<p><strong>ವಿಜಯಪುರ:</strong> ನಗರದ ನವರಸಪುರದ ಸುರಭಿ ಸಿದ್ದೇಶ್ವರ ಲೇಔಟ್ನಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಶಾಖಾ ಮಠದ ಭೂಮಿಪೂಜೆ ಕಾರ್ಯಕ್ರಮ ಶನಿವಾರ ರಾತ್ರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆಯಿತು.</p>.<p>ರಂಭಾಪುರಿ ಪೀಠದ ಶಾಖಾ ಮಠದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, ‘ವೀರಶೈವ- ಲಿಂಗಾಯತರ ಆಚರಣೆಗಳಲ್ಲಿ ವ್ಯತ್ಯಾಸಗಳಿದ್ದರೂ ಗುರಿ ಸ್ಪಷ್ಟವಾಗಿದೆ. ಒಬ್ಬರು ಮಾನವ ಧರ್ಮಕ್ಕೆ ಜಯವಾಗಲಿ ಎಂದರೆ ಇನ್ನೊಬ್ಬರು ದಯವೇ ಧರ್ಮದ ಮೂಲ ಮತ್ತು ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ನಂಬಿಕೆಯನ್ನಿರಿಸಿದ್ದಾರೆ. ಹೀಗಾಗಿ ವ್ಯತ್ಯಾಸ ಏನೇ ಇದ್ದರೂ ಸಾಮಾನ್ಯ ತತ್ವದಡಿ ವೀರಶೈವ-ಲಿಂಗಾಯತರು ಒಂದಾಗಬೇಕು’ ಎಂದು ಹೇಳಿದರು.</p>.<p>‘ನಾಡಿಗೆ ನಮ್ಮ ಮಠಮಾನ್ಯಗಳ ಕೊಡುಗೆ ಅಪಾರ. ಕಾಯಕ, ಶಿಕ್ಷಣ, ದಾಸೋಹದ ಪರಿಕಲ್ಪನೆ ಕೊಟ್ಟವರು ಶರಣರು. ವೀರಶೈವ-ಲಿಂಗಾಯತ ಎಂಬುದು ಶ್ರೇಷ್ಠ ಪರಂಪರೆ’ ಎಂದರು.</p>.<p>‘ವೀರಶೈವ ಲಿಂಗಾಯತದ ಉಪ ಪಂಗಡಗಳು ಬೇರೆ ಬೇರೆ ಪ್ರವರ್ಗಗಳಲ್ಲಿವೆ. ಎಲ್ಲ ಉಪ ಪಂಗಡಗಳಲ್ಲಿಯೂ ಬಡವರಿದ್ದಾರೆ. ಜಂಗಮ, ಬಣಜಿಗ, ಗಾಣಿಗ, ಪಂಚಮಸಾಲಿ ಸೇರಿದಂತೆ ಅನೇಕ ಉಪ ಪಂಗಡಗಳಲ್ಲಿರುವ ಬಡವರಿಗೆ ಉದ್ಯೋಗದಲ್ಲಿ ಮೀಸಲಾತಿ ಅವಶ್ಯಕತೆ ಇದೆ’ ಎಂದು ಹೇಳಿದರು.</p>.<p>‘ಹಿಂದೆ ಲಿಂಗಾಯತ ಸಮುದಾಯದ 85 ಶಾಸಕರಿದ್ದೆವು. ಬಳ್ಳಾರಿ, ರಾಯಚೂರು ಮತ್ತಿತರ ಕಡೆ ಎಸ್ಟಿ ಮೀಸಲು ಬಂದಿದ್ದರಿಂದ ನಮ್ಮ ಪ್ರಮಾಣ ಕಡಿಮೆಯಾಯಿತು. ನಮ್ಮಲ್ಲೂ ಬಡವರಿದ್ದಾರೆ. ಹೀಗಾಗಿ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಶ್ರಮಿಸೋಣ’ ಎಂದು ತಿಳಿಸಿದರು.</p>.