<p>ಸೋಲಾಪುರ: ‘ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ವೈಮನಸ್ಸು ಮತ್ತು ಶಾಂತಿ ಭಂಗಗೊಳಿಸಲು ಪ್ರಯತ್ನಿಸುವ ಪ್ರಚಾರಗಳಿಂದ ಯುವಕರು ದೂರವಿರಬೇಕು. ಉತ್ತಮ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು’ ಎಂದು ನಗರ ಕಾಜಿ ಮುಫ್ತಿ ಸಯ್ಯದ್ ಅಮ್ಜದ್ ಅಲಿ ಅವರು ಮನವಿ ಮಾಡಿದರು.</p>.<p>ನಗರದಲ್ಲಿ ಈದ್-ಉಲ್-ಅಜ್ಹಾ ಆಚರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ‘ಎಲ್ಲ ಧರ್ಮಗುರುಗಳು ತಮ್ಮ ಪ್ರವಚನಗಳ ಮೂಲಕ ಏಕತೆ, ಬಾಂಧವ್ಯ ಮತ್ತು ಶಾಂತಿಯ ಸಂದೇಶ ನೀಡಿ ಸಮಾಜದಲ್ಲಿ ಸೌಹಾರ್ದ ಕಾಪಾಡಲು ಪ್ರಯತ್ನಿಸಬೇಕು’ ಎಂದು ಹೇಳಿದರು.</p>.<p>ಸೋಲಾಪುರದ ಹೋಟಗಿ ರಸ್ತೆ ಶಾಹಿ ಆಲಂಘೀರ್ ಈದ್ಗಾ, ರಂಗಭವನದ ಅಹಲೆ ಹದೀಸ್, ಪಾಂಗಲ್ ಮೈದಾನದ ಆಲಂಘೀರ್, ಹಳೆಯ ಆದಿಲಶಾಹಿ ಹಾಗೂ ಅಸರ್ ಮೈದಾನದ ಪ್ರಮುಖ ಐದು ಈದ್ಗಾ ಮೈದಾನಗಳಲ್ಲಿ ಬೆಳಿಗ್ಗೆ ವಿಶೇಷ ಈದ್ ನಮಾಜ್ ನೆರವೇರಿಸಲಾಯಿತು.</p>.<p>ನಮಾಜ್ಗೂ ಮುನ್ನ ಮೌಲಾನಾ ಮತ್ತು ಧರ್ಮಗುರುಗಳು ಈದ್-ಉಲ್-ಅಜ್ಹಾದ ಧಾರ್ಮಿಕ ಮಹತ್ವವನ್ನು ವಿವರಿಸಿ, ಸಮಾಜದಲ್ಲಿ ಶಾಂತಿ, ಬಾಂಧವ್ಯ ಮತ್ತು ಮಾನವೀಯತೆಯ ಸಂದೇಶ ನೀಡಿದರು. ಈದ್-ಉಲ್-ಅಜ್ಹಾ ಅಂದರೆ ಅಲ್ಲಾಹನಿಗಾಗಿ ತ್ಯಾಗ, ಬಲಿದಾನ ಮತ್ತು ಸಮರ್ಪಣೆಯ ಭಾವನೆ ವ್ಯಕ್ತಪಡಿಸುವ ಹಬ್ಬವೆಂದು ತಿಳಿಸಿದರು.</p>.<p>ಅಲ್ಲಾಹನಿಗಾಗಿ ತ್ಯಾಗದ ಭಾವನೆ ವ್ಯಕ್ತಪಡಿಸಿ ಕುರ್ಬಾನಿ ನೀಡಲಾಯಿತು. ನಂತರ ಬಡವರು ಮತ್ತು ಅಗತ್ಯ ಇರುವವರಿಗೆ ಆಹಾರ ಪದಾರ್ಥ ಹಂಚಲಾಯಿತು. ಪೊಲೀಸರು ಕಠಿಣ ಬಂದೋಬಸ್ತ್ ಮಾಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-26-621509277</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೋಲಾಪುರ: ‘ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ವೈಮನಸ್ಸು ಮತ್ತು ಶಾಂತಿ ಭಂಗಗೊಳಿಸಲು ಪ್ರಯತ್ನಿಸುವ ಪ್ರಚಾರಗಳಿಂದ ಯುವಕರು ದೂರವಿರಬೇಕು. ಉತ್ತಮ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು’ ಎಂದು ನಗರ ಕಾಜಿ ಮುಫ್ತಿ ಸಯ್ಯದ್ ಅಮ್ಜದ್ ಅಲಿ ಅವರು ಮನವಿ ಮಾಡಿದರು.</p>.<p>ನಗರದಲ್ಲಿ ಈದ್-ಉಲ್-ಅಜ್ಹಾ ಆಚರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ‘ಎಲ್ಲ ಧರ್ಮಗುರುಗಳು ತಮ್ಮ ಪ್ರವಚನಗಳ ಮೂಲಕ ಏಕತೆ, ಬಾಂಧವ್ಯ ಮತ್ತು ಶಾಂತಿಯ ಸಂದೇಶ ನೀಡಿ ಸಮಾಜದಲ್ಲಿ ಸೌಹಾರ್ದ ಕಾಪಾಡಲು ಪ್ರಯತ್ನಿಸಬೇಕು’ ಎಂದು ಹೇಳಿದರು.</p>.<p>ಸೋಲಾಪುರದ ಹೋಟಗಿ ರಸ್ತೆ ಶಾಹಿ ಆಲಂಘೀರ್ ಈದ್ಗಾ, ರಂಗಭವನದ ಅಹಲೆ ಹದೀಸ್, ಪಾಂಗಲ್ ಮೈದಾನದ ಆಲಂಘೀರ್, ಹಳೆಯ ಆದಿಲಶಾಹಿ ಹಾಗೂ ಅಸರ್ ಮೈದಾನದ ಪ್ರಮುಖ ಐದು ಈದ್ಗಾ ಮೈದಾನಗಳಲ್ಲಿ ಬೆಳಿಗ್ಗೆ ವಿಶೇಷ ಈದ್ ನಮಾಜ್ ನೆರವೇರಿಸಲಾಯಿತು.</p>.<p>ನಮಾಜ್ಗೂ ಮುನ್ನ ಮೌಲಾನಾ ಮತ್ತು ಧರ್ಮಗುರುಗಳು ಈದ್-ಉಲ್-ಅಜ್ಹಾದ ಧಾರ್ಮಿಕ ಮಹತ್ವವನ್ನು ವಿವರಿಸಿ, ಸಮಾಜದಲ್ಲಿ ಶಾಂತಿ, ಬಾಂಧವ್ಯ ಮತ್ತು ಮಾನವೀಯತೆಯ ಸಂದೇಶ ನೀಡಿದರು. ಈದ್-ಉಲ್-ಅಜ್ಹಾ ಅಂದರೆ ಅಲ್ಲಾಹನಿಗಾಗಿ ತ್ಯಾಗ, ಬಲಿದಾನ ಮತ್ತು ಸಮರ್ಪಣೆಯ ಭಾವನೆ ವ್ಯಕ್ತಪಡಿಸುವ ಹಬ್ಬವೆಂದು ತಿಳಿಸಿದರು.</p>.<p>ಅಲ್ಲಾಹನಿಗಾಗಿ ತ್ಯಾಗದ ಭಾವನೆ ವ್ಯಕ್ತಪಡಿಸಿ ಕುರ್ಬಾನಿ ನೀಡಲಾಯಿತು. ನಂತರ ಬಡವರು ಮತ್ತು ಅಗತ್ಯ ಇರುವವರಿಗೆ ಆಹಾರ ಪದಾರ್ಥ ಹಂಚಲಾಯಿತು. ಪೊಲೀಸರು ಕಠಿಣ ಬಂದೋಬಸ್ತ್ ಮಾಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-26-621509277</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>