<p><strong>ನಾಲತವಾಡ:</strong> ರಂಜಾನ್ ಎಂದರೆ ಕೇವಲ ಉಪವಾಸದ ತಿಂಗಳು ಮಾತ್ರವಲ್ಲ; ಇದು ದಾನ, ಧರ್ಮ, ಸಹನೆ ಮತ್ತು ಪರಸ್ಪರ ಸಹಾಯದ ಮಹತ್ವವನ್ನು ಸಾರುವ ಪವಿತ್ರ ಕಾಲವಾಗಿದೆ. ಈ ಸಮಯದಲ್ಲಿ ಹಸಿದವರಿಗೆ ಅನ್ನ ನೀಡುವುದು ಮತ್ತು ಬಡವರಿಗೆ ನೆರವಾಗುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪೃಥ್ವಿರಾಜ್ ನಾಡಗೌಡ ಹೇಳಿದರು.</p>.<p>ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಗುರುವಾರ ಸಂಜೆ ರಂಜಾನ್ ಹಬ್ಬದ ಅಂಗವಾಗಿ ಬಡವರಿಗೆ ದಿನಸಿ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಅಂಜುಮನ್ ಅಧ್ಯಕ್ಷ ಲಾಳೆಮಶಾಕ ಅವಟಿ ಮಾತನಾಡಿ, ನಮ್ಮ ಭಾಗದ ದಾನಶೀಲರಾದ ಬಾಪುಸಾಹೇಬ ದೇಶಮುಖ ಹಾಗೂ ಪೃಥ್ವಿರಾಜ್ ನಾಡಗೌಡ ಅವರು ಸುಮಾರು 85 ಬಡ ಕುಟುಂಬಗಳಿಗೆ ರಂಜಾನ್ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಈ ಇಬ್ಬರು ಸದಾ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಶ್ಲಾಘಿಸಿದರು.</p>.<p>ಅಂಜುಮನ್ ಸದಸ್ಯ ಮೌಲಾಸಾಬ ರಕ್ಕಸಗಿ ಮಾತನಾಡಿ, ರಂಜಾನ್ ತಿಂಗಳು ತ್ಯಾಗ, ಸಹನೆ ಮತ್ತು ಸಹಾನುಭೂತಿಯ ಸಂದೇಶ ನೀಡುತ್ತದೆ.</p>.<p>ಈ ಸಂದರ್ಭದಲ್ಲಿ ಬಡವರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.</p>.<p>ಸನ್ಮಾನ: ಕಾರ್ಯಕ್ರಮದ ಅಂಗವಾಗಿ ಅಂಜುಮನ್ ಕಮೀಟಿ ವತಿಯಿಂದ ಬಾಪುಸಾಹೇಬ ದೇಶಮುಖ ಹಾಗೂ ಪೃಥ್ವಿರಾಜ್ ನಾಡಗೌಡ ಅವರಿಗೆ ಸನ್ಮಾನಿಸಲಾಯಿತು.</p>.<p>ಮೌಲಾನಾ ಇಸ್ಮಾಯಿಲ್ ಮುಲ್ಲಾ ಅವರು ಕುರ್ಆನ್ ಪಠಣದ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಯೂನುಸ್ ನಿರೂಪಿಸಿದರು. ಹಿರಿಯರಾದ ರಾಜೇಸಾಬ ಕುಳಗೇರಿ, ರಸೂಲಸಾಬ ಖಾಜಿ, ಮಹ್ಮದ ಅವಟಿ, ಅಲ್ಲಾಭಕ್ಷ ಕುಳಗೇರಿ, ಇಬ್ರಾಹಿಂ ಮೂಲಿಮನಿ, ಜಾಫರ ಮಕಾಂದಾರ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260321-26-215870058</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಲತವಾಡ:</strong> ರಂಜಾನ್ ಎಂದರೆ ಕೇವಲ ಉಪವಾಸದ ತಿಂಗಳು ಮಾತ್ರವಲ್ಲ; ಇದು ದಾನ, ಧರ್ಮ, ಸಹನೆ ಮತ್ತು ಪರಸ್ಪರ ಸಹಾಯದ ಮಹತ್ವವನ್ನು ಸಾರುವ ಪವಿತ್ರ ಕಾಲವಾಗಿದೆ. ಈ ಸಮಯದಲ್ಲಿ ಹಸಿದವರಿಗೆ ಅನ್ನ ನೀಡುವುದು ಮತ್ತು ಬಡವರಿಗೆ ನೆರವಾಗುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪೃಥ್ವಿರಾಜ್ ನಾಡಗೌಡ ಹೇಳಿದರು.</p>.<p>ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಗುರುವಾರ ಸಂಜೆ ರಂಜಾನ್ ಹಬ್ಬದ ಅಂಗವಾಗಿ ಬಡವರಿಗೆ ದಿನಸಿ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಅಂಜುಮನ್ ಅಧ್ಯಕ್ಷ ಲಾಳೆಮಶಾಕ ಅವಟಿ ಮಾತನಾಡಿ, ನಮ್ಮ ಭಾಗದ ದಾನಶೀಲರಾದ ಬಾಪುಸಾಹೇಬ ದೇಶಮುಖ ಹಾಗೂ ಪೃಥ್ವಿರಾಜ್ ನಾಡಗೌಡ ಅವರು ಸುಮಾರು 85 ಬಡ ಕುಟುಂಬಗಳಿಗೆ ರಂಜಾನ್ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಈ ಇಬ್ಬರು ಸದಾ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಶ್ಲಾಘಿಸಿದರು.</p>.<p>ಅಂಜುಮನ್ ಸದಸ್ಯ ಮೌಲಾಸಾಬ ರಕ್ಕಸಗಿ ಮಾತನಾಡಿ, ರಂಜಾನ್ ತಿಂಗಳು ತ್ಯಾಗ, ಸಹನೆ ಮತ್ತು ಸಹಾನುಭೂತಿಯ ಸಂದೇಶ ನೀಡುತ್ತದೆ.</p>.<p>ಈ ಸಂದರ್ಭದಲ್ಲಿ ಬಡವರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.</p>.<p>ಸನ್ಮಾನ: ಕಾರ್ಯಕ್ರಮದ ಅಂಗವಾಗಿ ಅಂಜುಮನ್ ಕಮೀಟಿ ವತಿಯಿಂದ ಬಾಪುಸಾಹೇಬ ದೇಶಮುಖ ಹಾಗೂ ಪೃಥ್ವಿರಾಜ್ ನಾಡಗೌಡ ಅವರಿಗೆ ಸನ್ಮಾನಿಸಲಾಯಿತು.</p>.<p>ಮೌಲಾನಾ ಇಸ್ಮಾಯಿಲ್ ಮುಲ್ಲಾ ಅವರು ಕುರ್ಆನ್ ಪಠಣದ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಯೂನುಸ್ ನಿರೂಪಿಸಿದರು. ಹಿರಿಯರಾದ ರಾಜೇಸಾಬ ಕುಳಗೇರಿ, ರಸೂಲಸಾಬ ಖಾಜಿ, ಮಹ್ಮದ ಅವಟಿ, ಅಲ್ಲಾಭಕ್ಷ ಕುಳಗೇರಿ, ಇಬ್ರಾಹಿಂ ಮೂಲಿಮನಿ, ಜಾಫರ ಮಕಾಂದಾರ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260321-26-215870058</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>