<p>ಆಲಮಟ್ಟಿ: ಅಖಂಡ ವಿಜಯಪುರ ಜಿಲ್ಲೆಯಿಂದ 1982ರಲ್ಲಿ ಪೊಲೀಸ್ ಅಧಿಕಾರಿಗಳಾಗಿ ಆಯ್ಕೆಯಾಗಿ ನಿವೃತ್ತರಾದ 36 ಜನರು ಸೋಮವಾರ ಆಲಮಟ್ಟಿಯ ರಾಕ್ ಗಾರ್ಡನ್ನಲ್ಲಿ ಸಭೆ ಸೇರಿ ತಮಗೆ ತರಬೇತಿ ನೀಡಿದ ಗುರುವಿಗೆ ವಿಶೇಷವಾಗಿ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.</p>.<p>ರಾಜ್ಯದ ಡಿಜಿ ಐಜಿಪಿಯಾಗಿ ನಿವೃತ್ತರಾಗಿರುವ ಎಸ್.ಟಿ. ರಮೇಶ ಅವರು 1982ರಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅಖಂಡ ವಿಜಯಪುರ ಜಿಲ್ಲೆಯಿಂದ 76 ಜನರು ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದರು. ಅವರೆಲ್ಲರೂ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಿವಿಧ ಹಂತಗಳಲ್ಲಿ ಅಧಿಕಾರಿಗಳಾಗಿ ನಿವೃತ್ತರಾಗಿದ್ದಾರೆ. ಈ ಪೈಕಿ 23 ಜನ ನಿಧನರಾಗಿದ್ದಾರೆ.</p>.<p>ನಿವೃತ್ತ ಸಹೋದ್ಯೋಗಿ ಗೆಳೆಯರಲ್ಲಿ ಮೂವರು ಸಿಪಿಐ, ಐವರು ಪಿಎಸ್ಐ ಹಾಗೂ 18 ಜನ ನಿವೃತ್ತ ಎಎಸ್ಐ ಅಧಿಕಾರಿಗಳು ಆಲಮಟ್ಟಿಯಲ್ಲಿ ಸಭೆ ಸೇರಿ ತಮ್ಮ ಸೇವಾವಧಿ ಅನುಭವಗಳು, ನಿವೃತ್ತಿ ಬಳಿಕದ ಜೀವನ ಸೇರಿದಂತೆ ಉಭಯ ಕುಶಲೋಪರಿ ಹಂಚಿಕೊಂಡರು.</p>.<p>ತರಬೇತಿ ಅವಧಿಯಲ್ಲಿ ಶಿಸ್ತುಬದ್ಧ ಕವಾಯತು ಕಲಿಸಿಕೊಟ್ಟ ಗುರುಗಳಾದ ನಿವೃತ್ತ ಆರ್.ಎಸ್.ಐ ಆರ್.ಎಂ. ಬಗಲಿ ಅವರನ್ನು ಸನ್ಮಾನಿಸಿದರು.</p>.<p>ನಿವೃತ್ತ ಸಿಪಿಐ ಶಾಮರಾಜ್ ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಎಸ್ಐ ಎ.ಎನ್. ಆಲದಿ ನಿರೂಪಿಸಿದರು. ನಿವೃತ್ತ ಸಿಪಿಐ ಎಂ.ಬಿ. ಗೊಳಸಂಗಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಲಮಟ್ಟಿ: ಅಖಂಡ ವಿಜಯಪುರ ಜಿಲ್ಲೆಯಿಂದ 1982ರಲ್ಲಿ ಪೊಲೀಸ್ ಅಧಿಕಾರಿಗಳಾಗಿ ಆಯ್ಕೆಯಾಗಿ ನಿವೃತ್ತರಾದ 36 ಜನರು ಸೋಮವಾರ ಆಲಮಟ್ಟಿಯ ರಾಕ್ ಗಾರ್ಡನ್ನಲ್ಲಿ ಸಭೆ ಸೇರಿ ತಮಗೆ ತರಬೇತಿ ನೀಡಿದ ಗುರುವಿಗೆ ವಿಶೇಷವಾಗಿ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.</p>.<p>ರಾಜ್ಯದ ಡಿಜಿ ಐಜಿಪಿಯಾಗಿ ನಿವೃತ್ತರಾಗಿರುವ ಎಸ್.ಟಿ. ರಮೇಶ ಅವರು 1982ರಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅಖಂಡ ವಿಜಯಪುರ ಜಿಲ್ಲೆಯಿಂದ 76 ಜನರು ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದರು. ಅವರೆಲ್ಲರೂ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಿವಿಧ ಹಂತಗಳಲ್ಲಿ ಅಧಿಕಾರಿಗಳಾಗಿ ನಿವೃತ್ತರಾಗಿದ್ದಾರೆ. ಈ ಪೈಕಿ 23 ಜನ ನಿಧನರಾಗಿದ್ದಾರೆ.</p>.<p>ನಿವೃತ್ತ ಸಹೋದ್ಯೋಗಿ ಗೆಳೆಯರಲ್ಲಿ ಮೂವರು ಸಿಪಿಐ, ಐವರು ಪಿಎಸ್ಐ ಹಾಗೂ 18 ಜನ ನಿವೃತ್ತ ಎಎಸ್ಐ ಅಧಿಕಾರಿಗಳು ಆಲಮಟ್ಟಿಯಲ್ಲಿ ಸಭೆ ಸೇರಿ ತಮ್ಮ ಸೇವಾವಧಿ ಅನುಭವಗಳು, ನಿವೃತ್ತಿ ಬಳಿಕದ ಜೀವನ ಸೇರಿದಂತೆ ಉಭಯ ಕುಶಲೋಪರಿ ಹಂಚಿಕೊಂಡರು.</p>.<p>ತರಬೇತಿ ಅವಧಿಯಲ್ಲಿ ಶಿಸ್ತುಬದ್ಧ ಕವಾಯತು ಕಲಿಸಿಕೊಟ್ಟ ಗುರುಗಳಾದ ನಿವೃತ್ತ ಆರ್.ಎಸ್.ಐ ಆರ್.ಎಂ. ಬಗಲಿ ಅವರನ್ನು ಸನ್ಮಾನಿಸಿದರು.</p>.<p>ನಿವೃತ್ತ ಸಿಪಿಐ ಶಾಮರಾಜ್ ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಎಸ್ಐ ಎ.ಎನ್. ಆಲದಿ ನಿರೂಪಿಸಿದರು. ನಿವೃತ್ತ ಸಿಪಿಐ ಎಂ.ಬಿ. ಗೊಳಸಂಗಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>