ವ್ಯಾಪಾರಸ್ಥರ ದಯನೀಯ ಪರಿಸ್ಥಿತಿ ಪರಿಶೀಲಿಸಿ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂನಿಂದ ವಿನಾಯ್ತಿ ನೀಡಲು ಮರ್ಚಂಟ್ಸ್ ಅಸೋಸಿಯೇಶನ್, ಹೋಲ್ಸೇಲ್ ಕಿರಾಣ ಮರ್ಚಂಟ್ಸ್, ಆಯಿಲ್ ಮಿಲ್ ಮಾಲೀಕರು, ಮಷನರಿ ಮರ್ಚಂಟ್ಸ್, ಸ್ಟೇಷನರಿ, ಎಲ್.ಬಿ.ಎಸ್ ಮಾರುಕಟ್ಟೆ ಸಂಕಿರ್ಣ, ನೆಹರು ಮಾರುಕಟ್ಟೆ ಸಂಕೀರ್ಣ, ಜವಳಿ ವ್ಯಾಪಾರಸ್ಥರು, ಸರಾಫ್ ವ್ಯಾಪಾರಸ್ಥರು, ಫುಟ್ವೇರ್, ರೆಡಿಮೇಡ್ ಬಟ್ಟೆ ವ್ಯಾಪಾರಸ್ಥರು, ಹೋಟೆಲ್ ಮಾಲೀಕರು, ಹಾರ್ಡ್ವೇರ್, ಧಾನ್ಯಕಾಳುಗಳ ಬಜಾರ್, ಬಾಂಡೆ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.