<p><strong>ವಿಜಯಪುರ</strong>: ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಆಲಮಟ್ಟಿ ಜಲಾಶಯದ ಎತ್ತರದಿಂದ ಬಾಧಿತಗೊಳ್ಳುವ ಜಮೀನಿನ ಭೂಸ್ವಾಧೀನಕ್ಕೆ ಮೊದಲೇ ನಿಗದಿಪಡಿಸಿದ ದರವನ್ನೇ ಮತ್ತೇ ಬಜೆಟ್ ನಲ್ಲಿ ಪುನರುಚ್ಛಿಸಿದ್ದಾರೆಯೇ ಹೊರತು, ಅದಕ್ಕಾಗಿ ಪ್ರತ್ಯೇಕ ಅನುದಾನ ತೆಗೆದಿಟ್ಟಿಲ್ಲ.</p>.<p>ಮುಖ್ಯಮಂತ್ರಿಯವರು ಈ ಹಿಂದೆ ಪ್ರತ್ಯೇಕ ಅನುದಾನ ತೆಗೆದಿಡುವುದಾಗಿ ಹೇಳಿದ್ದರು. ಆದರೆ, ಬಜೆಟ್ ಘೋಷಣೆಯಾಗಿಲ್ಲ. ಇದರಿಂದಾಗಿ ಕೃಷ್ಣಾ ತೀರದ ಬಾಧಿತ ರೈತರಲ್ಲಿ ತೀವ್ರ ನಿರಾಶೆ ಹಾಗೂ ಅಸಮಾದಾನದ ಕಿಡಿ ಮೊಳಗಿದೆ. ಇದರಿಂದ ಯುಕೆಪಿ ಮೂರನೇ ಹಂತದ ಅನುಷ್ಠಾನಕ್ಕೆ ಹಿನ್ನಡೆ ಉಂಟಾಗಲಿದೆ.</p>.<p>ಆಲಮಟ್ಟಿ ಜಲಾಶಯದ ಈಗಿನ ಎತ್ತರ 519.60 ಮೀಟರ್ ನಿಂದ 524.256 ಮೀಟರ್ ಗೆ ಹೆಚ್ಚಳ ಮಾಡುವುದರಿಂದ ಜಲಾವೃತಗೊಳ್ಳುವ ಸುಮಾರು 75,563 ಎಕರೆ ಜಮೀನಿಗೆ ಏಕರೂಪದ ಪರಿಹಾರ ನಿಗದಿ ಮಾಡಿ ಮುಂದಿನ ಮೂರು ವರ್ಷಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದರು. ಅದು ಆದೇಶವಾಗಿಯೂ ರಾಜ್ಯಪತ್ರದಲ್ಲಿ ಈಗಾಗಲೇ ಪ್ರಕಟವೂ ಆಗಿತ್ತು. ಈಗ ಅದನ್ನೇ ಬಜೆಟ್ ನಲ್ಲಿ ಪುನರ್ ಘೋಷಿಸಿದ್ದಾರೆ. ಇದರಲ್ಲಿ ಯಾವುದೇ ಹೊಸತನವಿಲ್ಲ ಎನ್ನುತ್ತಾರೆ ರೈತ ಮುಖಂಡ ಅರವಿಂದ ಕುಲಕರ್ಣಿ.</p>.<p>ಬಜೆಟ್ ನಲ್ಲಿ ಭೂಸ್ವಾಧೀನದ ಅನುಷ್ಠಾನಕ್ಕೆ ಪ್ರತ್ಯೇಕ ಅನುದಾನ ಮೀಸಲಿರಿಸುವ ಭರವಸೆ ಹಾಗೂ ಬಾಧಿತ ರೈತರ ನಿರೀಕ್ಷೆ ಹುಸಿಯಾಗಿದೆ ಎಂದು ಕುಲಕರ್ಣಿ ಆತಂಕ ವ್ಯಕ್ತಪಡಿಸಿದರು.</p>.<p>ಭೂಸ್ವಾಧಿನಕ್ಕೆ ಜನರಲ್ ಅವಾರ್ಡ್ ಬದಲಿಗೆ ಒಪ್ಪಂದದ ಐ ತೀರ್ಪಿನ ಪ್ರಕಾರ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ನೀರಾವರಿ ಜಮೀನಿಗೆ ಎಕರೆಗೆ ₹ 40 ಲಕ್ಷ, ಖುಷ್ಕಿ ಜಮೀನಿಗೆ ಎಕರೆಗೆ ₹30 ಲಕ್ಷ ನೀಡುವುದಾಗಿ ತಿಳಿಸಿತ್ತು. ಅದಕ್ಕಾಗಿ ಬಹುತೇಕ ರೈತರು ಸರ್ಕಾರದ ನಿರ್ಧಾರವನ್ನು ಒಪ್ಪಿ ಜಮೀನು ಕೊಡಲು ಸಿದ್ಧರಾಗಿದ್ದರು.