<p>ತಾಳಿಕೋಟೆ: ತಾಲ್ಲೂಕಿನ ಸುಕ್ಷೇತ್ರ ಹೊಸಹಳ್ಳಿ ಗ್ರಾಮದಲ್ಲಿ ಮಾರುತೇಶ್ವರ ನೂತನ ಮಂದಿರ ಲೋಕಾರ್ಪಣೆ ಕಾರ್ಯಕ್ರಮವು ಮಾರ್ಚ್ 27ರಂದು ಜರುಗಲಿದೆ.</p>.<p>ಬೆಳಿಗ್ಗೆ 5 ಗಂಟೆಯಿಂದ ದೇವಸ್ಥಾನದ ಅರ್ಚಕರಿಂದ ಹೋಮ, ಹವನ ಮತ್ತು ಮಾರುತೇಶ್ವರ ಮಂದಿರ ಜೀರ್ಣೋದ್ಧಾರ ಮತ್ತು ಕಳಸಾರೋಹಣವನ್ನು ವೇ.ಬ್ರ.ವಿರೂಪಾಕ್ಷ ಭಟ್ಟ ಜೋಶಿ ಇಲಕಲ್ಲ ಹಾಗೂ ವೇದ ವಿಪ್ರೋತಮರಿಂದ ನೆರವೇರಿಸಲಾಗುವುದು.</p>.<p>ತಾಳಿಕೋಟೆ ತಾಲ್ಲೂಕು ಬ್ರಾಹ್ಮಣ ಸಮಾಜದ ಗಾಯಿತ್ರಿ ಭಜನಾ ಮಂಡಳಿ, ಮಹಾಲಕ್ಷ್ಮೀ ಭಜನಾ ಮಂಡಳಿ ಹಾಗೂ ವಿಜಯಪುರದ ಕಲ್ಪವೃಕ್ಷ ಪಾರಾಯಣ ಸಂಘ ಅವರಿಂದ ಸಂಗೀತ ಕಾರ್ಯಕ್ರಮ ಜರುಗುವುದು.</p>.<p>ತುಲಾಭಾರ: ಸಂಜೆ 4 ಗಂಟೆಗೆ ಅಭಿನವ ಗಜದಂಡ ಶಿವಾಚಾರ್ಯರು ಬೃಹನ್ಮಠ ತೋಪಿನಕಟ್ಟಿ ದೇವರಭೂಪೂರ ಇವರಿಗೆ ಶಾಂತಗೌಡ ಅಯ್ಯಪ್ಪಗೌಡ ಪಾಟೀಲ ಇವರಿಂದ ತುಲಾಭಾರ ಜರುಗುವುದು. ವಿನಾಯಕ ಮೂರ್ತಿಗೆ ಬೆಳ್ಳಿ ಕಿರೀಟವನ್ನು ಭೀಮನಗೌಡ ಸಿದ್ದನಗೌಡ ಬಿರಾದಾರ ಅರ್ಪಿಸಲಿದ್ದಾರೆ.</p>.<p>ಮಾರುತೇಶ್ವರ ನೂತನ ಮಂದಿರದ ಲೋಕಾರ್ಪಣಾರ್ಥವಾಗಿ ಮಾರ್ಚ್ 28ರಂದು ಮಧ್ಯಾಹ್ನ 3 ಗಂಟೆಗೆ ಉಜ್ಜಿಯಿನಿಶ್ರೀ ಅವರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುವುದು. ಸಂಜೆ 6 ಗಂಟೆಗೆ ಧರ್ಮಸಭೆ ನಡೆಯಲಿದ್ದು ಉಜ್ಜಯಿನಿ ಶ್ರೀ, ಜಾಲಹಳ್ಳಿ ಶ್ರೀ, ಮಾಗಣಗೇರಿ ಶ್ರೀ, ಸಿಂದಗಿ ಸಾರಂಗಮಠ ಶ್ರೀ, ಶಿವಾಚಾರ್ಯರರು ಪಾಲ್ಗೊಳ್ಳುವರು. ಸಂಸದರು, ಶಾಸಕರು, ಮಾಜಿ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದುಪ್ರಕಟಣೆ ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-26-628616511</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಾಳಿಕೋಟೆ: ತಾಲ್ಲೂಕಿನ ಸುಕ್ಷೇತ್ರ ಹೊಸಹಳ್ಳಿ ಗ್ರಾಮದಲ್ಲಿ ಮಾರುತೇಶ್ವರ ನೂತನ ಮಂದಿರ ಲೋಕಾರ್ಪಣೆ ಕಾರ್ಯಕ್ರಮವು ಮಾರ್ಚ್ 27ರಂದು ಜರುಗಲಿದೆ.