<p>ಮುದ್ದೇಬಿಹಾಳ: ಸ್ವಂತ ಪ್ರಯತ್ನದ ಮೇಲೆ ಬೀರಲಿಂಗೇಶ್ವರ ಮತ್ತು ಕಾಡಸಿದ್ದೇಶ್ವರ ಗುಡಿಗಳನ್ನು ಕಟ್ಟಿರುವುದು ಪ್ರಶಂಸನೀಯ. ವೈಭವದಿಂದ ಜಾತ್ರೆ, ಸರ್ವಧರ್ಮದ ಸಭೆ ಹಾಗೂ ಉಚಿತ ಸಾಮೂಹಿಕ ವಿವಾಹ ಆಯೋಜಿಸಿರುವುದು ಸ್ವಾಗತಾರ್ಹ ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.</p>.<p>ತಾಲ್ಲೂಕಿನ ಖಿಲಾರಹಟ್ಟಿಯಲ್ಲಿ ಈಚೆಗೆ ನಡೆದ ಜಾತ್ರೆ, ಸಾಮೂಹಿಕ ವಿವಾಹ, ಧರ್ಮಸಭೆಯಲ್ಲಿ ಮಾತನಾಡಿದರು.</p>.<p>ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ 22 ಜೋಡಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.</p>.<p>ಕಾರ್ಯಕ್ರಮದ ರೂವಾರಿ ಮಲ್ಲಿಕಾರ್ಜುನ ಎನ್. ಮದರಿ, ಸಮಾಜ ಸೇವಕ ಶಾಂತಗೌಡ ಪಾಟೀಲ ಮಾತನಾಡಿ, ‘ನಾವು ನಮ್ಮ ಸ್ವಂತ ಬಲದ ಮೇಲೆ ಬೆಳೆಯಬೇಕು. ಯಾರನ್ನೂ ಯಾರೂ ಬೆಳೆಸುವುದಿಲ್ಲ’ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ, ರೇವಣಸಿದ್ದೇಶ್ವರ ಅಗತೀರ್ಥ ಸ್ವಾಮೀಜಿ, ಖಾಸ್ಗತ ಸಿದ್ಧಲಿಂಗ ದೇವರು, ಮಲ್ಲಾಲಿಂಗ್ ಮಹಾರಾಜರು ಆಶೀರ್ವಚನ ನೀಡಿದರು.</p>.<p>ವಿವಿಧ ಸ್ವಾಮೀಜಿಗಳು, ಮುಖಂಡರಾದ ಗಂಗಾಧರ ನಾಡಗೌಡ, ಬಿ.ಜಿ.ಜಗ್ಗಲ್, ಬಿ.ಕೆ.ಬಿರಾದಾರ, ಕೆಂಚಪ್ಪ ಬಿರಾದಾರ, ವೈ.ಎಚ್.ವಿಜಯಕರ, ಸಂಗಮ್ಮ ದೇವರಳ್ಳಿ, ಕಿರಣ ಮದರಿ, ಮಲ್ಲು ಅಪರಾಧಿ ಸೇರಿದಂತೆ ನೂತನ ವಧು ವರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-26-181879417</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುದ್ದೇಬಿಹಾಳ: ಸ್ವಂತ ಪ್ರಯತ್ನದ ಮೇಲೆ ಬೀರಲಿಂಗೇಶ್ವರ ಮತ್ತು ಕಾಡಸಿದ್ದೇಶ್ವರ ಗುಡಿಗಳನ್ನು ಕಟ್ಟಿರುವುದು ಪ್ರಶಂಸನೀಯ. ವೈಭವದಿಂದ ಜಾತ್ರೆ, ಸರ್ವಧರ್ಮದ ಸಭೆ ಹಾಗೂ ಉಚಿತ ಸಾಮೂಹಿಕ ವಿವಾಹ ಆಯೋಜಿಸಿರುವುದು ಸ್ವಾಗತಾರ್ಹ ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.</p>.<p>ತಾಲ್ಲೂಕಿನ ಖಿಲಾರಹಟ್ಟಿಯಲ್ಲಿ ಈಚೆಗೆ ನಡೆದ ಜಾತ್ರೆ, ಸಾಮೂಹಿಕ ವಿವಾಹ, ಧರ್ಮಸಭೆಯಲ್ಲಿ ಮಾತನಾಡಿದರು.</p>.<p>ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ 22 ಜೋಡಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.</p>.<p>ಕಾರ್ಯಕ್ರಮದ ರೂವಾರಿ ಮಲ್ಲಿಕಾರ್ಜುನ ಎನ್. ಮದರಿ, ಸಮಾಜ ಸೇವಕ ಶಾಂತಗೌಡ ಪಾಟೀಲ ಮಾತನಾಡಿ, ‘ನಾವು ನಮ್ಮ ಸ್ವಂತ ಬಲದ ಮೇಲೆ ಬೆಳೆಯಬೇಕು. ಯಾರನ್ನೂ ಯಾರೂ ಬೆಳೆಸುವುದಿಲ್ಲ’ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ, ರೇವಣಸಿದ್ದೇಶ್ವರ ಅಗತೀರ್ಥ ಸ್ವಾಮೀಜಿ, ಖಾಸ್ಗತ ಸಿದ್ಧಲಿಂಗ ದೇವರು, ಮಲ್ಲಾಲಿಂಗ್ ಮಹಾರಾಜರು ಆಶೀರ್ವಚನ ನೀಡಿದರು.</p>.<p>ವಿವಿಧ ಸ್ವಾಮೀಜಿಗಳು, ಮುಖಂಡರಾದ ಗಂಗಾಧರ ನಾಡಗೌಡ, ಬಿ.ಜಿ.ಜಗ್ಗಲ್, ಬಿ.ಕೆ.ಬಿರಾದಾರ, ಕೆಂಚಪ್ಪ ಬಿರಾದಾರ, ವೈ.ಎಚ್.ವಿಜಯಕರ, ಸಂಗಮ್ಮ ದೇವರಳ್ಳಿ, ಕಿರಣ ಮದರಿ, ಮಲ್ಲು ಅಪರಾಧಿ ಸೇರಿದಂತೆ ನೂತನ ವಧು ವರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-26-181879417</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>