<p>ವಿಜಯಪುರ: ‘ವಿವಿಧ ದೇಶಗಳ ಆಂತರಿಕ ಕಲಹಗಳಿಂದ ಜೀವ ಸಂಕುಲ ನಷ್ಟಕ್ಕೀಡಾಗುತ್ತಿದೆ. ಇದರಿಂದ ಅನಾರೋಗ್ಯ, ಆಹಾರದ ಕೊರತೆ, ಮೂಲಸೌಲಭ್ಯಗಳ ಕೊರತೆ ಉಂಟಾಗಿ, ಮಾನವ ಹಕ್ಕಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ’ ಎಂದು ಬಿಎಲ್ಡಿಇ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ರಘುವೀರ ಕುಲಕರ್ಣಿ ವಿಷಾದಿಸಿದರು.</p>.<p>ನಗರದ ಬಿಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿಪಿ. ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ ಮಾನವ ಹಕ್ಕುಗಳ ಕೋಶ ಮತ್ತು ರಾಜ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಜರುಗಿದ ‘ಯುದ್ಧದ ಪರಿಣಾಮ: ಮಾನವ ಹಕ್ಕುಗಳ ದೃಷ್ಟಿಕೋನ’ ಎಂಬ ವಿಷಯದ ಕುರಿತು ಉಪನ್ಯಾಸ ಮಂಡಿಸಿದ ಅವರು, ‘ಯುದ್ಧದಿಂದಾಗಿ ಪರಿಸರ ವಿನಾಶ, ಅಲ್ಲದೆ ಶೈಕ್ಷಣಿಕ ಚಟುಚವಟಕೆಗಳಿಗೆ ಧಕ್ಕೆಯಾಗಿ ಮಕ್ಕಳು ಮತ್ತೊಂದು ಚಟಕ್ಕೆ ದಾಸರಾಗಿ ಹೊರಹೊಮ್ಮುತ್ತಾರೆ. ಇಂತಹ ಸಂದಭದಲ್ಲಿ ಮಾನವ ಹಕ್ಕಗಳನ್ನು ಉಲ್ಲಂಘನೆಯಾಗುತ್ತದೆ ಎಂಬುದು ಗಮನಿಸಬಹುದಾಗಿದೆ’ ಎಂದು ವಿಶ್ಲೇಷಿಸಿದರು.</p>.<p>‘ಮೊದಲನೇ ಮತ್ತು ಎರಡನೇ ಜಾಗತಿಕ ಯುದ್ದಗಳು ಅಲ್ಲದೆ ವಾಸ್ತವದಲ್ಲಿ ಅಮೇರಿಕ, ಇಸ್ರೇಲ್ ಮತ್ತು ಇರಾನ್, ಲೆಬನಾನ್, ದೇಶಗಳ ನಡುವಿನ ಯುದ್ದದ ಪರಿಣಾಮದಿಂದಾಗಿ ಅಪಾರ ಹಾನಿಯನ್ನು ಇಲ್ಲಿ ಗಮನಿಸಬಹುದಾಗಿದೆ. ಇದರಲ್ಲಿ ಮಹಳೆಯರು ಮತ್ತು ಮಕ್ಕಳು ಬಲಿಯಾಗುತ್ತಿದ್ದಾರೆ’ ಎಂದು ತಿಳಿಸಿದರು.</p>.<p>‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವುಗಳು ಮಾನವ ಹಕ್ಕುಗಳ ಅಡಿಯಲ್ಲಿ ಬದುಕುತ್ತಿದ್ದೇವೆ. ಅದರ ಅರಿವು ನಮಗಿರಬೇಕು. ಸದ್ಯ ಮಾನವ ಹಕ್ಕುಗಳನ್ನು ದಮನಿತ ಗೊಳಿಸಲಾಗತ್ತಿದೆ ಎಂಬುದು ಶೋಚನೀಯ ಸಂಗತಿಯಾಗಿದೆ’ ಎಂದರು.</p>.<p>ಪ್ರಾಚಾರ್ಯ ಅನಿಲ್ ಬಿ. ನಾಯಕ, ಪಿ. ಎಸ್. ಪಾಟೀಲ, ತರನ್ನುಮ್ ಜಬೀನ್ ಖಾನ್, ಪ್ರೊ.ರೂಪಾ ಮೋಟಗಿ, ಗಿರೀಶ ಹನಮರೆಡ್ಡಿ, ಆರ್.ಜಿ.ಕಮತರ, ಎಂ.ಬಿ.