<p>ವಿಜಯಪುರ: ‘ಭವಿಷ್ಯದಲ್ಲಿ ದೇಶದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಜನಗಣತಿಯೇ ಆಧಾರ’ ಎಂದು ಜಿಲ್ಲಾ ಆರ್ಥಿಕ ಮತ್ತು ಸಾಂಖ್ಯಿಕ ಅಧಿಕಾರಿ ಜ್ಯೋತಿ ದೇಶಪಾಂಡೆ ಹೇಳಿದರು.</p>.<p>ನಗರದ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ `ಜನಗಣತಿ ಸಮಾಜದ ಪ್ರಗತಿಗೆ ಆಧಾರ' ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ಸರ್ಕಾರ ನಮ್ಮ ತಂದೆ ತಾಯಿ ಇದ್ದ ಹಾಗೆ, ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಹೇಗೆ ಯೋಜನೆಗಳನ್ನು ರೂಪಿಸುತ್ತಾರೋ, ಹಾಗೆ ದೇಶದ ಅಭಿವೃದ್ಧಿ ಹಾಗೂ ದೇಶದ ಜನರಿಗಾಗಿ ಯೋಜನೆಗಳನ್ನು ರೂಪಿಸಲು ಸರ್ಕಾರ ಜನಗಣತಿಯನ್ನು ನಡೆಸುತ್ತದೆ’ ಎಂದರು.</p>.<p>ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕ ಎ.ಬಿ ಮಣಿಕಾರ ಮಾತನಾಡಿ, ‘ದೇಶದ ಅಭಿವೃದ್ಧಿಗೆ, ಯೋಜನೆಗಳಿಗೆ, ಸಂಪನ್ಮೂಲ ಹಂಚಿಕೆಗೆ ಮತ್ತು ನೀತಿ -ನಿರೂಪಣೆಗೆ ಅಗತ್ಯವಾದ ಅಧಿಕೃತ ದತ್ತಾಂಶವೇ ಜನಗಣತಿ’ ಎಂದರು.</p>.<p>ವಿ.ಬಿ. ದರಬಾರ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ನಾಗರಾಜ್ ಮಾತನಾಡಿ, ‘ಜನಗಣತಿ ಎಂದರೆ ಸರ್ಕಾರದ ನೀತಿ - ನಿಯಮಗಳನ್ನು ರೂಪಿಸಲು, ಯೋಜನೆಗಳನ್ನು ಕಲ್ಪಿಸಲು ಎಲ್ಲ ವರ್ಗದವರ ಮಾಹಿತಿಯನ್ನು ಕಲೆ ಹಾಕುವುದು ಇದರ ಪ್ರಮುಖ ಉದ್ದೇಶವಾಗಿದ್ದು, ಇಲ್ಲಿ ಅಂಕಿ- ಅಂಶಗಳು ನಿಖರವಾಗಿರಬೇಕು ಮತ್ತು ಯಾವುದೇ ದೋಷಗಳಿಲ್ಲದೆ ಯಶಸ್ವಿಯಾಗಿ ಜನಗಣತಿ ನಡೆಸಬೇಕೆಂದರೆ, ನಾವು ಮಾಹಿತಿ ಹಂಚಿಕೆಯನ್ನು ಸರಿಯಾಗಿ ನೀಡಬೇಕು ಮತ್ತು ಪ್ರತಿಯೊಬ್ಬರು ಜನಗಣತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇಶದ ಅಭಿವೃದ್ಧಿಗೆ ನಾವೆಲ್ಲರೂ ಪಾಲುದಾರರಾಗಬೇಕು’ ಎಂದರು.</p>.<p>ಪ್ರಾಚಾರ್ಯ ಜಿ.ಎಚ್. ಮಣ್ಣೂರ, ಸಮಾಜಶಾಸ್ತ್ರದ ಉಪನ್ಯಾಸಕ ಕೆ.ಡಿ. ಚೌಹಾಣ್ ಮಾತನಾಡಿದರು.</p>.<p>ಸುಭಾಷ್ ಪಾಟೀಲ್, ಎಂ.ಕೆ.ಕುಂಬಾರ್, ಭೂಗೋಳಶಾಸ್ತ್ರ ವಿಭಾಗದ ಉಪನ್ಯಾಸಕ ಎಂ.ಎಚ್. ಕೋಟ್ಯಾಲ, ಸೀಮಾ ಪಾಟೀಲ್, ಸ್ಮೀತಾ ದೇಸಾಯಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260430-26-2008926710</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ‘ಭವಿಷ್ಯದಲ್ಲಿ ದೇಶದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಜನಗಣತಿಯೇ ಆಧಾರ’ ಎಂದು ಜಿಲ್ಲಾ ಆರ್ಥಿಕ ಮತ್ತು ಸಾಂಖ್ಯಿಕ ಅಧಿಕಾರಿ ಜ್ಯೋತಿ ದೇಶಪಾಂಡೆ ಹೇಳಿದರು.