<p>ತಾಳಿಕೋಟೆ: ‘ರಡ್ಡಿ ಸಮಾಜವು ಭವ್ಯ ಪರಂಪರೆ, ಸಂಸ್ಕೃತಿ, ಹಿರಿಮೆ ಹೊಂದಿದೆ. ನಾಡಿಗೆ ಅನೇಕ ಮಹನೀಯರನ್ನು, ಸಾಧಕರನ್ನು ಕೊಡುಗೆ ನೀಡಿದ ಶ್ರೇಯಸ್ಸು ನಮ್ಮ ಸಮಾಜದ್ದಾಗಿದೆ’ ಎಂದು ರಾಷ್ಟ್ರಕೂಟ ರಡ್ಡಿ ಪರಿವಾರದ ರಾಜ್ಯ ಸಂಸ್ಥಾಪಕ ಶ್ರೀನಿವಾಸ ರೆಡ್ಡಿ ಹೇಳಿದರು.</p>.<p>ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಹಿಂದೂ ರಡ್ಡಿ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ವಚನಕಾರ ವೇಮನ, ಸ್ವಾತಂತ್ರ್ಯ ಹೋರಾಟಗಾರ ಸೈರಾ ನರಸಿಂಹ ರೆಡ್ಡಿ, ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ನಮ್ಮವರು. ಹೀಗೆ ಸಾಧಕರ, ಶರಣರ ಪಟ್ಟಿ ದೊಡ್ಡದಿದೆ. ಇದನ್ನು ಯುವಪೀಳಿಗೆಗೆ ಪರಿಚಯಿಸುವ ಜೊತೆಗೆ ಸಮುದಾಯ ಒಗ್ಗೂಡಿಸುವ ಅವಶ್ಯಕತೆ ಇದೆ’ ಎಂದರು.</p>.<p>‘ಎಲ್ಲ ಕ್ಷೇತ್ರಗಳಲ್ಲೂ ರಡ್ಡಿ ಸಮಾಜಕ್ಕೆ ಆದ್ಯತೆ ಸಿಗಬೇಕಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಂಘಟನೆಯ ಅಗತ್ಯವಿದೆ. ಸಂಘಟಿತರಾಗುವುದು ಎಂದರೆ ಇತರ ಸಮುದಾಯದವರನ್ನು ಕಡೆಗಣಿಸುವುದಲ್ಲ. ಎಲ್ಲರೊಂದಿಗೆ ಬೆರೆತು, ಸೌಹಾರ್ದಯುತವಾಗಿ ಬಾಳುವುದು, ಈ ನಾಡಿನ ಅಭಿವೃದ್ಧಿಗೆ ಕೈಜೋಡಿಸುವುದು’ ಎಂದು ತಿಳಿಸಿದರು.</p>.<p>ಸೇಡಂನ ಸಾಹಿತಿ, ಚಿತ್ರನಟ ಮಹಿಪಾಲರೆಡ್ಡಿ ಮುನ್ನೂರು, ಪ್ರೊ.ಕನಕಗಿರಿ ಪಂಪಾರಡ್ಡಿ, ನಿರುಪಾದಪ್ಪ ಜೋಳದರಾಶಿ ಸಿನ್ನೂರ, ಮುಖ್ಯಶಿಕ್ಷಕಿ ಸುಮಂಗಲಾ ಕೋಳೂರ, ಶ್ರೀನಿವಾಸ ರೆಡ್ಡಿ, ಕೊಪ್ಪಾರೆಡ್ಡಿ, ಮಾಜಿ ಶಾಸಕ ಶಿವಪುತ್ರಪ್ಪ ಎಂ.ದೇಸಾಯಿ, ಎಸ್.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಸಮುದಾಯದ ಸಂಘಟನೆ ಕುರಿತು ಮಾತನಾಡಿದರು.</p>.<p>ಶ್ವೇತಾ ಯರಗಲ್ಲ ಪ್ರಾರ್ಥಿಸಿದರು, ಪ್ರಭುಗೌಡ ಮದರಕಲ್ಲ ಸ್ವಾಗತಿಸಿದರು, ಶಿಕ್ಷಕ ಅಪ್ಪಾಸಾಹೇಬ ಎಂ.ಮೂಲಿಮನಿ ಕಾರ್ಯಕ್ರಮ ನಿರ್ವಹಿಸಿದರು.</p>.<p>ವಿಜಯಪುರ, ಬಾಗಲಕೋಟೆ, ಬೀದರ್, ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೆಡ್ಡಿ ಸಮಾಜದ ಜನರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-26-154885598</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಾಳಿಕೋಟೆ: ‘ರಡ್ಡಿ ಸಮಾಜವು ಭವ್ಯ ಪರಂಪರೆ, ಸಂಸ್ಕೃತಿ, ಹಿರಿಮೆ ಹೊಂದಿದೆ. ನಾಡಿಗೆ ಅನೇಕ ಮಹನೀಯರನ್ನು, ಸಾಧಕರನ್ನು ಕೊಡುಗೆ ನೀಡಿದ ಶ್ರೇಯಸ್ಸು ನಮ್ಮ ಸಮಾಜದ್ದಾಗಿದೆ’ ಎಂದು ರಾಷ್ಟ್ರಕೂಟ ರಡ್ಡಿ ಪರಿವಾರದ ರಾಜ್ಯ ಸಂಸ್ಥಾಪಕ ಶ್ರೀನಿವಾಸ ರೆಡ್ಡಿ ಹೇಳಿದರು.