<p><strong>ಹೊರ್ತಿ:</strong> ‘ಬಕ್ರೀದ್ ಹಬ್ಬದ ನೆಪದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು. ದನ, ಗೋವುಗಳ ಹತ್ಯೆ ಕಾನೂನು ಬಾಹಿರ. ಪ್ರತಿಯೊಬ್ಬರೂ ಶಾಂತಿ, ಸೌಹಾರ್ದದಿಂದ ಕಾನೂನು ಚೌಕಟ್ಟಿನೊಳಗೆ ಹಬ್ಬ ಆಚರಿಸಬೇಕು’ ಝಳಕಿ ಠಾಣೆ ಪಿಎಸ್ಐ ಮಂಜುನಾಥ ತಿರಕನ್ನವರ ಹೇಳಿದರು.</p>.<p>ಸಮೀಪದ ಝಳಕಿ ಠಾಣೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಠಾಣಾ ವ್ಯಾಪ್ತಿಯ 27 ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ಭಾನುವಾರ ನಡೆದ ಪೂರ್ವಭಾವಿ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ನಮ್ಮಲ್ಲಿರುವಂತಹ ದುಶ್ಚಟ, ಕೆಟ್ಟ ಚಿಂತೆಗಳನ್ನು ದೇವರಲ್ಲಿ ಒಪ್ಪಿಸಿ ಬಲಿ ಕೊಡುವುದು ಮತ್ತು ದೇವರಲ್ಲಿ ಪ್ರಾರ್ಥಿಸುವುದು ಹಬ್ಬಗಳ ಉದ್ದೇಶವಾಗಿದೆ’ ಎಂದು ತಿಳಿಸಿದರು.</p>.<p>ರವಿಕುಮಾರ್ ಹೂಗಾರ ಮಾತನಾಡಿದರು. ಪೊಲೀಸ್ ಸಿಬ್ಬಂದಿ ಎಂ ಎಫ್.ಬಿರಾದಾರ, ಶಂಭುಲಿಂಗ ಪೂಜಾರಿ, ಭೀಮರಾಯ ದೇವರ, ರಾಜು ಲಾಳಸಂಗಿ, ರೇವಣಸಿದ್ಧ ಗೋಡೆಕಾರ, ಮಹೇಶ ಬೆಳ್ಳೆನ್ನವರ, ಹಜರತ ಮುಲ್ಲಾ, ಇಸ್ಮಾಯಿಲ್ ದರ್ಶನಾಳ, ಶೌಕತ್ಅಲಿ ಜಹಗೀರದಾರ, ಜಿಲ್ಹಾನಿ ಮಕಾಂದರ, ರಜಾಕ್ ಭಾಗವಾನ, ಮೀರಾಸಾಬ ಶೇಖ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-26-114053373</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊರ್ತಿ:</strong> ‘ಬಕ್ರೀದ್ ಹಬ್ಬದ ನೆಪದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು. ದನ, ಗೋವುಗಳ ಹತ್ಯೆ ಕಾನೂನು ಬಾಹಿರ. ಪ್ರತಿಯೊಬ್ಬರೂ ಶಾಂತಿ, ಸೌಹಾರ್ದದಿಂದ ಕಾನೂನು ಚೌಕಟ್ಟಿನೊಳಗೆ ಹಬ್ಬ ಆಚರಿಸಬೇಕು’ ಝಳಕಿ ಠಾಣೆ ಪಿಎಸ್ಐ ಮಂಜುನಾಥ ತಿರಕನ್ನವರ ಹೇಳಿದರು.</p>.<p>ಸಮೀಪದ ಝಳಕಿ ಠಾಣೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಠಾಣಾ ವ್ಯಾಪ್ತಿಯ 27 ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ಭಾನುವಾರ ನಡೆದ ಪೂರ್ವಭಾವಿ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ನಮ್ಮಲ್ಲಿರುವಂತಹ ದುಶ್ಚಟ, ಕೆಟ್ಟ ಚಿಂತೆಗಳನ್ನು ದೇವರಲ್ಲಿ ಒಪ್ಪಿಸಿ ಬಲಿ ಕೊಡುವುದು ಮತ್ತು ದೇವರಲ್ಲಿ ಪ್ರಾರ್ಥಿಸುವುದು ಹಬ್ಬಗಳ ಉದ್ದೇಶವಾಗಿದೆ’ ಎಂದು ತಿಳಿಸಿದರು.</p>.<p>ರವಿಕುಮಾರ್ ಹೂಗಾರ ಮಾತನಾಡಿದರು. ಪೊಲೀಸ್ ಸಿಬ್ಬಂದಿ ಎಂ ಎಫ್.ಬಿರಾದಾರ, ಶಂಭುಲಿಂಗ ಪೂಜಾರಿ, ಭೀಮರಾಯ ದೇವರ, ರಾಜು ಲಾಳಸಂಗಿ, ರೇವಣಸಿದ್ಧ ಗೋಡೆಕಾರ, ಮಹೇಶ ಬೆಳ್ಳೆನ್ನವರ, ಹಜರತ ಮುಲ್ಲಾ, ಇಸ್ಮಾಯಿಲ್ ದರ್ಶನಾಳ, ಶೌಕತ್ಅಲಿ ಜಹಗೀರದಾರ, ಜಿಲ್ಹಾನಿ ಮಕಾಂದರ, ರಜಾಕ್ ಭಾಗವಾನ, ಮೀರಾಸಾಬ ಶೇಖ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-26-114053373</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>