</p>.<p>ನಗರದ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ `ಜನಗಣತಿ ಸಮಾಜದ ಪ್ರಗತಿಗೆ ಆಧಾರ' ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ಸರ್ಕಾರ ನಮ್ಮ ತಂದೆ ತಾಯಿ ಇದ್ದ ಹಾಗೆ, ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಹೇಗೆ ಯೋಜನೆಗಳನ್ನು ರೂಪಿಸುತ್ತಾರೋ, ಹಾಗೆ ದೇಶದ ಅಭಿವೃದ್ಧಿ ಹಾಗೂ ದೇಶದ ಜನರಿಗಾಗಿ ಯೋಜನೆಗಳನ್ನು ರೂಪಿಸಲು ಸರ್ಕಾರ ಜನಗಣತಿಯನ್ನು ನಡೆಸುತ್ತದೆ’ ಎಂದರು.</p>.<p>ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕ ಎ.ಬಿ ಮಣಿಕಾರ ಮಾತನಾಡಿ, ‘ದೇಶದ ಅಭಿವೃದ್ಧಿಗೆ, ಯೋಜನೆಗಳಿಗೆ, ಸಂಪನ್ಮೂಲ ಹಂಚಿಕೆಗೆ ಮತ್ತು ನೀತಿ -ನಿರೂಪಣೆಗೆ ಅಗತ್ಯವಾದ ಅಧಿಕೃತ ದತ್ತಾಂಶವೇ ಜನಗಣತಿ’ ಎಂದರು.</p>.<p>ವಿ.ಬಿ. ದರಬಾರ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ನಾಗರಾಜ್ ಮಾತನಾಡಿ, ‘ಜನಗಣತಿ ಎಂದರೆ ಸರ್ಕಾರದ ನೀತಿ - ನಿಯಮಗಳನ್ನು ರೂಪಿಸಲು, ಯೋಜನೆಗಳನ್ನು ಕಲ್ಪಿಸಲು ಎಲ್ಲ ವರ್ಗದವರ ಮಾಹಿತಿಯನ್ನು ಕಲೆ ಹಾಕುವುದು ಇದರ ಪ್ರಮುಖ ಉದ್ದೇಶವಾಗಿದ್ದು, ಇಲ್ಲಿ ಅಂಕಿ- ಅಂಶಗಳು ನಿಖರವಾಗಿರಬೇಕು ಮತ್ತು ಯಾವುದೇ ದೋಷಗಳಿಲ್ಲದೆ ಯಶಸ್ವಿಯಾಗಿ ಜನಗಣತಿ ನಡೆಸಬೇಕೆಂದರೆ, ನಾವು ಮಾಹಿತಿ ಹಂಚಿಕೆಯನ್ನು ಸರಿಯಾಗಿ ನೀಡಬೇಕು ಮತ್ತು ಪ್ರತಿಯೊಬ್ಬರು ಜನಗಣತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇಶದ ಅಭಿವೃದ್ಧಿಗೆ ನಾವೆಲ್ಲರೂ ಪಾಲುದಾರರಾಗಬೇಕು’ ಎಂದರು.</p>.<p>ಪ್ರಾಚಾರ್ಯ ಜಿ.ಎಚ್. ಮಣ್ಣೂರ, ಸಮಾಜಶಾಸ್ತ್ರದ ಉಪನ್ಯಾಸಕ ಕೆ.ಡಿ. ಚೌಹಾಣ್ ಮಾತನಾಡಿದರು.</p>.<p>ಸುಭಾಷ್ ಪಾಟೀಲ್, ಎಂ.ಕೆ.ಕುಂಬಾರ್, ಭೂಗೋಳಶಾಸ್ತ್ರ ವಿಭಾಗದ ಉಪನ್ಯಾಸಕ ಎಂ.ಎಚ್. ಕೋಟ್ಯಾಲ, ಸೀಮಾ ಪಾಟೀಲ್, ಸ್ಮೀತಾ ದೇಸಾಯಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260430-26-2008926710</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>