<p><strong>ಮುದ್ದೇಬಿಹಾಳ:</strong> ನೋಂದಣಿ ಇಲಾಖೆಯಿಂದ ಪೇಪರ್ ಲೆಸ್ ವ್ಯವಸ್ಥೆ ಜನರಿಗೆ ತಂದಿರುವುದನ್ನು ಖಂಡಿಸಿ ದಸ್ತು ಬರಹಗಾರರು ಬುಧವಾರ ತಹಶೀಲ್ದಾರ್ ಕೀರ್ತಿ ಚಾಲಕ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.</p>.<p>‘ನಾವು ಸರ್ಕಾರದಿಂದ ಪರವಾನಗಿ ಪಡೆದು ಶತಮಾನದಿಂದ ಈ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ. ಆದರೆ ಸರ್ಕಾರ ಕಾವೇರಿ 2.0 ಮೂಲಕ ನೋಂದಣಿ ಇಲಾಖೆಯಲ್ಲಿ ಹಲವು ಬದಲಾವಣೆ ತಂದಿದೆ. ನಾವು ಟೈಪರೈಟಿಂಗ್, ಗಣಕೀಕರಣ ಮಾಡುತ್ತ ಬಂದಿದ್ದೇವೆ. ಸರ್ಕಾರಕ್ಕೆ ಕಂದಾಯ ಸಂಗ್ರಹ ವಾಗಲು ನಾವು ಪ್ರಮುಖ ಪಾತ್ರ ವಹಿಸುತ್ತೇವೆ. ಮುದ್ದೇಬಿಹಾಳ ತಾಲ್ಲೂಕಿನಿಂದ ಈ ವರ್ಷ ₹ 2ಕೋಟಿ ಹಣವನ್ನು ಸಂಗ್ರಹ ಮಾಡಿ ಕೊಟ್ಟಿದ್ದೇವೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅದೊಮ್ಮೆ ಕೈ ಕೊಟ್ಟರೆ ಎಲ್ಲ ದಾಖಲೆಗಳು ನಾಶ ಆಗುವ ಸಾಧ್ಯತೆ ಇರುತ್ತವೆ. ಈ ಪೇಪರ್ ಲೆಸ್ ವ್ಯವಸ್ಥೆ ಜಾರಿಗೆ ತರಲು ಹೊರಟಿರುವುದನ್ನು ಸರ್ಕಾರ ಹಿಂಪಡೆಯಬೇಕು. ಭೂ ಮಾಪಕರಿಗೆ ನೀಡುವ ಲಾಗಿನ್ ನಂತೆ ನಮಗೂ ಪ್ರತ್ಯೇಕ ಲಾಗಿನ್ ನೀಡಬೇಕು’ ಎಂದು ಒಂದು ದಿನದ ಲೇಖನಿ ಸ್ಥಗಿತಗೊಳಿಸಿ ಮನವಿ ಸಲ್ಲಿಸಿದರು.</p>.<p>ಮುದ್ದೇಬಿಹಾಳ ತಾಳಿಕೋಟಿ ತಾಲ್ಲೂಕಿನಲ್ಲಿದೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕೃತ ಪರವಾನಗಿ ಪಡೆದ ದಸ್ತುಬರಹಗಾರರ ಚಾರಿಟೇಬಲ್ ಟ್ರಸ್ಟ್ ಮುದ್ದೇಬಿಹಾಳ ಘಟಕದ ಪದಾಧಿಕಾರಿಗಳಾದ ಎಚ್.ಆರ್.ಬಾಗವಾನ, ರಾಜು ಜೋಳದ, ಆರ್.ಎಸ್. ಶಂಕಿನ್, ಎಚ್.ಎಸ್. ನಾಯ್ಕೋಡಿ, ಎಂ.ಎ. ಮುಲ್ಲಾ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-26-2026342504</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ:</strong> ನೋಂದಣಿ ಇಲಾಖೆಯಿಂದ ಪೇಪರ್ ಲೆಸ್ ವ್ಯವಸ್ಥೆ ಜನರಿಗೆ ತಂದಿರುವುದನ್ನು ಖಂಡಿಸಿ ದಸ್ತು ಬರಹಗಾರರು ಬುಧವಾರ ತಹಶೀಲ್ದಾರ್ ಕೀರ್ತಿ ಚಾಲಕ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.</p>.<p>‘ನಾವು ಸರ್ಕಾರದಿಂದ ಪರವಾನಗಿ ಪಡೆದು ಶತಮಾನದಿಂದ ಈ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ. ಆದರೆ ಸರ್ಕಾರ ಕಾವೇರಿ 2.0 ಮೂಲಕ ನೋಂದಣಿ ಇಲಾಖೆಯಲ್ಲಿ ಹಲವು ಬದಲಾವಣೆ ತಂದಿದೆ. ನಾವು ಟೈಪರೈಟಿಂಗ್, ಗಣಕೀಕರಣ ಮಾಡುತ್ತ ಬಂದಿದ್ದೇವೆ. ಸರ್ಕಾರಕ್ಕೆ ಕಂದಾಯ ಸಂಗ್ರಹ ವಾಗಲು ನಾವು ಪ್ರಮುಖ ಪಾತ್ರ ವಹಿಸುತ್ತೇವೆ. ಮುದ್ದೇಬಿಹಾಳ ತಾಲ್ಲೂಕಿನಿಂದ ಈ ವರ್ಷ ₹ 2ಕೋಟಿ ಹಣವನ್ನು ಸಂಗ್ರಹ ಮಾಡಿ ಕೊಟ್ಟಿದ್ದೇವೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅದೊಮ್ಮೆ ಕೈ ಕೊಟ್ಟರೆ ಎಲ್ಲ ದಾಖಲೆಗಳು ನಾಶ ಆಗುವ ಸಾಧ್ಯತೆ ಇರುತ್ತವೆ. ಈ ಪೇಪರ್ ಲೆಸ್ ವ್ಯವಸ್ಥೆ ಜಾರಿಗೆ ತರಲು ಹೊರಟಿರುವುದನ್ನು ಸರ್ಕಾರ ಹಿಂಪಡೆಯಬೇಕು. ಭೂ ಮಾಪಕರಿಗೆ ನೀಡುವ ಲಾಗಿನ್ ನಂತೆ ನಮಗೂ ಪ್ರತ್ಯೇಕ ಲಾಗಿನ್ ನೀಡಬೇಕು’ ಎಂದು ಒಂದು ದಿನದ ಲೇಖನಿ ಸ್ಥಗಿತಗೊಳಿಸಿ ಮನವಿ ಸಲ್ಲಿಸಿದರು.</p>.<p>ಮುದ್ದೇಬಿಹಾಳ ತಾಳಿಕೋಟಿ ತಾಲ್ಲೂಕಿನಲ್ಲಿದೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕೃತ ಪರವಾನಗಿ ಪಡೆದ ದಸ್ತುಬರಹಗಾರರ ಚಾರಿಟೇಬಲ್ ಟ್ರಸ್ಟ್ ಮುದ್ದೇಬಿಹಾಳ ಘಟಕದ ಪದಾಧಿಕಾರಿಗಳಾದ ಎಚ್.ಆರ್.ಬಾಗವಾನ, ರಾಜು ಜೋಳದ, ಆರ್.ಎಸ್. ಶಂಕಿನ್, ಎಚ್.ಎಸ್. ನಾಯ್ಕೋಡಿ, ಎಂ.ಎ. ಮುಲ್ಲಾ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-26-2026342504</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>