ಇಂಡಿ (ವಿಜಯಪುರ): ಇಲ್ಲಿನ ರೈತ ಬಾನಪ್ಪ ಪೂಜಾರಿ ಎಂಬುವವರು ಸಾಕಿದ್ದ ಏಳು ದಿನದ ‘ಸುಲ್ತಾನ್’ ಹೆಸರಿನ ಟಗರುಮರಿಯನ್ನು ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸಿದ್ಧನಾಥ ಗ್ರಾಮದ ನಾಮದೇವ ಖೋಖರೆ ಎಂಬುವವರು ಶುಕ್ರವಾರ ₹2 ಲಕ್ಷಕ್ಕೆ ಖರೀದಿಸಿದರು. ‘ಈ ಟಗರಿನ ಸಂತತಿ ಅಪರೂಪ. ಇದು ಪರಿಶುದ್ಧ ‘ದೇಶಿ ಖಿಲಾರಿ’ ತಳಿಯಾಗಿದೆ.’ ಎಂದು ಬಾನಪ್ಪ ಪೂಜಾರಿ ತಿಳಿಸಿದರು.