</p>.<p>ನಾಲ್ಕು ನೀರಾವರಿ ಮಂಡಳಿಗಳು ಸೇರಿ ಇಡೀ ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಸೇರಿ ₹22,181 ಕೋಟಿ ಹಂಚಿಕೆಯಾಗಿದೆ. ಅದರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಹೆಚ್ಚು ಕಡಿಮೆ ₹5000 ಕೋಟಿ ಆಸುಪಾಸುವರೆಗೆ ಹಂಚಿಕೆಯಾಗಬಹುದು. ಅದು ಕೇವಲ ಪ್ರಗತಿಯಲ್ಲಿರುವ ನೀರಾವರಿ ಯೋಜನೆ ಹಾಗೂ ಆಡಳಿತಾತ್ಮಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗುತ್ತದೆ. ಭೂಸ್ವಾಧೀನಕ್ಕೆ ಯಾವುದೇ ಪ್ರತ್ಯೇಕ ಅನುದಾನ ನೀಡಿಲ್ಲ ಎಂಬುದು ರೈತರ ಆರೋಪ.</p>.<p>ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಸುಮಾರು 27,000 ಕ್ಕೂ ಅಧಿಕ ರೈತರು ವಿವಿಧ ನ್ಯಾಯಾಲಯಗಳಿಗೆ ಮೊರೆಹೋಗಿದ್ದಾರೆ. ಅದಕ್ಕಾಗಿ ಬಾಗಲಕೋಟೆಯಲ್ಲಿ ಭೂಸ್ವಾಧೀನಕ್ಕಾಗಿಯೇ ಫಾಸ್ಟ್ ಟ್ರಾಕ್ ಕೋರ್ಟ್ ಸ್ಥಾಪಿಸುವುದಾಗಿ ಕಳೆದ ವರ್ಷದ ಬಜೆಟ್ ನಲ್ಲಿ ಘೋಷಿಸಿದ್ದರು. ಒಂದು ವರ್ಷವಾದರೂ ನೂತನ ಕೋರ್ಟ್ ಆರಂಭದ ಯಾವುದೇ ಸಿದ್ಧತೆಯೂ ಆಗಿಲ್ಲ. ಈಗ ಈ ವರ್ಷದ ಬಜೆಟ್ ನಲ್ಲಿಯೂ ಅದೇ ಘೋಷಣೆಯನ್ನು ಮಾಡಲಾಗಿದೆ. ಹೀಗಾಗಿ ಯಾವುದೇ ಹೊಸತನವಿಲ್ಲದ ಬಜೆಟ್ ಇದಾಗಿದೆ.</p>.<p>ಬಾಬಾನಗರ ಜಲಸಂಗ್ರಹಗಾರ: ಬಬಲೇಶ್ವರ ತಾಲ್ಲೂಕಿನ ಬಾಬಾನಗರ ಬಳಿ 0.67 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಸಂಗ್ರಹಗಾರ ಸ್ಥಾಪಿಸಲು ಬಜೆಟ್ನಲ್ಲಿ ಅನುಮೋದನೆ ನೀಡಲಾಗಿದೆ. ಇದರಿಂದ ತಿಕೋಟಾ ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿದೆ.</p>.