<p><strong>ದೇವರಹಿಪ್ಪರಗಿ:</strong> ಜ್ಞಾನ, ಶಾಂತಿ, ಸಮಾನತೆ ಮತ್ತು ಸಹೋದರತ್ವದ ಮೌಲ್ಯ ಗಳನ್ನು ಪರಿಚಯಿಸುವ ಕೇಂದ್ರವಾಗಿ ಬೆಳೆಯಬೇಕಾಗಿದ್ದ ಇಲ್ಲಿನ ಉದ್ದೇಶಿತ ಬುದ್ಧವಿಹಾರ ನಿರ್ಮಾಣ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು, ಸರ್ಕಾರ ಹಾಗೂ ದಾನಿಗಳು ಈ ಕುರಿತು ಗಮನ ಹರಿಸಬೇಕಾಗಿದೆ.</p>.<p>ತಾಲ್ಲೂಕಿನ ಕಡಕೋಳ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ 2017ರ ಮೇ 28 ರಂದು ವಿಶ್ವರತ್ನ ಬುದ್ಧವಿಹಾರ ಟ್ರಸ್ಟ್(ರಿ) ಅಡಿಯಲ್ಲಿ ಅಂದಿನ ಶಾಸಕ ಹಾಗೂ ಭಂತೆ ಪೂಜ್ಯರಿಂದ ಅಡಿಗಲ್ಲು ನೆರವೇರಿಸಿ ಶಾಸಕರ ಅನುದಾನದ ಮೂಲಕ ಸುಮಾರು ₹1.50 ಕೋಟಿ ವೆಚ್ಚದಲ್ಲಿ ಡಾ.ಅಂಬೇಡ್ಕರ್ ಭವನ, ಬುದ್ಧ ವಿಹಾರ, ಗ್ರಂಥಾಲಯ, ಉದ್ಯಾನ, ಧ್ಯಾನಕೇಂದ್ರ ಹಾಗೂ ಯಾತ್ರಿನಿವಾಸ ಸಹಿತ ಮಹತ್ವಾಕಾಂಕ್ಷೆಯ ಯೋಜನೆಯಾಗಿ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ನಂತರ ಅನುದಾನ ಕೊರತೆಯಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತು.</p>.<p>ಬುದ್ಧವಿಹಾರ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಚಂದ್ರಶೇಖರ ಕಡಕೋಳ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಬುದ್ಧವಿಹಾರ ಕಟ್ಟಡದ ಮೂಲಭಾಗದ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡರೂ ಅಂತಿಮ ಹಂತದ ಕೆಲಸಗಳು ಸ್ಥಗಿತಗೊಂಡಿವೆ. ಇನ್ನೂ ಹೆಚ್ಚು ಕಾಲ ಇದೇ ಸ್ಥಿತಿಯಲ್ಲಿ ಉಳಿದರೆ ಈಗಾಗಲೇ ನಿರ್ಮಾಣವಾದ ಕಟ್ಟಡ ಹಾನಿಗೊಳಗಾಗುವ ಭೀತಿ ಎದುರಾಗಿದೆ’ ಎಂದರು.</p>.<p>‘ಸರ್ಕಾರ ಈಗಾಗಲೇ ಮಂಜೂರು ಮಾಡಲಾದ ₹1.50 ಕೋಟಿಗೆ ಹೆಚ್ಚುವರಿ ಯಾಗಿ ಅಗತ್ಯವಾದ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಿ, ಸ್ಥಗಿತಗೊಂಡಿರುವ ಈ ಮಹತ್ವದ ಯೋಜನೆ ಯನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<p>ಇದು ಸ್ಥಳೀಯರಿಗೆ ಮಾತ್ರವಲ್ಲ ರಾಜ್ಯದ ವಿವಿಧ ಭಾಗಗಳಿಂದ ಬರುವ ಯಾತ್ರಿಕರು, ಅಂಬೇಡ್ಕರ್ ಅಭಿ ಮಾನಿಗಳು ಮತ್ತು ಬೌದ್ಧ ಧಮ್ಮದ ಅನುಯಾಯಿಗಳಿಗೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಸಮಾಜದ ದಾನಶೀಲ ವ್ಯಕ್ತಿಗಳು, ಡಾ.ಅಂಬೇಡ್ಕರ್ ಅನುಯಾಯಿಗಳು ಹಾಗೂ ಬೌದ್ಧಧಮ್ಮದ ಅನುಯಾಯಿ ಗಳು ದಾನದ ಮೂಲಕ ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.</p>.