ವಿಜಯಪುರದಿಂದ ತಮ್ಮ ಊರು ಮುಳ್ಳಾಳಕ್ಕೆ ಬೈಕಿನಲ್ಲಿ ಇಬ್ಬರು ಯುವಕರು ಹೋಗುವಾಗ ಉಕ್ಕಿ ಹರಿಯುತ್ತಿದ್ದ ಹಳ್ಳವನ್ನು ಬೈಕ್ ತಳ್ಳಿಕೊಂಡು ದಾಟುವಾಗ ಪ್ರವಾಹಕ್ಕೆ ಸಿಲುಕಿದ್ದಾರೆ. ಬೈಕ್ ಸವಾರ ಇಮಾಮ್ ನದಾಫ್ ಪಾರಾಗಿದ್ದು, ಹಿಂಬದಿ ಸವಾರ ಮಂಜುನಾಥ ಪಾಟೀಲ(23) ಕೊಚ್ಚಿ ಹೋಗಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.