ವಿಜಯಪುರ: ಭಾರತೀಯ ಸೇನೆಗೆ ಹೊಸ ನೇಮಕಾತಿ ರ್ಯಾಲಿ ನಡೆಸುವಂತೆ ಆಗ್ರಹಿಸಿ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಅಭ್ಯರ್ಥಿಗಳು, ಬಳಿಕ ಜಿಲ್ಲಾಧಿಕಾರಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೋವಿಡ್ ಕಾರಣದಿಂದ ಮೂರು ವರ್ಷಗಳಿಂದ ಸೇನಾ ಭರ್ತಿರ್ಯಾಲಿ ನಡೆಯದ ಕಾರಣಕ್ಕೆಸಾಕಷ್ಟು ಜನ ಆಕಾಂಕ್ಷಿಗಳು ವಯಸ್ಸು ಮೀರುತ್ತಿರುವುದರಿಂದ ಅವಕಾಶ ವಂಚಿತರಾಗಿದ್ದಾರೆ ಎಂದು ದೂರಿದರು.
ತಕ್ಷಣ ಸೇನಾ ಭರ್ತಿ ರ್ಯಾಲಿ ನಡೆಸಬೇಕು. ಅಲ್ಲದೇ, ವಯಸ್ಸಿನ ಮಿತಿಯನ್ನು ಸಡಲಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಪರೀಕ್ಷೆ ಬರೆಯಬೇಕಾದ ಅನೇಕ ಅಭ್ಯರ್ಥಿಗಳು ಕೂಡ ಮೂರು ವರ್ಷಗಳಿಂದ ಕಾಯುತ್ತಿದ್ದಾರೆ. ತಕ್ಷಣ ಪರೀಕ್ಷೆ ನಡೆಸಿ, ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.