<p>ವಿಜಯಪುರ: ‘ಇಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ನಡೆದ ಒಟ್ಟು 20 ವಿವಿಧ ಪ್ರಕರಣಗಳಲ್ಲಿ 42 ಆರೋಪಿಗಳನ್ನು ಬಂಧಿಸಿ, ₹1,20,04,750 ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ಜೆಸಿಬಿ, ಪಿಕಪ್, ಸ್ಕಾರ್ಪಿಯೋ, ಟ್ರ್ಯಾಕ್ಟರ್, ನೀರಿನ ಪಂಪ್ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.</p>.<p>ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘2024ರಿಂದ 26ರ ವರೆಗೆ ದೇವಸ್ಥಾನ, ವಾಹನ, ಮನೆ, ಫೈನಾನ್ಸ್, ದನ, ಕುರಿ, ಪಂಪ್ಸೆಟ್ ಕಳ್ಳತನ ಮತ್ತು ಸುಲಿಗೆ, ದರೋಡೆ ಪ್ರಕರಣಗಳು ನಡೆದಿದ್ದವು’ ಎಂದು ಹೇಳಿದರು.</p>.<p>ಚಡಚಣ ಠಾಣೆ ವ್ಯಾಪ್ತಿಯ ಶಿರಾಡೋಣ ಗ್ರಾಮದಲ್ಲಿ ಬೀರಪ್ಪ ದೇವಸ್ಥಾನದ (ಪಲ್ಲಕ್ಕಿ ಮನೆ) ಬಾಗಿಲು ಕೀಲಿ ಮುರಿದು ಮೂರ್ತಿಯ ಮೇಲಿದ್ದ ಹಾಗೂ ಟ್ರೇಜರಿಯಲ್ಲಿದ್ದ ₹6.51 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣ ಕಳವು ಮಾಡಲಾಗಿತ್ತು.</p>.<p>‘ಮಹಾರಾಷ್ಟ್ರದ ಮಂಗಳವೇಡಾದ ನಾಗೇಶ ಭೋಸಲೆ ಎಂಬಾತನನ್ನು ಬಂಧಿಸಿ ₹ 6.42 ಲಕ್ಷ ಕಿಮ್ಮತ್ತಿನ ಬಂಗಾರ ಹಾಗೂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ. ಟಾಕಳಿ ಗ್ರಾಮದಲ್ಲಿ ಪಿಕಪ್ ಗೂಡ್ಸ್ ವಾಹನ ಕಳವು ಮಾಡಿದ್ದ ತುಳಜಾಪುರದ ವಿಶಾಲ ಮೋಳೆ ಎಂಬಾತ ಬಂಧಿಸಿ, ವಾಹನ ಜಪ್ತಿ ಮಾಡಲಾಗಿದೆ’ ಎಂದರು.</p>.<p>ಸಿಂದಗಿ ಠಾಣೆ ವ್ಯಾಪ್ತಿಯ ಯರಗಲ್ ಬಿ.ಕೆ ಗ್ರಾಮದ ಲಕ್ಷ್ಮೀ ಶರಣಪ್ಪ ತಳವಾರ ಎಂಬುವರ ಮನೆಯಲ್ಲಿ ₹4.50 ಲಕ್ಷ ಮೌಲ್ಯದ ಬಂಗಾರ ಹಾಗೂ ಹಣ ಕಳವು ಪ್ರಕರಣದಲ್ಲಿ ಮೀರಜ್ನ ಶಂಕರ ಭೋಸ್ಲೆ ಎಂಬಾತನನ್ನು ಬಂಧಿಸಲಾಗಿದೆ. ಇದೇ ಆರೋಪಿಯು ಆಲಮೇಲ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲೂ ಭಾಗಿಯಾಗಿದ್ದು ಕಂಡು ಬಂದಿದ್ದು, ಈತನಿಂದ ₹6.80 ಲಕ್ಷ ಮೌಲ್ಯದ 162 ಗ್ರಾಂ ಬಂಗಾರ ಆಭರಣ ವಶಪಡಿಸಿಕೊಳ್ಳಲಾಗಿದೆ’ ಎಂದರು.</p>.<p>‘ಆಲಮೇಲ ಪಟ್ಟಣದಲ್ಲಿರುವ ದಾನೇಶ್ವರಿ ಫೈನಾನ್ಸ್ನಲ್ಲಿ ₹27.78 ಲಕ್ಷ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಫೈನಾನ್ಸ್ ಮ್ಯಾನೇಜರ್ ಸೋಮಣ್ಣ ಪೂಜಾರಿ ಮತ್ತು ಸಿಪಾಯಿ ಚಂದ್ರಶೇಖರ ಕುಪೇಂದ್ರ ಗೌಂಡಿ ಎಂಬುವರನ್ನು ಬಂಧಿಸಿ, ₹11 ಲಕ್ಷ ಜಪ್ತಿ ಮಾಡಲಾಗಿದೆ’ ಎಂದರು.</p>.