ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರಕ್ಕೆ ಬಸವ ಜಯಂತಿ: ಕ್ಷಮೆಯಾಚನೆಗೆ ಒತ್ತಾಯ 

Last Updated 3 ಮೇ 2022, 14:27 IST
ಅಕ್ಷರ ಗಾತ್ರ

ವಿಜಯಪುರ: ಅನೇಕ ಪ್ರಯತ್ನಗಳ‌ ನಂತರ ಬಸವ‌ಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ರಾಜ್ಯಮಟ್ಟದ ಬಸವ ಜಯಂತೋತ್ಸವ ಆಚರಣೆಯಾಯಿತು. ಆದರೆ, ಆಡಳಿತಾರೂಢ ಪಕ್ಷದ ಯಾವೊಬ್ಬ ಸಚಿವರು, ಶಾಸಕರು ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ, ಇದು ಬಿಜೆಪಿ ನಾಯಕರ ಬಸವ ವಿರೋಧಿ ಧೋರಣೆ ಎತ್ತಿ ತೋರಿಸುತ್ತದೆಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯಮಟ್ಟದ ಬಸವ ಜಯಂತೋತ್ಸವಕ್ಕೆ ಗೈರಾಗುವ ಮೂಲಕ ಬಿಜೆಪಿಗರು ತಮಗೆಬಸವಣ್ಣನವರ ತತ್ವಗಳಲ್ಲಿ‌ ನಂಬಿಕೆ ಇಲ್ಲ, ಮನುವಾದ, ಗೋಡ್ಸೆವಾದದಲ್ಲಿ ನಂಬಿಕೆ ಇದೆ ಎಂದು ಮತ್ತೊಮ್ಮೆ ನಿರೂಪಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇವಲ ಕಾಟಾಚಾರಕ್ಕೆ ಬಸವೇಶ್ವರ ಜಯಂತೋತ್ಸವ ಆಚರಣೆಯಾಗಿದ್ದು ಸಮಸ್ತ ಬಸವಾಭಿಮಾನಿಗಳಿಗೆ ನೋವುಂಟಾಗಿದೆ. ಕೂಡಲೇ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜ್ಯದ ಜನತೆಯ ಬಹಿರಂಗ‌‌ ಕ್ಷಮೆಯಾಚಿಸಬೇಕು ಎಂದು ರಾಠೋಡ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT