು. ರಥದ ಪೂಜೆಯನ್ನು ಬೌರಮ್ಮ ಬಸವರಾಜ ಕಣ್ಣಿ ನೆರವೇರಿಸಿದರು.</p>.<p>ದತ್ತಾತ್ರೆಯ ಸುತಾರ, ನರಸಿಂಹ ಬಡಿಗೇರ, ಮಲ್ಲಿಕಾರ್ಜುನ ಬಡಿಗೇರ ಮಾತನಾಡಿದರು. ಭೀಮರಾವ ಬಡಿಗೇರ, ಶಿವಾನಂದ ಬಡಿಗೇರ, ಸುಜಿತ ಲಾಳಸಂಗಿ, ರಮೇಶ ಪೋದ್ದಾರ, ಶಂಕರ ಕಮ್ಮಾರ, ಮೋನಮ್ಮ ಬಡಿಗೇರ ಶ್ರೀಮತಿ ಜಯಶ್ರೀ ಪತ್ತಾರ, ವಿಠ್ಠಲಾಚಾರ್ಯ ಕಾಳಿಕಾ ದೇವಸ್ಥಾನದ ಅರ್ಚಕರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-26-519700813</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>