<p><strong>ಚಿಂಚೋಳಿ</strong>: ಪ್ರವಾಸ ಮುಗಿಸಿಕೊಂಡು ಊರಿಗೆ ಬರುತ್ತಿದ್ದ ಕಾರೊಂದು ಅಪಘಾತಕ್ಕೀಡಾದ ಘಟನೆಯಲ್ಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ರೋಣಿಹಾಳ ಬಳಿ ಸಂಭವಿಸಿದೆ.</p>.<p>ಚಿಂಚೋಳಿ ಪಟ್ಟಣದ ಐದು ಜನ ಯುವಕರು ಕಾರಿನಲ್ಲಿ ತೆರಳಿ ಪ್ರವಾಸ ಮುಗಿಸಿಕೊಂಡು ವಾಪಸ್ಸಾಗುವ ವೇಳೆ ಸಂಭವಿಸಿದ ಅಪಘಾತದಲ್ಲಿ ಓರ್ವ ಯುವಕನ ಜೀವನದ ಪಯಣ ಅಂತ್ಯವಾಗಿದ್ದರೆ ನಾಲ್ವರು ಯುವಕರು ಗಾಯಗೊಂಡಿದ್ದಾರೆ.</p>.<p>ಪಟ್ಟಣದ ಸಿದ್ಧಸಿರಿ ಸೌಹಾರ್ದ ಸಹಕಾರಿಯಲ್ಲಿ ಪಿಗ್ಮಿ ಸಂಗ್ರಹಿಸುವುದರ ಜತೆಗೆ ಸಿದ್ಧಸಿರಿ ಅತಿಥಿಗೃಹ ಮೇಲ್ವಿಚಾರಣೆ ಮಾಡುತ್ತಿದ್ದ ಉದ್ಯೋಗಿ ಸುನೀಲ ಶಾಂತಕುಮಾರ ಮನ್ನಳ್ಳಿ (26) ಮಂಗಳವಾರ ನಸುಕಿನ ಜಾವ ಅಸುನೀಗಿದ್ದಾರೆ. ಘಟನೆಯಲ್ಲಿ ಚನ್ನಬಸವ ಹಲಚೇರಿ, ಪ್ರದೀಪ ಬೀರನಳ್ಳಿ, ಪವನ ಗುರಂಪಳ್ಳಿ, ಸಂಗಮೇಶ ಗಾಯಗೊಂಡಿದ್ದಾರೆ.</p>.<p>ನಸುಕಿನ ಜಾವ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ತಲೆ ಕೆಳಗಾಗಿ ಬಿದ್ದಿದೆ. ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುವ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಯುವಕ ಹೀಗೆ ದುರ್ಮರಣಕ್ಕಿಡಾಗಿದ್ದು, ಅವರ ಸ್ನೇಹಿತರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದಂತಾಗಿದೆ.</p>.<p>ಬಾಳಿ ಬದುಕಬೇಕಿದ್ದ ಜೀವವೊಂದು ಅರಳುವ ಮೊದಲೇ ಕಮರಿದೆ. ಸಿದ್ಧಸಿರಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಂಸ್ಥೆಯ ಸಂಸ್ಥಾಪಕರು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಮತ್ತು ಅವರ ಪುತ್ರ ರಾಮನಗೌಡರಿಗೂ ಆಪ್ತನಾಗಿದ್ದನು.</p>.<p>ಛತ್ರಪತಿ ಶಿವಾಜಿ ಜಯಂತಿ, ಬಸವೇಶ್ವರ ಜಯಂತಿ ಸೇರಿದಂತೆ ಜಾತ್ರೆ, ಜಯಂತ್ಯುತ್ಸವಗಳಲ್ಲಿ ಮಿಂಚಿನಂತೆ ಸಂಚರಿಸುತ್ತಿದ್ದ ಯುವಕ ಇಷ್ಟು ಬೇಗ ಕಣ್ಮರೆಯಾಗುತ್ತಾನೆ ಎಂದು ಯಾರು ಉಹಿಸಿರಲಿಲ್ಲ. ಮೃತನಿಗೆ ತಂದೆ–ತಾಯಿ ಹಾಗೂ ಒಬ್ಬ ಸಹೋದರ ಇದ್ದಾರೆ.</p>.