ನಡಹಳ್ಳಿ ಹೇಗೆ ಉದ್ಯೋಗ ಸೃಷ್ಟಿಸುತ್ತಾರೆ ಅಂತ ಕೇಳ್ತಾರೆ. ನಿಮಗೆ ಸೃಷ್ಟಿ ಮಾಡುವ ಯೋಚನೆಯೇ ಇಲ್ಲ. ನನಗೆ ಅದೇ ಯೋಚನೆ, ಅಂದ ಮೇಲೆ ಸೃಷ್ಟಿ ಮಾಡಿ ತೋರಿಸುತ್ತೇನೆ. ನಾನು ರಾಜಕೀಯಕ್ಕಾಗಿ, ಅಧಿಕಾರದ ಅಹಂ ತೋರಿಸುವುದಕ್ಕಾಗಿ ಮತವನ್ನು ದಾನ ಮಾಡಿ ಎಂದು ಜನರನ್ನು ಕೇಳಲ್ಲ. ನಾನು ಜನ ಕಲ್ಯಾಣಕ್ಕಾಗಿ, ಮಕ್ಕಳ ಭವಿಷ್ಯ ಕಟ್ಟುವುದಕ್ಕಾಗಿ, ಭವಿಷ್ಯದಲ್ಲಿ ಈ ಊರನ್ನು ಉತ್ತಮ ನಗರವನ್ನಾಗಿ ಕಟ್ಟಲು ಮನೆಮನೆಗೆ ಆಶಿರ್ವಾದ ಬೇಡಿ ಬರುತ್ತೇನೆ ಎಂದರು.