<p><strong>ಹೊರ್ತಿ</strong>: ‘ಜೇವೂರಿನ ಹಠಯೋಗಿ ರೇವಣಸಿದ್ಧೇಶ್ವರರು ಬೇಡಿದ್ದನ್ನು ಕರುಣಿಸುವ ಕೃಪಾಮಯಿ ಪವಾಡ ಪುರುಷರಾಗಿದ್ದರು’ ಎಂದು ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ಸಮೀಪದ ಜೇವೂರ ಗ್ರಾಮದ ಹಠಯೋಗಿ ಪವಾಡ- ಪುರುಷ ರೇವಣಸಿದ್ಧೇಶ್ವರ ಸ್ವಾಮೀಜಿ ಅವರ 40ನೇ ಪುಣ್ಯರಾಧನೆ ಪ್ರಯುಕ್ತ ಬುಧವಾರ ಜರುಗಿದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಗದಗದ ಅಸುಂಡಿಯ ಮಾತೋಶ್ರೀ ಮೈತ್ರಾ ದೇವಿ ಮಾತನಾಡಿ, 'ಮಹಾನ್ ತ್ಯಾಗ ಯೋಗಿಗಳ ಪುಣ್ಯರಾಧನೆಯ ಜಾತ್ರೆ ಉತ್ಸವಗಳು ಭಕ್ತಿ ಭಾವದ ಸಂಕೇತವಾಗಿ, ಈ ದೇವಸ್ಥಾನ ಗಳಲ್ಲಿ ಸಂತ ಮಹಾಂತರ ಅನುಭವಿಗಳಿಂದ ನಡೆಯುವ ಪ್ರವಚನಗಳು ಮನುಷ್ಯನ ಭಾವನೆಗಳನ್ನು ಶುದ್ದಿಕರಣಗೊಳಿಸಿ, ಅವರನ್ನು ಸನ್ಮಾರ್ಗದ ದಾರಿಗೆ ಒಯ್ಯಲಿವೆ' ಎಂದರು.</p>.<p>ಚೀಟಗುಪ್ಪ- ಚಾಂಗಲೇರಾದ ಮರುಳಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುರುಲಿಂಗ ಶಿವಾಚಾರ್ಯಶ್ರೀ ಮತ್ತು ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯ ಶ್ರೀ, ಮುಗಳಖೋಡ ಕೋಳಿಗುಡ್ಡ ಶಾಖಾ ಮಠದ ಪ್ರಭುದೇವರು ಅವರು ಸಹ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ನಂತರ ಸಂಜೆ 5ಗಂಟೆಗೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ರಥೋತ್ಸವ ಜರುಗಿತು.</p>.<p>ಜೇವೂರ ಜಾತ್ರಾ ಕಮೀಟಿ ಎಲ್ಲ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರು ಹಾಗೂ ಸುತ್ತಲಿನ ಗ್ರಾಮಗಳ ಲಕ್ಷಾಂತರ ಭಕ್ತರು ಧರ್ಮಸಭೆ, ರಥೋತ್ಸವದಲ್ಲಿ ಇದ್ದರು. ಸಕಲರಿಗೂ ಮಹಾಪ್ರಸಾದ ಸಂತರ್ಪಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊರ್ತಿ</strong>: ‘ಜೇವೂರಿನ ಹಠಯೋಗಿ ರೇವಣಸಿದ್ಧೇಶ್ವರರು ಬೇಡಿದ್ದನ್ನು ಕರುಣಿಸುವ ಕೃಪಾಮಯಿ ಪವಾಡ ಪುರುಷರಾಗಿದ್ದರು’ ಎಂದು ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ಸಮೀಪದ ಜೇವೂರ ಗ್ರಾಮದ ಹಠಯೋಗಿ ಪವಾಡ- ಪುರುಷ ರೇವಣಸಿದ್ಧೇಶ್ವರ ಸ್ವಾಮೀಜಿ ಅವರ 40ನೇ ಪುಣ್ಯರಾಧನೆ ಪ್ರಯುಕ್ತ ಬುಧವಾರ ಜರುಗಿದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಗದಗದ ಅಸುಂಡಿಯ ಮಾತೋಶ್ರೀ ಮೈತ್ರಾ ದೇವಿ ಮಾತನಾಡಿ, 'ಮಹಾನ್ ತ್ಯಾಗ ಯೋಗಿಗಳ ಪುಣ್ಯರಾಧನೆಯ ಜಾತ್ರೆ ಉತ್ಸವಗಳು ಭಕ್ತಿ ಭಾವದ ಸಂಕೇತವಾಗಿ, ಈ ದೇವಸ್ಥಾನ ಗಳಲ್ಲಿ ಸಂತ ಮಹಾಂತರ ಅನುಭವಿಗಳಿಂದ ನಡೆಯುವ ಪ್ರವಚನಗಳು ಮನುಷ್ಯನ ಭಾವನೆಗಳನ್ನು ಶುದ್ದಿಕರಣಗೊಳಿಸಿ, ಅವರನ್ನು ಸನ್ಮಾರ್ಗದ ದಾರಿಗೆ ಒಯ್ಯಲಿವೆ' ಎಂದರು.</p>.<p>ಚೀಟಗುಪ್ಪ- ಚಾಂಗಲೇರಾದ ಮರುಳಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುರುಲಿಂಗ ಶಿವಾಚಾರ್ಯಶ್ರೀ ಮತ್ತು ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯ ಶ್ರೀ, ಮುಗಳಖೋಡ ಕೋಳಿಗುಡ್ಡ ಶಾಖಾ ಮಠದ ಪ್ರಭುದೇವರು ಅವರು ಸಹ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ನಂತರ ಸಂಜೆ 5ಗಂಟೆಗೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ರಥೋತ್ಸವ ಜರುಗಿತು.</p>.<p>ಜೇವೂರ ಜಾತ್ರಾ ಕಮೀಟಿ ಎಲ್ಲ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರು ಹಾಗೂ ಸುತ್ತಲಿನ ಗ್ರಾಮಗಳ ಲಕ್ಷಾಂತರ ಭಕ್ತರು ಧರ್ಮಸಭೆ, ರಥೋತ್ಸವದಲ್ಲಿ ಇದ್ದರು. ಸಕಲರಿಗೂ ಮಹಾಪ್ರಸಾದ ಸಂತರ್ಪಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>