ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು, ನಾನಾ ರೈತ ಸಂಘಟನೆಗಳು, ಜನಪ್ರತಿನಿಗಳ ಹಾಗೂ ಸಮಿತಿಯ ಮುಖಂಡರುಗಳ ಕೋರಿಕೆಗೆ ಸ್ಪಂದಿಸಿ ರೈತರಿಗೆ ಅನುಕೂಲ ಮಾಡುವ ಹಿತದೃಷ್ಟಿಯಿಂದ ಐಸಿಸಿ ಅಧ್ಯಕ್ಷರಾದ ಸಚಿವ ಸಿ.ಸಿ.ಪಾಟೀಲ ಅವರೊಂದಿಗೆ ಚರ್ಚಿಸಿ ಮುಂಗಾರು ಹಂಗಾಮಿನಲ್ಲಿ ಹಾಲಿ ಬೆಳೆದು ನಿಂತಿರುವ ದ್ವಿ-ಋತು ಬೆಳೆಗಳನ್ನು ಸಂರಕ್ಷಿಸಲು ಆರು ದಿನಗಳವರೆಗೆ ನೀರನ್ನು ಪೂರೈಸಲಾಗುವುದು, ಈ ನೀರನ್ನು ಕೇವಲ ಬೆಳೆದು ನಿಂತಿರುವ ದ್ವಿ-ಋತು ಬೆಳೆಗಳಿಗೆ ಮಾತ್ರ ಉಪಯೋಗಿಸಬೇಕು ಎಂದು ಹೇಳಿದ್ದಾರೆ.