ವಿಜಯಪುರ: ಸನ್ನಡತೆ ಆಧಾರದ ಮೇಲೆ ನಗರದ ಕೇಂದ್ರ ಕಾರಾಗೃಹದಿಂದ 10 ಕೈದಿಗಳು ಆಗಸ್ಟ್ 15ರಂದು ಬೆಳಿಗ್ಗೆ 11.30ಕ್ಕೆ ಬಿಡುಗಡೆಯಾಗಲಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿರುವುದಾಗಿ ಕೇಂದ್ರ ಕಾರಾಗೃಹದ ಪ್ರಕಟಣೆ ತಿಳಿಸಿದೆ.
ಬಿಡುಗಡೆಯಾಗುತ್ತಿರುವ ಕೈದಿಗಳಲ್ಲಿ ತಂದೆ ಮತ್ತು ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಇದ್ದಾರೆ.
ಮಲಕಾರಿ ಜಟಗೊಂಡ ಹಾಗೂ ಅವರ ಪುತ್ರರಾದಬಸಪ್ಪ ಮಲಕಾರಿ ಜಟಗೊಂಡ, ಗೌಡಪ್ಪ ಜಟಗೊಂಡ, ಬೆಳೆನ್ನಿ ಜಟಗೊಂಡ ಬಿಡುಗಡೆಯಾಗುತ್ತಿದ್ದಾರೆ.
ಜಮಖಂಡಿ ತಾಲೂಕಿನ ಚಕ್ಕಲಕಿ ಕ್ರಾಸ್ ನಿವಾಸಿಯಾಗಿರುವ ಇವರು, ಗ್ರಾಮಸ್ಥರೊಬ್ಬರ ತೋಟದಲ್ಲಿ ಹೂವು ಕೀಳಿದ್ದಾರೆ ಎಂಬ ಕಾರಣ ಎರಡು ಕುಟುಂಬಗಳ ಮಧ್ಯೆ ಜಗಳವಾಗಿದ್ದಾಗ ತಂದೆ ಹಾಗೂ ಅವರ ಮೂವರು ಮಕ್ಕಳು ಹೂವು ತೋಟದ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ನಾಲ್ವರಿಗೂ ಎರಡು ವರ್ಷ ಶಿಕ್ಷೆಯಾಗಿತ್ತು. ಈಗ ಇವರು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತಿದೆ.
ಉಳಿದಂತೆ ಸಿದ್ದಪ್ಪ ಮಾದರ, ಅಪ್ಪುಹಿರೇಮಠ, ಮಾಯಪ್ಪ ವಾಡೇದ, ಉಮಾ ಚವ್ಹಾಣ ಹಾಗೂ ಮುತ್ತವ್ಚ ನಾಗವ್ವಗೋಳ ಬಿಡುಗಡೆಯಾಗುತ್ತಿರುವ ಇತರೆ ಕೈದಿಗಳಾಗಿದ್ದಾರೆ.