ಆಲಮೇಲ(ವಿಜಯಪುರ): ಪಟ್ಟಣದಲ್ಲಿ ಗುರುವಾರ ತಡರಾತ್ರಿ ನಡೆದ ರೌಡಿಶೀಟರ್ ಪ್ರದೀಪ ಯಂಟಮಾನ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಆಲಮೇಲ ಪೊಲೀಸರು ಒಂಬತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನುಳಿದ ನಾಲ್ಕು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದರು.
ಎರಡು ಕುಟುಂಬಗಳ ನಡುವೆ ಇದ್ದ ಹಳೆಯ ದ್ವೇಷವೇ ಕೊಲೆಗೆ ಕಾರಣ. ಮಾಜಿ ಸದಸ್ಯನಾಗಿದ್ದ ಪ್ರದೀಪ ಬರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 17ನೇ ವಾರ್ಡ್ನಿಂದ ಸ್ಪರ್ಧಿಸಲು ತಯಾರಿಗಿದ್ದ, ಈ ವಿಷಯವನ್ನೆ ಮುಖ್ಯವಾಗಿಟ್ಟುಕೊಂಡು ಆರೋಪಿಗಳು ಕೊಲೆ ಮಾಡಿದ್ದಾರೆ ಎಂದರು.
ಆರೋಪಿಗಳ ಪತ್ತೆಗೆ ಸಿ.ಪಿ.ಐ ಎಸ್.ಎಂ.ಪಾಟೀಲ ಮಾರ್ಗದರ್ಶನದಲ್ಲಿ ಸುರೇಶ ಗಡ್ಡಿ, ರವಿಯಡಣ್ಣವರ ನೇತೃವದಲ್ಲಿ ಎರಡು ತಂಡಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್ ರಚಿಸಿದ್ದರು.
ಸಿ.ಪಿ.ಐ ಎಸ್.ಎಂ.ಪಾಟೀಲ, ಆಲಮೇಲ ಎಸ್ ಐ ಸುರೇಶ ಗಡ್ಡಿ, ದೇವರಹಿಪ್ಪರಗಿ ಎಸ್ ಐ ರವಿ ಯಡಣ್ಣವರ ಉಪಸ್ಥಿತರಿದ್ದರು.