<p>ಸೋಲಾಪುರ: ಬಸವೇಶ್ವರರ ಜಯಂತಿ ಅಂಗವಾಗಿ ವೀರಶೈವ ವೀಜನ ವತಿಯಿಂದ ಏ.16ರಿಂದ 18ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ನಗರದ ಶಿವಸ್ಮಾರಕ ಸಭಾಂಗಣದಲ್ಲಿ ಬಸವ ಉಪನ್ಯಾಸಮಾಲೆ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ರಾಜಶೇಖರ ಬುರಕುಲೆ ತಿಳಿಸಿದರು.</p>.<p>ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.16ರಂದು ಹಾಸ್ಯಕವಿ ಅನಿಲ ದೀಕ್ಷಿತ್ ಮತ್ತು ಬಾಲಚಂದ್ರ ಕೊಳಪಕರ ಅವರು ‘ಹಾಸ್ಯರಂಗ’ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕ ವಿಜಯಕುಮಾರ ದೇಶಮುಖ ನೆರವೇರಿಸಲಿದ್ದಾರೆ.</p>.<p>ಏ.17ರಂದು ಮುಂಬೈನ ಅಪೇಕ್ಷಾ ಚಾಕೋತೆ ‘ಸ್ತ್ರೀ ಸ್ವಾತಂತ್ರ್ಯದ ಉದ್ಘಾಟಕರು: ಮಹಾತ್ಮ ಬಸವೇಶ್ವರ’ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಈ ದಿನದ ಉದ್ಘಾಟನೆಯನ್ನು ಪೊಲೀಸ್ ಉಪ ಆಯುಕ್ತೆ ಡಾ. ಅಶ್ವಿನಿ ಪಾಟೀಲ ನೆರವೇರಿಸಲಿದ್ದು, ಉಪಮಹಾಪೌರ ಜ್ಞಾನೇಶ್ವರಿ ದೇವಕರ ಅಧ್ಯಕ್ಷತೆ ವಹಿಸಲಿದ್ದಾರೆ.</p>.<p>ಉಪನ್ಯಾಸಮಾಲೆಯ ಸಮಾರೋಪ ಏ.18ರಂದು ಪ್ರೊ.ಗಣೇಶ ಬೆಳಂಬೆ ಅವರ ‘ಐಸೆ ಕೈಸೆ ಝಾಲೆ ಭೋಂದು’ ವಿಷಯದ ಉಪನ್ಯಾಸದೊಂದಿಗೆ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಸಚಿನ ಕಲ್ಯಾಣಶೆಟ್ಟಿ ನೆರವೇರಿಸಲಿದ್ದು, ಶಾಸಕ ದೇವೇಂದ್ರ ಕೊಠೆ ಅಧ್ಯಕ್ಷತೆ ವಹಿಸಲಿದ್ದಾರೆ.</p>.<p>ನಾಗೇಶ ಬಡದಾಳ, ಆನಂದ ದುಲಂಗೆ, ಸೋಮೇಶ್ವರ ಯಾಬಾಜಿ, ರಾಜೇಶ ನೀಲಾ, ಅವಿನಾಶ ಹತ್ತರಕಿ, ಸೋಮನಾಥ ಚೌಧರಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-26-1101309725</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೋಲಾಪುರ: ಬಸವೇಶ್ವರರ ಜಯಂತಿ ಅಂಗವಾಗಿ ವೀರಶೈವ ವೀಜನ ವತಿಯಿಂದ ಏ.16ರಿಂದ 18ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ನಗರದ ಶಿವಸ್ಮಾರಕ ಸಭಾಂಗಣದಲ್ಲಿ ಬಸವ ಉಪನ್ಯಾಸಮಾಲೆ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ರಾಜಶೇಖರ ಬುರಕುಲೆ ತಿಳಿಸಿದರು.</p>.<p>ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.16ರಂದು ಹಾಸ್ಯಕವಿ ಅನಿಲ ದೀಕ್ಷಿತ್ ಮತ್ತು ಬಾಲಚಂದ್ರ ಕೊಳಪಕರ ಅವರು ‘ಹಾಸ್ಯರಂಗ’ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕ ವಿಜಯಕುಮಾರ ದೇಶಮುಖ ನೆರವೇರಿಸಲಿದ್ದಾರೆ.</p>.<p>ಏ.17ರಂದು ಮುಂಬೈನ ಅಪೇಕ್ಷಾ ಚಾಕೋತೆ ‘ಸ್ತ್ರೀ ಸ್ವಾತಂತ್ರ್ಯದ ಉದ್ಘಾಟಕರು: ಮಹಾತ್ಮ ಬಸವೇಶ್ವರ’ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಈ ದಿನದ ಉದ್ಘಾಟನೆಯನ್ನು ಪೊಲೀಸ್ ಉಪ ಆಯುಕ್ತೆ ಡಾ. ಅಶ್ವಿನಿ ಪಾಟೀಲ ನೆರವೇರಿಸಲಿದ್ದು, ಉಪಮಹಾಪೌರ ಜ್ಞಾನೇಶ್ವರಿ ದೇವಕರ ಅಧ್ಯಕ್ಷತೆ ವಹಿಸಲಿದ್ದಾರೆ.</p>.<p>ಉಪನ್ಯಾಸಮಾಲೆಯ ಸಮಾರೋಪ ಏ.18ರಂದು ಪ್ರೊ.ಗಣೇಶ ಬೆಳಂಬೆ ಅವರ ‘ಐಸೆ ಕೈಸೆ ಝಾಲೆ ಭೋಂದು’ ವಿಷಯದ ಉಪನ್ಯಾಸದೊಂದಿಗೆ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಸಚಿನ ಕಲ್ಯಾಣಶೆಟ್ಟಿ ನೆರವೇರಿಸಲಿದ್ದು, ಶಾಸಕ ದೇವೇಂದ್ರ ಕೊಠೆ ಅಧ್ಯಕ್ಷತೆ ವಹಿಸಲಿದ್ದಾರೆ.</p>.<p>ನಾಗೇಶ ಬಡದಾಳ, ಆನಂದ ದುಲಂಗೆ, ಸೋಮೇಶ್ವರ ಯಾಬಾಜಿ, ರಾಜೇಶ ನೀಲಾ, ಅವಿನಾಶ ಹತ್ತರಕಿ, ಸೋಮನಾಥ ಚೌಧರಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-26-1101309725</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>