ರೈತರ ಹಿತ ಕಾಯಬೇಕು. ಲಿಂಬೆ ಬೆಳೆಯನ್ನು ರಾಜ್ಯದಾದ್ಯಂತ ಬೆಳೆಯುವಂತೆ ಮಾಡಬೇಕು ಹಾಗೂ ಉತ್ತಮ ಮಾರುಕಟ್ಟೆ ಒದಗಿಸಬೇಕು. ಲಿಂಬೆ ದೀರ್ಘಾವಧಿಯ ಬೆಳೆಯಾಗಿದ್ದು, ಇದಕ್ಕೆ ಯೋಗ್ಯ ಬೆಲೆ ಸಿಗುವಂತಾಗಬೇಕು. ಲಿಂಬೆ ಅಭಿವೃದ್ಧಿ ಮಂಡಳಿಯಿಂದ ರೈತರಿಗೆ ಹೊಸ ಹೊಸ ಸಂಶೋಧನೆಗಳ ಮೂಲಕ ಸಹಾಯ ಮಾಡಬೇಕಿದೆ. ವಿದೇಶಗಳಿಗೆ ಅತಿ ಹೆಚ್ಚು ಲಿಂಬೆ ರಪ್ತು ನಮ್ಮ ದೇಶದಿಂದಲೇ ನಡೆಯುತ್ತಿರುವುದು ಹೆಮ್ಮೆ ತರುವ ಸಂಗತಿ ಎಂದರು. ತಡವಲಗಾ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತಮ್ಮಣ್ಣ ಪೂಜಾರಿ ಮಾತನಾಡಿದರು. ಶಂಕರಗೌಡ ಬಿರಾದಾರ, ಸಂಬಾಜಿರಾವ ಮಿಸಾಳೆ, ಎಂ.ಡಿ.ಸಪ್ಪಂಡಿ, ಮಹಾಂತೇಶ ಪಟ್ಟಣಶೆಟ್ಟಿ, ಭೀಮಾಶಖರ ಮುರಗುಂಡಿಇದ್ದರು.