</p>.<p>ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಹಿಂದೂ ರಡ್ಡಿ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ವಚನಕಾರ ವೇಮನ, ಸ್ವಾತಂತ್ರ್ಯ ಹೋರಾಟಗಾರ ಸೈರಾ ನರಸಿಂಹ ರೆಡ್ಡಿ, ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ನಮ್ಮವರು. ಹೀಗೆ ಸಾಧಕರ, ಶರಣರ ಪಟ್ಟಿ ದೊಡ್ಡದಿದೆ. ಇದನ್ನು ಯುವಪೀಳಿಗೆಗೆ ಪರಿಚಯಿಸುವ ಜೊತೆಗೆ ಸಮುದಾಯ ಒಗ್ಗೂಡಿಸುವ ಅವಶ್ಯಕತೆ ಇದೆ’ ಎಂದರು.</p>.<p>‘ಎಲ್ಲ ಕ್ಷೇತ್ರಗಳಲ್ಲೂ ರಡ್ಡಿ ಸಮಾಜಕ್ಕೆ ಆದ್ಯತೆ ಸಿಗಬೇಕಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಂಘಟನೆಯ ಅಗತ್ಯವಿದೆ. ಸಂಘಟಿತರಾಗುವುದು ಎಂದರೆ ಇತರ ಸಮುದಾಯದವರನ್ನು ಕಡೆಗಣಿಸುವುದಲ್ಲ. ಎಲ್ಲರೊಂದಿಗೆ ಬೆರೆತು, ಸೌಹಾರ್ದಯುತವಾಗಿ ಬಾಳುವುದು, ಈ ನಾಡಿನ ಅಭಿವೃದ್ಧಿಗೆ ಕೈಜೋಡಿಸುವುದು’ ಎಂದು ತಿಳಿಸಿದರು.</p>.<p>ಸೇಡಂನ ಸಾಹಿತಿ, ಚಿತ್ರನಟ ಮಹಿಪಾಲರೆಡ್ಡಿ ಮುನ್ನೂರು, ಪ್ರೊ.ಕನಕಗಿರಿ ಪಂಪಾರಡ್ಡಿ, ನಿರುಪಾದಪ್ಪ ಜೋಳದರಾಶಿ ಸಿನ್ನೂರ, ಮುಖ್ಯಶಿಕ್ಷಕಿ ಸುಮಂಗಲಾ ಕೋಳೂರ, ಶ್ರೀನಿವಾಸ ರೆಡ್ಡಿ, ಕೊಪ್ಪಾರೆಡ್ಡಿ, ಮಾಜಿ ಶಾಸಕ ಶಿವಪುತ್ರಪ್ಪ ಎಂ.ದೇಸಾಯಿ, ಎಸ್.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಸಮುದಾಯದ ಸಂಘಟನೆ ಕುರಿತು ಮಾತನಾಡಿದರು.</p>.<p>ಶ್ವೇತಾ ಯರಗಲ್ಲ ಪ್ರಾರ್ಥಿಸಿದರು, ಪ್ರಭುಗೌಡ ಮದರಕಲ್ಲ ಸ್ವಾಗತಿಸಿದರು, ಶಿಕ್ಷಕ ಅಪ್ಪಾಸಾಹೇಬ ಎಂ.ಮೂಲಿಮನಿ ಕಾರ್ಯಕ್ರಮ ನಿರ್ವಹಿಸಿದರು.</p>.<p>ವಿಜಯಪುರ, ಬಾಗಲಕೋಟೆ, ಬೀದರ್, ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೆಡ್ಡಿ ಸಮಾಜದ ಜನರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-26-154885598</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>