ಹಾರಾಡಿದ ಕನ್ನಡ ಬಾವುಟ: ಜತ್ ತಾಲ್ಲೂಕಿನ ತಿಕ್ಕುಂಡಿಯಲ್ಲಿ ಸಭೆ, ಪ್ರತಿಭಟನಾ ಜಾಥಾ ನಡೆಸಿರುವ ಕನ್ನಡಿಗರು, ಕನ್ನಡ ಬಾವುಟಗಳನ್ನು ಹಿಡಿದು ಕನ್ನಡ ಪರ ಘೋಷಣೆ ಹಾಕಿದ್ದಾರೆ. ಗ್ರಾಮ ಪಂಚಾಯಿತಿ ಕಟ್ಟಡ, ಸಾರ್ವಜನಿಕ ಕಟ್ಟಡಗಳ ಮೇಲೆ ಕನ್ನಡದ ಬಾವುಟ ಹಾರಿಸಿದ್ದಾರೆ. ಜೈ ಕರ್ನಾಟಕ ಎಂಬ ಬರಹ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರ, ಕರ್ನಾಟಕ ನಕ್ಷೆ ಒಳಗೊಂಡ ಫಲಕದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.
ಕನ್ನಡ, ಕರ್ನಾಟಕ ಪರ ಫಲಕ, ಬಾವುಟಗಳನ್ನು ಮಹಾರಾಷ್ಟ್ರ ಪೊಲೀಸರು ತೆರವುಗೊಳಿಸಿದ್ದಾರೆ.