ವಿಜಯಪುರ: ಅನೇಕ ಪ್ರಯತ್ನಗಳ ನಂತರ ಬಸವಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ರಾಜ್ಯಮಟ್ಟದ ಬಸವ ಜಯಂತೋತ್ಸವ ಆಚರಣೆಯಾಯಿತು. ಆದರೆ, ಆಡಳಿತಾರೂಢ ಪಕ್ಷದ ಯಾವೊಬ್ಬ ಸಚಿವರು, ಶಾಸಕರು ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ, ಇದು ಬಿಜೆಪಿ ನಾಯಕರ ಬಸವ ವಿರೋಧಿ ಧೋರಣೆ ಎತ್ತಿ ತೋರಿಸುತ್ತದೆಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.