</p>.<p>ಬೆಳಿಗ್ಗೆ 5 ಗಂಟೆಯಿಂದ ದೇವಸ್ಥಾನದ ಅರ್ಚಕರಿಂದ ಹೋಮ, ಹವನ ಮತ್ತು ಮಾರುತೇಶ್ವರ ಮಂದಿರ ಜೀರ್ಣೋದ್ಧಾರ ಮತ್ತು ಕಳಸಾರೋಹಣವನ್ನು ವೇ.ಬ್ರ.ವಿರೂಪಾಕ್ಷ ಭಟ್ಟ ಜೋಶಿ ಇಲಕಲ್ಲ ಹಾಗೂ ವೇದ ವಿಪ್ರೋತಮರಿಂದ ನೆರವೇರಿಸಲಾಗುವುದು.</p>.<p>ತಾಳಿಕೋಟೆ ತಾಲ್ಲೂಕು ಬ್ರಾಹ್ಮಣ ಸಮಾಜದ ಗಾಯಿತ್ರಿ ಭಜನಾ ಮಂಡಳಿ, ಮಹಾಲಕ್ಷ್ಮೀ ಭಜನಾ ಮಂಡಳಿ ಹಾಗೂ ವಿಜಯಪುರದ ಕಲ್ಪವೃಕ್ಷ ಪಾರಾಯಣ ಸಂಘ ಅವರಿಂದ ಸಂಗೀತ ಕಾರ್ಯಕ್ರಮ ಜರುಗುವುದು.</p>.<p>ತುಲಾಭಾರ: ಸಂಜೆ 4 ಗಂಟೆಗೆ ಅಭಿನವ ಗಜದಂಡ ಶಿವಾಚಾರ್ಯರು ಬೃಹನ್ಮಠ ತೋಪಿನಕಟ್ಟಿ ದೇವರಭೂಪೂರ ಇವರಿಗೆ ಶಾಂತಗೌಡ ಅಯ್ಯಪ್ಪಗೌಡ ಪಾಟೀಲ ಇವರಿಂದ ತುಲಾಭಾರ ಜರುಗುವುದು. ವಿನಾಯಕ ಮೂರ್ತಿಗೆ ಬೆಳ್ಳಿ ಕಿರೀಟವನ್ನು ಭೀಮನಗೌಡ ಸಿದ್ದನಗೌಡ ಬಿರಾದಾರ ಅರ್ಪಿಸಲಿದ್ದಾರೆ.</p>.<p>ಮಾರುತೇಶ್ವರ ನೂತನ ಮಂದಿರದ ಲೋಕಾರ್ಪಣಾರ್ಥವಾಗಿ ಮಾರ್ಚ್ 28ರಂದು ಮಧ್ಯಾಹ್ನ 3 ಗಂಟೆಗೆ ಉಜ್ಜಿಯಿನಿಶ್ರೀ ಅವರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುವುದು. ಸಂಜೆ 6 ಗಂಟೆಗೆ ಧರ್ಮಸಭೆ ನಡೆಯಲಿದ್ದು ಉಜ್ಜಯಿನಿ ಶ್ರೀ, ಜಾಲಹಳ್ಳಿ ಶ್ರೀ, ಮಾಗಣಗೇರಿ ಶ್ರೀ, ಸಿಂದಗಿ ಸಾರಂಗಮಠ ಶ್ರೀ, ಶಿವಾಚಾರ್ಯರರು ಪಾಲ್ಗೊಳ್ಳುವರು. ಸಂಸದರು, ಶಾಸಕರು, ಮಾಜಿ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದುಪ್ರಕಟಣೆ ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-26-628616511</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>