ವಿಜಯಪುರ: ಅನೈತಿಕ ಸಂಬಂಧದ ಆರೋಪದ ಮೇರೆಗೆ ತಾಲ್ಲೂಕಿನ ಅಲಿಯಾಬಾದ್ ಗ್ರಾಮದ ತೋಟದಲ್ಲಿ(ಮೆಟಗಿ ಹತ್ತಿರ) ಮಂಗಳವಾರ ತಡರಾತ್ರಿ ಇಬ್ಬರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಅಮರನಾಥ ಸೊಲ್ಲಾಪುರ (24) ಮತ್ತು ಸುನೀತಾ ಸಾಬು ಬೆನಕನಹಳ್ಳಿ ಕೊಲೆಯಾಗಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳಾದ ಮಹಿಳೆಯ ತಂದೆ ರಾಮಗೊಂಡ, ಮಗ ರವಿ ಹಾಗೂ ಅನಿಲ್ ಮತ್ತು ಯಲ್ಲಪ್ಪ ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದರು. ವಿಜಯಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.