ಭವಿಷ್ಯತ್ತಿನ ಮಕ್ಕಳಿಗೆ ಎಲ್ಲ ರೀತಿಯ ಕ್ರೀಡೆಗೆ ಸುಸಜ್ಜಿತ ವ್ಯವಸ್ಥೆ ಆಗಬೇಕು, ಒಳಾಂಗಣ ಕ್ರೀಡಾಂಗಣ ಮಾಡಬೇಕು, ಇಲ್ಲಿ ಹೆಚ್ಚಿನ ಜಾಗ ಇರುವುದರಿಂದ ಎಲ್ಲವನ್ನೂ ಬಳಸಿಕೊಂಡು ಎಲ್ಲಾ ಕ್ರೀಡೆಗಳು ನಡೆಯುವಂತ ದೊಡ್ಡ ಕ್ರೀಡಾಂಗಣ ನಿರ್ಮಾಣವಾಗಬೇಕು
ಕಾಮರಾಜ ಬಿರಾದಾರ, ಮಾಜಿ ಕ್ರೀಡಾಪಟು, ಮುದ್ದೇಬಿಹಾಳ
ಬಹು ಹಳ್ಳಿಗಳಿಂದ ಕೂಡಿದ ತಾಲ್ಲೂಕು ನಮ್ಮದಾಗಿದೆ ಪ್ರತಿಭಾವಂತ ಬಡ ಕ್ರೀಡಾಪಟುಗಳು ಇದ್ದಾರೆ, ಕನಿಷ್ಟ400 ಮೀಟರ್ ಮೈದಾನ ಇರಬೇಕು, ಎಲ್ಲ ರೀತಿಯ ಕ್ರೀಡೆಗಳನ್ನು ಆಡಿಸಲು ಅನುಕೂಲ ಆಗುವಂತೆ ನಿರ್ಮಾಣ ಆಗಬೇಕು
ಶೇಖರಪ್ಪ ಲಮಾಣಿ, ಅಧ್ಯಕ್ಷ,ದೈಹಿಕ ಶಿಕ್ಷಕರ ಸಂಘ
ಮೊದಲಿಗೆ ₹25 ಲಕ್ಷ ಮೈದಾನ ಸಮತಟ್ಟು ಮಾಡಲಿಕ್ಕೆ ಬಿಡುಗಡೆ ಮಾಡಿದ್ದು, ಸದ್ಯ ₹2.5 ಕೋಟಿ ಮಂಜೂರು ಆಗಿದ್ದು ಅದರಲ್ಲಿ ₹1.70 ಕೋಟಿ ಕಾಮಗಾರಿಗೆ ಬಳಸುತ್ತಿದ್ದಾರೆ. ಮುಂದೆ ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ
ರಾಜಶೇಖರ ದೈವಾಡಿ, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