<p>ಮೃತನ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-34-1845460140</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ಪ್ರವಾಸ ಮುಗಿಸಿಕೊಂಡು ಊರಿಗೆ ಬರುತ್ತಿದ್ದ ಕಾರೊಂದು ಅಪಘಾತಕ್ಕೀಡಾದ ಘಟನೆಯಲ್ಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ರೋಣಿಹಾಳ ಬಳಿ ಸಂಭವಿಸಿದೆ.</p>.<p>ಚಿಂಚೋಳಿ ಪಟ್ಟಣದ ಐದು ಜನ ಯುವಕರು ಕಾರಿನಲ್ಲಿ ತೆರಳಿ ಪ್ರವಾಸ ಮುಗಿಸಿಕೊಂಡು ವಾಪಸ್ಸಾಗುವ ವೇಳೆ ಸಂಭವಿಸಿದ ಅಪಘಾತದಲ್ಲಿ ಓರ್ವ ಯುವಕನ ಜೀವನದ ಪಯಣ ಅಂತ್ಯವಾಗಿದ್ದರೆ ನಾಲ್ವರು ಯುವಕರು ಗಾಯಗೊಂಡಿದ್ದಾರೆ.</p>.<p>ಪಟ್ಟಣದ ಸಿದ್ಧಸಿರಿ ಸೌಹಾರ್ದ ಸಹಕಾರಿಯಲ್ಲಿ ಪಿಗ್ಮಿ ಸಂಗ್ರಹಿಸುವುದರ ಜತೆಗೆ ಸಿದ್ಧಸಿರಿ ಅತಿಥಿಗೃಹ ಮೇಲ್ವಿಚಾರಣೆ ಮಾಡುತ್ತಿದ್ದ ಉದ್ಯೋಗಿ ಸುನೀಲ ಶಾಂತಕುಮಾರ ಮನ್ನಳ್ಳಿ (26) ಮಂಗಳವಾರ ನಸುಕಿನ ಜಾವ ಅಸುನೀಗಿದ್ದಾರೆ. ಘಟನೆಯಲ್ಲಿ ಚನ್ನಬಸವ ಹಲಚೇರಿ, ಪ್ರದೀಪ ಬೀರನಳ್ಳಿ, ಪವನ ಗುರಂಪಳ್ಳಿ, ಸಂಗಮೇಶ ಗಾಯಗೊಂಡಿದ್ದಾರೆ.</p>.<p>ನಸುಕಿನ ಜಾವ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ತಲೆ ಕೆಳಗಾಗಿ ಬಿದ್ದಿದೆ. ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುವ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಯುವಕ ಹೀಗೆ ದುರ್ಮರಣಕ್ಕಿಡಾಗಿದ್ದು, ಅವರ ಸ್ನೇಹಿತರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದಂತಾಗಿದೆ.</p>.<p>ಬಾಳಿ ಬದುಕಬೇಕಿದ್ದ ಜೀವವೊಂದು ಅರಳುವ ಮೊದಲೇ ಕಮರಿದೆ. ಸಿದ್ಧಸಿರಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಂಸ್ಥೆಯ ಸಂಸ್ಥಾಪಕರು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಮತ್ತು ಅವರ ಪುತ್ರ ರಾಮನಗೌಡರಿಗೂ ಆಪ್ತನಾಗಿದ್ದನು.</p>.<p>ಛತ್ರಪತಿ ಶಿವಾಜಿ ಜಯಂತಿ, ಬಸವೇಶ್ವರ ಜಯಂತಿ ಸೇರಿದಂತೆ ಜಾತ್ರೆ, ಜಯಂತ್ಯುತ್ಸವಗಳಲ್ಲಿ ಮಿಂಚಿನಂತೆ ಸಂಚರಿಸುತ್ತಿದ್ದ ಯುವಕ ಇಷ್ಟು ಬೇಗ ಕಣ್ಮರೆಯಾಗುತ್ತಾನೆ ಎಂದು ಯಾರು ಉಹಿಸಿರಲಿಲ್ಲ. ಮೃತನಿಗೆ ತಂದೆ–ತಾಯಿ ಹಾಗೂ ಒಬ್ಬ ಸಹೋದರ ಇದ್ದಾರೆ.</p>.<p>ಮೃತನ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-34-1845460140</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>