<h2> ನೀರಾವರಿ ಯೋಜನೆ ಪೂರ್ಣ: ಭರವಸೆ</h2><p> ಇನ್ನೂ ರಾಮಥಾಳ ಬೂದಿಹಾಳ-ಪೀರಾಪುರ ತಿಮ್ಮಾಪುರ ನಂದವಾಡಗಿ ಸನ್ನತಿ ಏತ ನೀರಾವರಿ ಯೋಜನೆಗಳು ಪೂರ್ಣಗೊಂಡಿದ್ದು ಅವುಗಳ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರದ ಪಿಎಂಕೆಎಸ್ ವೈ-ಎಐಬಿಪಿ ಯೋಜನೆಯಡಿ ವಿಶೇಷ ಅನುದಾನ ಪಡೆಯಲು ಪ್ರಸ್ತಾವಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಬಗ್ಗೆ ಬಜೆಟ್ ನಲ್ಲಿ ಹೇಳಲಾಗಿದೆ. ಅದನ್ನು ಕಳೆದ ವರ್ಷವೂ ಹೇಳಲಾಗಿತ್ತು. ಇಂಡಿ ತಾಲ್ಲೂಕಿನ ತಿಡಗುಂದಿ ಶಾಖಾ ಕಾಲುವೆಯ ಮೂಲಕ 16 ಕೆರೆಗಳ ಭರ್ತಿ ಯೋಜನೆ ಬೂದಿಹಾಳ-ಪೀರಾಪುರ ಯೋಜನೆಯ ವಿಸ್ತರಣೆ ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ಹೆರಕಲ್ ಏತ ನೀರಾವರಿ ಯೋಜನೆಯ ವಿಸ್ತರಣೆ ಕೆರೂರು-ಭಗವತಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಿಕೆ ಘೋಷಣೆ ಸದ್ಯಕ್ಕೆ ಖುಷಿ ತಂದಿದೆ. ಈಗಾಗಲೇ ಈ ಯೋಜನೆಗಳು ಕಾರ್ಯಾರಂಭಗೊಂಡಿವೆ. ಚಡಚಣ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವ ಭರವಸೆ ಬಜೆಟ್ನಲ್ಲಿ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಆಲಮಟ್ಟಿ ಜಲಾಶಯದ ಎತ್ತರದಿಂದ ಬಾಧಿತಗೊಳ್ಳುವ ಜಮೀನಿನ ಭೂಸ್ವಾಧೀನಕ್ಕೆ ಮೊದಲೇ ನಿಗದಿಪಡಿಸಿದ ದರವನ್ನೇ ಮತ್ತೇ ಬಜೆಟ್ ನಲ್ಲಿ ಪುನರುಚ್ಛಿಸಿದ್ದಾರೆಯೇ ಹೊರತು, ಅದಕ್ಕಾಗಿ ಪ್ರತ್ಯೇಕ ಅನುದಾನ ತೆಗೆದಿಟ್ಟಿಲ್ಲ.</p>.<p>ಮುಖ್ಯಮಂತ್ರಿಯವರು ಈ ಹಿಂದೆ ಪ್ರತ್ಯೇಕ ಅನುದಾನ ತೆಗೆದಿಡುವುದಾಗಿ ಹೇಳಿದ್ದರು. ಆದರೆ, ಬಜೆಟ್ ಘೋಷಣೆಯಾಗಿಲ್ಲ. ಇದರಿಂದಾಗಿ ಕೃಷ್ಣಾ ತೀರದ ಬಾಧಿತ ರೈತರಲ್ಲಿ ತೀವ್ರ ನಿರಾಶೆ ಹಾಗೂ ಅಸಮಾದಾನದ ಕಿಡಿ ಮೊಳಗಿದೆ. ಇದರಿಂದ ಯುಕೆಪಿ ಮೂರನೇ ಹಂತದ ಅನುಷ್ಠಾನಕ್ಕೆ ಹಿನ್ನಡೆ ಉಂಟಾಗಲಿದೆ.</p>.