ಇತ್ತೀಚಿಗೆ ಜರುಗಿದ ರಾಷ್ಟ್ರಮಟ್ಟದ 47ನೇ ಜಿ.ಎಸ್.ಟಿ ಕೌನ್ಸಲಿಂಗ್ ಸಭೆಯಲ್ಲಿ ಆಹಾರ ಧಾನ್ಯ, ದ್ವಿದಳ ಧಾನ್ಯಗಳ ಮೇಲೆ ಶೇ 5ರಷ್ಟುತೆರಿಗೆ ವಿಧಿಸುವ ಕುರಿತು ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಮಾಡಿದೆ. ಇದರಿಂದ ವರ್ತಕರಿಗೆ ,ರೈತರಿಗೆ ಹಾಗೂ ದಿನ ನಿತ್ಯ ಅಹಾರ ಧಾನ್ಯಗಳ ಮೇಲೆ ಅವಲಂಬಿತರಾಗಿರುವ ಜನ ಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಅನವಶ್ಯಕವಾದ ಹೊರೆಯಾಗಲಿದೆ ಎಂದು ಅವರು ದೂರಿದ್ದಾರೆ.