<p>ಪಂಚಮಸಾಲಿ ಸಮಾಜದ ಮಹಾದೇವ ಶಿವಾಚಾರ್ಯರು, ಸಿಂದಗಿ ಸಾರಂಗ ಮಠದ ಪ್ರಭು ಸಾರಂಗದೇವ ಶಿವಾಚಾರ್ಯರು, ಯರನಾಳದ ಸಂಗನಬಸವ ಸ್ವಾಮೀಜಿ, ಕೋಲ್ಹಾರದ ಕಲ್ಲಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಮಾಜಿ ಶಾಸಕ ರಾಜು ಆಲಗೂರ, ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಆಳಂದ ಶಾಸಕ ಬಿ.ಆರ್. ಪಾಟೀಲ, ಮಾಜಿ ಪೊಲೀಸ್ ಅಧಿಕಾರಿ ಚೌಕಿಮಠ, ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ, ಬಿಎಲ್ಡಿಇ ಸಂಸ್ಥೆ ಕುಲಪತಿ ಬಸನಗೌಡ ಎಂ. ಪಾಟೀಲ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮಾಜಿ ಸಚಿವ ಸೊಗಡು ಶಿವಣ್ಣ ಇದ್ದರು.</p>.<div><blockquote>ಪಂಚಪೀಠಗಳು ವಿರಕ್ತಮಠಗಳಲ್ಲಿ ವ್ಯತ್ಯಾಸ ಇರಬಹುದು. ಮಠಾಧೀಶರು ಒಂದಾದರೆ ನಮ್ಮ ಸಮಸ್ಯೆ ಬಗೆಹರಿಯಲಿದೆ. ಜನರ ಏಳಿಗೆಗಾಗಿ ಸಾಮಾನ್ಯ ತತ್ವದಡಿ ಒಂದಾದರೆ ಎಲ್ಲರೂ ನೆಮ್ಮದಿಯಾಗಿರಬಹುದು </blockquote><span class="attribution">ಎಂ.ಬಿ. ಪಾಟೀಲ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ನಗರದ ನವರಸಪುರದ ಸುರಭಿ ಸಿದ್ದೇಶ್ವರ ಲೇಔಟ್ನಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಶಾಖಾ ಮಠದ ಭೂಮಿಪೂಜೆ ಕಾರ್ಯಕ್ರಮ ಶನಿವಾರ ರಾತ್ರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆಯಿತು.</p>.<p>ರಂಭಾಪುರಿ ಪೀಠದ ಶಾಖಾ ಮಠದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, ‘ವೀರಶೈವ- ಲಿಂಗಾಯತರ ಆಚರಣೆಗಳಲ್ಲಿ ವ್ಯತ್ಯಾಸಗಳಿದ್ದರೂ ಗುರಿ ಸ್ಪಷ್ಟವಾಗಿದೆ. ಒಬ್ಬರು ಮಾನವ ಧರ್ಮಕ್ಕೆ ಜಯವಾಗಲಿ ಎಂದರೆ ಇನ್ನೊಬ್ಬರು ದಯವೇ ಧರ್ಮದ ಮೂಲ ಮತ್ತು ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ನಂಬಿಕೆಯನ್ನಿರಿಸಿದ್ದಾರೆ. ಹೀಗಾಗಿ ವ್ಯತ್ಯಾಸ ಏನೇ ಇದ್ದರೂ ಸಾಮಾನ್ಯ ತತ್ವದಡಿ ವೀರಶೈವ-ಲಿಂಗಾಯತರು ಒಂದಾಗಬೇಕು’ ಎಂದು ಹೇಳಿದರು.</p>.