<p>ಆಲಮಟ್ಟಿ ಜಲಾಶಯದ ಈಗಿನ ಎತ್ತರ 519.60 ಮೀಟರ್ ನಿಂದ 524.256 ಮೀಟರ್ ಗೆ ಹೆಚ್ಚಳ ಮಾಡುವುದರಿಂದ ಜಲಾವೃತಗೊಳ್ಳುವ ಸುಮಾರು 75,563 ಎಕರೆ ಜಮೀನಿಗೆ ಏಕರೂಪದ ಪರಿಹಾರ ನಿಗದಿ ಮಾಡಿ ಮುಂದಿನ ಮೂರು ವರ್ಷಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದರು. ಅದು ಆದೇಶವಾಗಿಯೂ ರಾಜ್ಯಪತ್ರದಲ್ಲಿ ಈಗಾಗಲೇ ಪ್ರಕಟವೂ ಆಗಿತ್ತು. ಈಗ ಅದನ್ನೇ ಬಜೆಟ್ ನಲ್ಲಿ ಪುನರ್ ಘೋಷಿಸಿದ್ದಾರೆ. ಇದರಲ್ಲಿ ಯಾವುದೇ ಹೊಸತನವಿಲ್ಲ ಎನ್ನುತ್ತಾರೆ ರೈತ ಮುಖಂಡ ಅರವಿಂದ ಕುಲಕರ್ಣಿ.</p>.<p>ಬಜೆಟ್ ನಲ್ಲಿ ಭೂಸ್ವಾಧೀನದ ಅನುಷ್ಠಾನಕ್ಕೆ ಪ್ರತ್ಯೇಕ ಅನುದಾನ ಮೀಸಲಿರಿಸುವ ಭರವಸೆ ಹಾಗೂ ಬಾಧಿತ ರೈತರ ನಿರೀಕ್ಷೆ ಹುಸಿಯಾಗಿದೆ ಎಂದು ಕುಲಕರ್ಣಿ ಆತಂಕ ವ್ಯಕ್ತಪಡಿಸಿದರು.</p>.<p>ಭೂಸ್ವಾಧಿನಕ್ಕೆ ಜನರಲ್ ಅವಾರ್ಡ್ ಬದಲಿಗೆ ಒಪ್ಪಂದದ ಐ ತೀರ್ಪಿನ ಪ್ರಕಾರ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ನೀರಾವರಿ ಜಮೀನಿಗೆ ಎಕರೆಗೆ ₹ 40 ಲಕ್ಷ, ಖುಷ್ಕಿ ಜಮೀನಿಗೆ ಎಕರೆಗೆ ₹30 ಲಕ್ಷ ನೀಡುವುದಾಗಿ ತಿಳಿಸಿತ್ತು. ಅದಕ್ಕಾಗಿ ಬಹುತೇಕ ರೈತರು ಸರ್ಕಾರದ ನಿರ್ಧಾರವನ್ನು ಒಪ್ಪಿ ಜಮೀನು ಕೊಡಲು ಸಿದ್ಧರಾಗಿದ್ದರು.</p>.<p>ನಾಲ್ಕು ನೀರಾವರಿ ಮಂಡಳಿಗಳು ಸೇರಿ ಇಡೀ ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಸೇರಿ ₹22,181 ಕೋಟಿ ಹಂಚಿಕೆಯಾಗಿದೆ. ಅದರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಹೆಚ್ಚು ಕಡಿಮೆ ₹5000 ಕೋಟಿ ಆಸುಪಾಸುವರೆಗೆ ಹಂಚಿಕೆಯಾಗಬಹುದು. ಅದು ಕೇವಲ ಪ್ರಗತಿಯಲ್ಲಿರುವ ನೀರಾವರಿ ಯೋಜನೆ ಹಾಗೂ ಆಡಳಿತಾತ್ಮಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗುತ್ತದೆ. ಭೂಸ್ವಾಧೀನಕ್ಕೆ ಯಾವುದೇ ಪ್ರತ್ಯೇಕ ಅನುದಾನ ನೀಡಿಲ್ಲ ಎಂಬುದು ರೈತರ ಆರೋಪ.</p>.<p>ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಸುಮಾರು 27,000 ಕ್ಕೂ ಅಧಿಕ ರೈತರು ವಿವಿಧ ನ್ಯಾಯಾಲಯಗಳಿಗೆ ಮೊರೆಹೋಗಿದ್ದಾರೆ. ಅದಕ್ಕಾಗಿ ಬಾಗಲಕೋಟೆಯಲ್ಲಿ ಭೂಸ್ವಾಧೀನಕ್ಕಾಗಿಯೇ ಫಾಸ್ಟ್ ಟ್ರಾಕ್ ಕೋರ್ಟ್ ಸ್ಥಾಪಿಸುವುದಾಗಿ ಕಳೆದ ವರ್ಷದ ಬಜೆಟ್ ನಲ್ಲಿ ಘೋಷಿಸಿದ್ದರು. ಒಂದು ವರ್ಷವಾದರೂ ನೂತನ ಕೋರ್ಟ್ ಆರಂಭದ ಯಾವುದೇ ಸಿದ್ಧತೆಯೂ ಆಗಿಲ್ಲ. ಈಗ ಈ ವರ್ಷದ ಬಜೆಟ್ ನಲ್ಲಿಯೂ ಅದೇ ಘೋಷಣೆಯನ್ನು ಮಾಡಲಾಗಿದೆ. ಹೀಗಾಗಿ ಯಾವುದೇ ಹೊಸತನವಿಲ್ಲದ ಬಜೆಟ್ ಇದಾಗಿದೆ.</p>.<p>ಬಾಬಾನಗರ ಜಲಸಂಗ್ರಹಗಾರ: ಬಬಲೇಶ್ವರ ತಾಲ್ಲೂಕಿನ ಬಾಬಾನಗರ ಬಳಿ 0.67 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಸಂಗ್ರಹಗಾರ ಸ್ಥಾಪಿಸಲು ಬಜೆಟ್ನಲ್ಲಿ ಅನುಮೋದನೆ ನೀಡಲಾಗಿದೆ. ಇದರಿಂದ ತಿಕೋಟಾ ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿದೆ.</p>.<h2> ನೀರಾವರಿ ಯೋಜನೆ ಪೂರ್ಣ: ಭರವಸೆ</h2><p> ಇನ್ನೂ ರಾಮಥಾಳ ಬೂದಿಹಾಳ-ಪೀರಾಪುರ ತಿಮ್ಮಾಪುರ ನಂದವಾಡಗಿ ಸನ್ನತಿ ಏತ ನೀರಾವರಿ ಯೋಜನೆಗಳು ಪೂರ್ಣಗೊಂಡಿದ್ದು ಅವುಗಳ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರದ ಪಿಎಂಕೆಎಸ್ ವೈ-ಎಐಬಿಪಿ ಯೋಜನೆಯಡಿ ವಿಶೇಷ ಅನುದಾನ ಪಡೆಯಲು ಪ್ರಸ್ತಾವಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಬಗ್ಗೆ ಬಜೆಟ್ ನಲ್ಲಿ ಹೇಳಲಾಗಿದೆ. ಅದನ್ನು ಕಳೆದ ವರ್ಷವೂ ಹೇಳಲಾಗಿತ್ತು. ಇಂಡಿ ತಾಲ್ಲೂಕಿನ ತಿಡಗುಂದಿ ಶಾಖಾ ಕಾಲುವೆಯ ಮೂಲಕ 16 ಕೆರೆಗಳ ಭರ್ತಿ ಯೋಜನೆ ಬೂದಿಹಾಳ-ಪೀರಾಪುರ ಯೋಜನೆಯ ವಿಸ್ತರಣೆ ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ಹೆರಕಲ್ ಏತ ನೀರಾವರಿ ಯೋಜನೆಯ ವಿಸ್ತರಣೆ ಕೆರೂರು-ಭಗವತಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಿಕೆ ಘೋಷಣೆ ಸದ್ಯಕ್ಕೆ ಖುಷಿ ತಂದಿದೆ. ಈಗಾಗಲೇ ಈ ಯೋಜನೆಗಳು ಕಾರ್ಯಾರಂಭಗೊಂಡಿವೆ. ಚಡಚಣ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವ ಭರವಸೆ ಬಜೆಟ್ನಲ್ಲಿ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>