ನೆರೆಯ ಮಹಾರಾಷ್ಟ್ರದ ಸಾದೇಪುರ ಗ್ರಾಮದ ಅಗಸರ ಎಂಬುವವರಿಗೆ ಸೇರಿದ ಕಬ್ಬನ್ನು ಹಾವಿನಾಳದ ಇಂಡಿಯನ್ ಶುಗರ್ಸ್ ಕಾರ್ಖಾನೆಗೆ ಸಾಗಾಟ ಮಾಡಲಾಗುತ್ತಿತ್ತು. ಟ್ರಾಕ್ಟರ್ ಭೀಮಾನದಿಯ ಉಮರಾಣಿ ಲವಗಿ ಬ್ಯಾರೇಜ್ ಮೇಲೆ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಚಾಲಕ ಈಜಿ ದಡ ಸೇರಿದ್ದಾನೆ. ಕಬ್ಬು ಹಾಗೂ ಟ್ರಾಕ್ಟರ್ ಇಂಜಿನ್, ಟ್ರೈಲರ್ ಗಳು ನದಿಯಲ್ಲಿ ಮುಳುಗಿವೆ.