‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರಾಹುಲ್ ಸಿಂಧೆ ಅವರು, ಇಂಡಿ ಉಪ ವಿಭಾಗಾಧಿಕಾರಿಯಾಗಿ ಈಗಾಗಲೇ ಕಾರ್ಯನಿರ್ವಹಿಸಿರುವುದರಿಂದವಿಜಯಪುರ ಜಿಲ್ಲೆಯ ಕುರಿತು ಒಂದಷ್ಟು ಅನುಭವ ಇದೆ. ಈ ಅನುಭವದೊಂದಿಗೆ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಜನರಿಗೆ ಅನುಕೂಲಕರವಾದ ಕೆಲಸ, ಕಾರ್ಯಗಳನ್ನು ಮಾಡಲಾಗುವುದು ಎಂದು ಹೇಳಿದರು.