ಏಳು ದಿನ ನಡೆಯುವ ಜನ್ಮೋತ್ಸವ ಸಪ್ತಾಹದಲ್ಲಿ ಆಧ್ಯಾತ್ಮಿಕ ಮಾರ್ಗದರ್ಶಕ ಪದ್ಮಭೂಷಣ ಎಂ. ಹೆಬ್ಬಳ್ಳಿಯ ಚೈತನ್ಯಾಶ್ರಮದ ದತ್ತಾವಧೂತರು, ಮಂಡ್ಯದ ಚಿನ್ಮಯಾ ಮಿಷನ್ನ ಸ್ವಾಮಿ ಆದಿತ್ಯಾನಂದ ಸರಸ್ವತಿ, ಬೆಂಗಳೂರಿನ ವಿವೇಕ ಸಬನೀಸ, ಆದಿಚುಂಚನಗಿರಿ ಶಾಖಾ ಮಠದ ಸಾಯಿ ಕೀರ್ತಿನಾಥ ಸ್ವಾಮೀಜಿ, ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಮಹಾಲಿಂಗಪುರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ, ಹುಬ್ಬಳ್ಳಿಯ ಆರ್ಷ ವಿದ್ಯಾಪೀಠದ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ, ವಿಜಯಪುರದ ಅಭಿನವ ಸಿದ್ಧಾರೂಢ ಸ್ವಾಮಿ, ಮುಂಬೈನ ಪ್ರೀತಿ ಸಂಪಗಾಂವಕರ, ಪುಣೆಯ ಅರುಣ ಕೇಳಕರ, ಆಳಂದಿಯ ಶಂಕರ ಶಾಸ್ತ್ರಿ, ಇಚಲಕರಂಜಿಯ ಮುರಳಿ ಜಾಜು, ಮಿರಜ್ನ ಸಮರ್ಥ ಭಕ್ತಕೌಸ್ತುಭ ಬುವಾ ರಾಮದಾಸಿ, ಖೋಪೋಲಿ ಚಿನ್ಮಯಾ ಮಿಷನ್ನಿನ ಸ್ವಾಮಿ ಮೇಧನಾನಂದ ಅವರು ತಮ್ಮ ಅನುಭವಾಮೃತವನ್ನು ಭಕ್ತರಿಗೆ ನೀಡಲಿದ್ದಾರೆ.