ವಿಜಯಪುರ:ಮನಗೂಳಿ ಪಟ್ಟಣದಲ್ಲಿ 2019ರ ಡಿಸೆಂಬರ್ನಲ್ಲಿವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಪೀಡಿಸಿರುವುದು ಅಲ್ಲದೇ, ಮಾನಸಿಕ ಕಿರುಕುಳ ನೀಡಿ ಹಾಗೂ ಅತ್ಯಾಚಾರಕ್ಕೆ ಪ್ರಯತ್ನಿಸಿದ ಆರೋಪಿಗೆವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶೆ ಸವಿತಾ ಅವರು ಕಠಿಣ ಶಿಕ್ಷೆ ನೀಡಿದ್ದಾರೆ.
ಮನಗೂಳಿಯ ನಿವಾಸಿಯಾದ, ಆರೋಪಿ ಶ್ರೀಶೈಲ ಸೋಮಣ್ಣ ಡೋಣೂರಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರಾದ ವಿ.ಜಿ, ಹಗರಗುಂಡ ತಿಳಿಸಿದ್ದಾರೆ.