<p>‘ನಿರ್ಮಾಣದ ಕೊನೆಯ ಹಂತದಲ್ಲಿ ನಿಂತಿರುವ ಈ ಬುದ್ಧ ವಿಹಾರ ಶೀಘ್ರದಲ್ಲೇ ಪೂರ್ಣಗೊಂಡು ಸಮಾಜದ ಸೇವೆಗೆ ಸಮರ್ಪಿತವಾಗಲಿದೆ ಎಂಬ ವಿಶ್ವಾಸ ನಮ್ಮದು’ ಎನ್ನುತ್ತಾರೆ ವಿಶ್ವರತ್ನ ಬುದ್ಧವಿಹಾರ ಇಂಡಿಯಾ ಫೌಂಡೇಷನ್ ಉಪಾಧ್ಯಕ್ಷ ಭಾಸ್ಕರ್ ದೊಡಮನಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವರಹಿಪ್ಪರಗಿ:</strong> ಜ್ಞಾನ, ಶಾಂತಿ, ಸಮಾನತೆ ಮತ್ತು ಸಹೋದರತ್ವದ ಮೌಲ್ಯ ಗಳನ್ನು ಪರಿಚಯಿಸುವ ಕೇಂದ್ರವಾಗಿ ಬೆಳೆಯಬೇಕಾಗಿದ್ದ ಇಲ್ಲಿನ ಉದ್ದೇಶಿತ ಬುದ್ಧವಿಹಾರ ನಿರ್ಮಾಣ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು, ಸರ್ಕಾರ ಹಾಗೂ ದಾನಿಗಳು ಈ ಕುರಿತು ಗಮನ ಹರಿಸಬೇಕಾಗಿದೆ.</p>.<p>ತಾಲ್ಲೂಕಿನ ಕಡಕೋಳ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ 2017ರ ಮೇ 28 ರಂದು ವಿಶ್ವರತ್ನ ಬುದ್ಧವಿಹಾರ ಟ್ರಸ್ಟ್(ರಿ) ಅಡಿಯಲ್ಲಿ ಅಂದಿನ ಶಾಸಕ ಹಾಗೂ ಭಂತೆ ಪೂಜ್ಯರಿಂದ ಅಡಿಗಲ್ಲು ನೆರವೇರಿಸಿ ಶಾಸಕರ ಅನುದಾನದ ಮೂಲಕ ಸುಮಾರು ₹1.50 ಕೋಟಿ ವೆಚ್ಚದಲ್ಲಿ ಡಾ.ಅಂಬೇಡ್ಕರ್ ಭವನ, ಬುದ್ಧ ವಿಹಾರ, ಗ್ರಂಥಾಲಯ, ಉದ್ಯಾನ, ಧ್ಯಾನಕೇಂದ್ರ ಹಾಗೂ ಯಾತ್ರಿನಿವಾಸ ಸಹಿತ ಮಹತ್ವಾಕಾಂಕ್ಷೆಯ ಯೋಜನೆಯಾಗಿ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ನಂತರ ಅನುದಾನ ಕೊರತೆಯಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತು.</p>.<p>ಬುದ್ಧವಿಹಾರ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಚಂದ್ರಶೇಖರ ಕಡಕೋಳ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಬುದ್ಧವಿಹಾರ ಕಟ್ಟಡದ ಮೂಲಭಾಗದ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡರೂ ಅಂತಿಮ ಹಂತದ ಕೆಲಸಗಳು ಸ್ಥಗಿತಗೊಂಡಿವೆ. ಇನ್ನೂ ಹೆಚ್ಚು ಕಾಲ ಇದೇ ಸ್ಥಿತಿಯಲ್ಲಿ ಉಳಿದರೆ ಈಗಾಗಲೇ ನಿರ್ಮಾಣವಾದ ಕಟ್ಟಡ ಹಾನಿಗೊಳಗಾಗುವ ಭೀತಿ ಎದುರಾಗಿದೆ’ ಎಂದರು.</p>.<p>‘ಸರ್ಕಾರ ಈಗಾಗಲೇ ಮಂಜೂರು ಮಾಡಲಾದ ₹1.50 ಕೋಟಿಗೆ ಹೆಚ್ಚುವರಿ ಯಾಗಿ ಅಗತ್ಯವಾದ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಿ, ಸ್ಥಗಿತಗೊಂಡಿರುವ ಈ ಮಹತ್ವದ ಯೋಜನೆ ಯನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<p>ಇದು ಸ್ಥಳೀಯರಿಗೆ ಮಾತ್ರವಲ್ಲ ರಾಜ್ಯದ ವಿವಿಧ ಭಾಗಗಳಿಂದ ಬರುವ ಯಾತ್ರಿಕರು, ಅಂಬೇಡ್ಕರ್ ಅಭಿ ಮಾನಿಗಳು ಮತ್ತು ಬೌದ್ಧ ಧಮ್ಮದ ಅನುಯಾಯಿಗಳಿಗೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಸಮಾಜದ ದಾನಶೀಲ ವ್ಯಕ್ತಿಗಳು, ಡಾ.ಅಂಬೇಡ್ಕರ್ ಅನುಯಾಯಿಗಳು ಹಾಗೂ ಬೌದ್ಧಧಮ್ಮದ ಅನುಯಾಯಿ ಗಳು ದಾನದ ಮೂಲಕ ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.</p>.<p>‘ನಿರ್ಮಾಣದ ಕೊನೆಯ ಹಂತದಲ್ಲಿ ನಿಂತಿರುವ ಈ ಬುದ್ಧ ವಿಹಾರ ಶೀಘ್ರದಲ್ಲೇ ಪೂರ್ಣಗೊಂಡು ಸಮಾಜದ ಸೇವೆಗೆ ಸಮರ್ಪಿತವಾಗಲಿದೆ ಎಂಬ ವಿಶ್ವಾಸ ನಮ್ಮದು’ ಎನ್ನುತ್ತಾರೆ ವಿಶ್ವರತ್ನ ಬುದ್ಧವಿಹಾರ ಇಂಡಿಯಾ ಫೌಂಡೇಷನ್ ಉಪಾಧ್ಯಕ್ಷ ಭಾಸ್ಕರ್ ದೊಡಮನಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>