<p>‘ನಾಡಿಗೆ ನಮ್ಮ ಮಠಮಾನ್ಯಗಳ ಕೊಡುಗೆ ಅಪಾರ. ಕಾಯಕ, ಶಿಕ್ಷಣ, ದಾಸೋಹದ ಪರಿಕಲ್ಪನೆ ಕೊಟ್ಟವರು ಶರಣರು. ವೀರಶೈವ-ಲಿಂಗಾಯತ ಎಂಬುದು ಶ್ರೇಷ್ಠ ಪರಂಪರೆ’ ಎಂದರು.</p>.<p>‘ವೀರಶೈವ ಲಿಂಗಾಯತದ ಉಪ ಪಂಗಡಗಳು ಬೇರೆ ಬೇರೆ ಪ್ರವರ್ಗಗಳಲ್ಲಿವೆ. ಎಲ್ಲ ಉಪ ಪಂಗಡಗಳಲ್ಲಿಯೂ ಬಡವರಿದ್ದಾರೆ. ಜಂಗಮ, ಬಣಜಿಗ, ಗಾಣಿಗ, ಪಂಚಮಸಾಲಿ ಸೇರಿದಂತೆ ಅನೇಕ ಉಪ ಪಂಗಡಗಳಲ್ಲಿರುವ ಬಡವರಿಗೆ ಉದ್ಯೋಗದಲ್ಲಿ ಮೀಸಲಾತಿ ಅವಶ್ಯಕತೆ ಇದೆ’ ಎಂದು ಹೇಳಿದರು.</p>.<p>‘ಹಿಂದೆ ಲಿಂಗಾಯತ ಸಮುದಾಯದ 85 ಶಾಸಕರಿದ್ದೆವು. ಬಳ್ಳಾರಿ, ರಾಯಚೂರು ಮತ್ತಿತರ ಕಡೆ ಎಸ್ಟಿ ಮೀಸಲು ಬಂದಿದ್ದರಿಂದ ನಮ್ಮ ಪ್ರಮಾಣ ಕಡಿಮೆಯಾಯಿತು. ನಮ್ಮಲ್ಲೂ ಬಡವರಿದ್ದಾರೆ. ಹೀಗಾಗಿ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಶ್ರಮಿಸೋಣ’ ಎಂದು ತಿಳಿಸಿದರು.</p>.<p>ಪಂಚಮಸಾಲಿ ಸಮಾಜದ ಮಹಾದೇವ ಶಿವಾಚಾರ್ಯರು, ಸಿಂದಗಿ ಸಾರಂಗ ಮಠದ ಪ್ರಭು ಸಾರಂಗದೇವ ಶಿವಾಚಾರ್ಯರು, ಯರನಾಳದ ಸಂಗನಬಸವ ಸ್ವಾಮೀಜಿ, ಕೋಲ್ಹಾರದ ಕಲ್ಲಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಮಾಜಿ ಶಾಸಕ ರಾಜು ಆಲಗೂರ, ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಆಳಂದ ಶಾಸಕ ಬಿ.ಆರ್. ಪಾಟೀಲ, ಮಾಜಿ ಪೊಲೀಸ್ ಅಧಿಕಾರಿ ಚೌಕಿಮಠ, ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ, ಬಿಎಲ್ಡಿಇ ಸಂಸ್ಥೆ ಕುಲಪತಿ ಬಸನಗೌಡ ಎಂ. ಪಾಟೀಲ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮಾಜಿ ಸಚಿವ ಸೊಗಡು ಶಿವಣ್ಣ ಇದ್ದರು.</p>.<div><blockquote>ಪಂಚಪೀಠಗಳು ವಿರಕ್ತಮಠಗಳಲ್ಲಿ ವ್ಯತ್ಯಾಸ ಇರಬಹುದು. ಮಠಾಧೀಶರು ಒಂದಾದರೆ ನಮ್ಮ ಸಮಸ್ಯೆ ಬಗೆಹರಿಯಲಿದೆ. ಜನರ ಏಳಿಗೆಗಾಗಿ ಸಾಮಾನ್ಯ ತತ್ವದಡಿ ಒಂದಾದರೆ ಎಲ್ಲರೂ ನೆಮ್ಮದಿಯಾಗಿರಬಹುದು </blockquote><span class="attribution">ಎಂ.ಬಿ. ಪಾಟೀಲ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>