ಪಾಟೀಲ, ಭೀಮಶಿ ಮದರಕಂಡಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-26-461294289</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ‘ವಿವಿಧ ದೇಶಗಳ ಆಂತರಿಕ ಕಲಹಗಳಿಂದ ಜೀವ ಸಂಕುಲ ನಷ್ಟಕ್ಕೀಡಾಗುತ್ತಿದೆ. ಇದರಿಂದ ಅನಾರೋಗ್ಯ, ಆಹಾರದ ಕೊರತೆ, ಮೂಲಸೌಲಭ್ಯಗಳ ಕೊರತೆ ಉಂಟಾಗಿ, ಮಾನವ ಹಕ್ಕಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ’ ಎಂದು ಬಿಎಲ್ಡಿಇ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ರಘುವೀರ ಕುಲಕರ್ಣಿ ವಿಷಾದಿಸಿದರು.</p>.<p>ನಗರದ ಬಿಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿಪಿ. ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ ಮಾನವ ಹಕ್ಕುಗಳ ಕೋಶ ಮತ್ತು ರಾಜ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಜರುಗಿದ ‘ಯುದ್ಧದ ಪರಿಣಾಮ: ಮಾನವ ಹಕ್ಕುಗಳ ದೃಷ್ಟಿಕೋನ’ ಎಂಬ ವಿಷಯದ ಕುರಿತು ಉಪನ್ಯಾಸ ಮಂಡಿಸಿದ ಅವರು, ‘ಯುದ್ಧದಿಂದಾಗಿ ಪರಿಸರ ವಿನಾಶ, ಅಲ್ಲದೆ ಶೈಕ್ಷಣಿಕ ಚಟುಚವಟಕೆಗಳಿಗೆ ಧಕ್ಕೆಯಾಗಿ ಮಕ್ಕಳು ಮತ್ತೊಂದು ಚಟಕ್ಕೆ ದಾಸರಾಗಿ ಹೊರಹೊಮ್ಮುತ್ತಾರೆ. ಇಂತಹ ಸಂದಭದಲ್ಲಿ ಮಾನವ ಹಕ್ಕಗಳನ್ನು ಉಲ್ಲಂಘನೆಯಾಗುತ್ತದೆ ಎಂಬುದು ಗಮನಿಸಬಹುದಾಗಿದೆ’ ಎಂದು ವಿಶ್ಲೇಷಿಸಿದರು.</p>.<p>‘ಮೊದಲನೇ ಮತ್ತು ಎರಡನೇ ಜಾಗತಿಕ ಯುದ್ದಗಳು ಅಲ್ಲದೆ ವಾಸ್ತವದಲ್ಲಿ ಅಮೇರಿಕ, ಇಸ್ರೇಲ್ ಮತ್ತು ಇರಾನ್, ಲೆಬನಾನ್, ದೇಶಗಳ ನಡುವಿನ ಯುದ್ದದ ಪರಿಣಾಮದಿಂದಾಗಿ ಅಪಾರ ಹಾನಿಯನ್ನು ಇಲ್ಲಿ ಗಮನಿಸಬಹುದಾಗಿದೆ. ಇದರಲ್ಲಿ ಮಹಳೆಯರು ಮತ್ತು ಮಕ್ಕಳು ಬಲಿಯಾಗುತ್ತಿದ್ದಾರೆ’ ಎಂದು ತಿಳಿಸಿದರು.</p>.<p>‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವುಗಳು ಮಾನವ ಹಕ್ಕುಗಳ ಅಡಿಯಲ್ಲಿ ಬದುಕುತ್ತಿದ್ದೇವೆ. ಅದರ ಅರಿವು ನಮಗಿರಬೇಕು. ಸದ್ಯ ಮಾನವ ಹಕ್ಕುಗಳನ್ನು ದಮನಿತ ಗೊಳಿಸಲಾಗತ್ತಿದೆ ಎಂಬುದು ಶೋಚನೀಯ ಸಂಗತಿಯಾಗಿದೆ’ ಎಂದರು.</p>.<p>ಪ್ರಾಚಾರ್ಯ ಅನಿಲ್ ಬಿ. ನಾಯಕ, ಪಿ. ಎಸ್. ಪಾಟೀಲ, ತರನ್ನುಮ್ ಜಬೀನ್ ಖಾನ್, ಪ್ರೊ.ರೂಪಾ ಮೋಟಗಿ, ಗಿರೀಶ ಹನಮರೆಡ್ಡಿ, ಆರ್.ಜಿ.ಕಮತರ, ಎಂ.ಬಿ.ಪಾಟೀಲ, ಭೀಮಶಿ ಮದರಕಂಡಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-26-461294289</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>