ವಿಜಯಪುರ: ನಗರ ಸೇರಿದಂತೆ ಹೊರ್ತಿ, ತಿಕೋಟಾ, ಸಿಂದಗಿ ಹಿಪ್ಪರಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಮತ್ತು ರಾತ್ರಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸಾಧಾರಣ ಮಳೆಯಾಗಿದೆ.
ತಿಕೋಟಾ ತಾಲ್ಲೂಕಿನ ಅತಾಲಟ್ಟಿ ಗ್ರಾಮದಲ್ಲಿ ಅಕಾಲಿಕ ಗಾಳಿ ಮಳೆಯಿಂದ ಮನೆ ಹಾಗೂ ಚಪ್ಪರ ಧರೆಗುರುಳಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಮನೆಯ ಮಾಲೀಕ ಶ್ರೀಶೈಲ ಆಗ್ರಹಿಸಿದ್ದಾರೆ.