<p><strong>ಮುದ್ದೇಬಿಹಾಳ: ‘</strong>ಕೃಷಿ, ಕೈಗಾರಿಕೆ ಪ್ರಮುಖ ಕ್ಷೇತ್ರಗಳಾಗಿದ್ದು, ದೇಶದ ಅಭಿವೃದ್ದಿಯಲ್ಲಿ ಇವುಗಳ ಕೊಡುಗೆ ಪ್ರಧಾನವಾಗಿದೆ’ ಎಂದು ರಾಜ್ಯ ಖಾಸಗಿ ಐಟಿಐಗಳ ಸಂಘದ ಅಧ್ಯಕ ಎಸ್.ಎಂ.ನೆರಬೆಂಚಿ ಹೇಳಿದರು.</p>.<p>ಪಟ್ಟಣದ ಬಾಪೂಜಿ ವಿದ್ಯಾಸಂಸ್ಥೆಯ ಬಿ.ಬಿ.ಆರ್ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಹಾಗೂ ಟೊಯೊಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪನಿ ಸಹಯೋಗದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ ಅಭ್ಯರ್ಥಿಗಳಿಗೆ ಈಚೆಗೆ ಏರ್ಪಡಿಸಿದ್ದ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಐಟಿಐ ಕಲಿತವರಿಗೆ ನಿರುದ್ಯೋಗದ ಸಮಸ್ಯೆ ಇರುವುದಿಲ್ಲ. ಇವರಿಗೆ ಸರ್ಕಾರಿ, ಎಂಎನ್ಸಿ ಹಾಗೂ ಇತರೆ ಕಂಪನಿಗಳಲ್ಲಿ ಬಹಳಷ್ಟು ಬೇಡಿಕೆ ಇದೆ. ಹಾಗಾಗಿ ಯುವಕರು ಹೆಚ್ಚು ಹೆಚ್ಚು ಐಟಿಐ ಕೋರ್ಸ್ಗಳನ್ನು ಕಲಿತು ಉದ್ಯೋಗವಂತರಾಗಬೇಕು’ ಎಂದು ಹೇಳಿದರು.</p>.<p>ರೈತ ಸಂಘದ ಮುಖಂಡ ಸಂಗಣ್ಣ ಬಾಗೇವಾಡಿ, ಅಂಜುಮನ್ ಐಟಿಐ ಪ್ರಾಚಾರ್ಯ ಎಂ.ಎಸ್.ಕಡು, ರೈತ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಎಲ್. ಬಿರಾದಾರ, ಕಾರ್ಯದರ್ಶಿ ದ್ಯಾಮಣ್ಣ ವಡವಡಗಿ, ಹಾರ್ವರ್ಡ್ ಪಿಯು ಕಾಲೇಜ ಪ್ರಾಚಾರ್ಯೆ ರಾಜಶ್ರೀ ರೂಡಗಿ, ಶಿವಪ್ರಸಾದ ಸೂಳಿಭಾವಿ ಇದ್ದರು.</p>.<p>ಟೊಯೊಟಾ ಕಿರ್ಲೊಸ್ಕರ್ ಮೋಟರ್ಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಾಗವೇಣಿ ಹಾಗೂ ಮಂಜುನಾಥ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಿದರು. ವಿವಿಧ ಐಟಿಐಗಳಿಂದ ಸುಮಾರು 50 ಅಭ್ಯರ್ಥಿಗಳಲ್ಲಿ 35 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ: ‘</strong>ಕೃಷಿ, ಕೈಗಾರಿಕೆ ಪ್ರಮುಖ ಕ್ಷೇತ್ರಗಳಾಗಿದ್ದು, ದೇಶದ ಅಭಿವೃದ್ದಿಯಲ್ಲಿ ಇವುಗಳ ಕೊಡುಗೆ ಪ್ರಧಾನವಾಗಿದೆ’ ಎಂದು ರಾಜ್ಯ ಖಾಸಗಿ ಐಟಿಐಗಳ ಸಂಘದ ಅಧ್ಯಕ ಎಸ್.ಎಂ.ನೆರಬೆಂಚಿ ಹೇಳಿದರು.</p>.<p>ಪಟ್ಟಣದ ಬಾಪೂಜಿ ವಿದ್ಯಾಸಂಸ್ಥೆಯ ಬಿ.ಬಿ.ಆರ್ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಹಾಗೂ ಟೊಯೊಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪನಿ ಸಹಯೋಗದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ ಅಭ್ಯರ್ಥಿಗಳಿಗೆ ಈಚೆಗೆ ಏರ್ಪಡಿಸಿದ್ದ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಐಟಿಐ ಕಲಿತವರಿಗೆ ನಿರುದ್ಯೋಗದ ಸಮಸ್ಯೆ ಇರುವುದಿಲ್ಲ. ಇವರಿಗೆ ಸರ್ಕಾರಿ, ಎಂಎನ್ಸಿ ಹಾಗೂ ಇತರೆ ಕಂಪನಿಗಳಲ್ಲಿ ಬಹಳಷ್ಟು ಬೇಡಿಕೆ ಇದೆ. ಹಾಗಾಗಿ ಯುವಕರು ಹೆಚ್ಚು ಹೆಚ್ಚು ಐಟಿಐ ಕೋರ್ಸ್ಗಳನ್ನು ಕಲಿತು ಉದ್ಯೋಗವಂತರಾಗಬೇಕು’ ಎಂದು ಹೇಳಿದರು.</p>.<p>ರೈತ ಸಂಘದ ಮುಖಂಡ ಸಂಗಣ್ಣ ಬಾಗೇವಾಡಿ, ಅಂಜುಮನ್ ಐಟಿಐ ಪ್ರಾಚಾರ್ಯ ಎಂ.ಎಸ್.ಕಡು, ರೈತ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಎಲ್. ಬಿರಾದಾರ, ಕಾರ್ಯದರ್ಶಿ ದ್ಯಾಮಣ್ಣ ವಡವಡಗಿ, ಹಾರ್ವರ್ಡ್ ಪಿಯು ಕಾಲೇಜ ಪ್ರಾಚಾರ್ಯೆ ರಾಜಶ್ರೀ ರೂಡಗಿ, ಶಿವಪ್ರಸಾದ ಸೂಳಿಭಾವಿ ಇದ್ದರು.</p>.<p>ಟೊಯೊಟಾ ಕಿರ್ಲೊಸ್ಕರ್ ಮೋಟರ್ಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಾಗವೇಣಿ ಹಾಗೂ ಮಂಜುನಾಥ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಿದರು. ವಿವಿಧ ಐಟಿಐಗಳಿಂದ ಸುಮಾರು 50 ಅಭ್ಯರ್ಥಿಗಳಲ್ಲಿ 35 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>