<p>‘ಕಲಕೇರಿ ಠಾಣಾ ವ್ಯಾಪ್ತಿಯ ಗೊಲಗೇರಿ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಜೆಸಿಬಿ ಕಳವು ಪ್ರಕರಣದಲ್ಲಿ ಮಹಾರಾಷ್ಟ್ರದ ಹುಲಜಂತಿ ಗ್ರಾಮದ ಶಿವಾಜಿ ರೈತಮುರೆ ಮತ್ತು ಹೂವಣ್ಣ ಬಂಡಗಾರ ಎಂಬುವರನ್ನು ಬಂಧಿಸಿ, ಜೆಸಿಬಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ’ ಎಂದರು.</p>.<p>ತಂಡದ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.</p>.<p>ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಇಂಡಿ ಉಪವಿಭಾಗದ ಡಿಎಸ್ಪಿ ಸದಾಶಿವ ಕಟ್ಟೀಮನಿ, ಇಂಡಿ ಉಪವಿಭಾಗದ ಸಿಪಿಐ, ವಿವಿಧ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಕೈಂ ಸಿಬ್ಬಂದಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-26-174270156</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ‘ಇಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ನಡೆದ ಒಟ್ಟು 20 ವಿವಿಧ ಪ್ರಕರಣಗಳಲ್ಲಿ 42 ಆರೋಪಿಗಳನ್ನು ಬಂಧಿಸಿ, ₹1,20,04,750 ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ಜೆಸಿಬಿ, ಪಿಕಪ್, ಸ್ಕಾರ್ಪಿಯೋ, ಟ್ರ್ಯಾಕ್ಟರ್, ನೀರಿನ ಪಂಪ್ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.</p>.<p>ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘2024ರಿಂದ 26ರ ವರೆಗೆ ದೇವಸ್ಥಾನ, ವಾಹನ, ಮನೆ, ಫೈನಾನ್ಸ್, ದನ, ಕುರಿ, ಪಂಪ್ಸೆಟ್ ಕಳ್ಳತನ ಮತ್ತು ಸುಲಿಗೆ, ದರೋಡೆ ಪ್ರಕರಣಗಳು ನಡೆದಿದ್ದವು’ ಎಂದು ಹೇಳಿದರು.</p>.<p>ಚಡಚಣ ಠಾಣೆ ವ್ಯಾಪ್ತಿಯ ಶಿರಾಡೋಣ ಗ್ರಾಮದಲ್ಲಿ ಬೀರಪ್ಪ ದೇವಸ್ಥಾನದ (ಪಲ್ಲಕ್ಕಿ ಮನೆ) ಬಾಗಿಲು ಕೀಲಿ ಮುರಿದು ಮೂರ್ತಿಯ ಮೇಲಿದ್ದ ಹಾಗೂ ಟ್ರೇಜರಿಯಲ್ಲಿದ್ದ ₹6.51 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣ ಕಳವು ಮಾಡಲಾಗಿತ್ತು.</p>.<p>‘ಮಹಾರಾಷ್ಟ್ರದ ಮಂಗಳವೇಡಾದ ನಾಗೇಶ ಭೋಸಲೆ ಎಂಬಾತನನ್ನು ಬಂಧಿಸಿ ₹ 6.42 ಲಕ್ಷ ಕಿಮ್ಮತ್ತಿನ ಬಂಗಾರ ಹಾಗೂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ. ಟಾಕಳಿ ಗ್ರಾಮದಲ್ಲಿ ಪಿಕಪ್ ಗೂಡ್ಸ್ ವಾಹನ ಕಳವು ಮಾಡಿದ್ದ ತುಳಜಾಪುರದ ವಿಶಾಲ ಮೋಳೆ ಎಂಬಾತ ಬಂಧಿಸಿ, ವಾಹನ ಜಪ್ತಿ ಮಾಡಲಾಗಿದೆ’ ಎಂದರು.</p>.<p>ಸಿಂದಗಿ ಠಾಣೆ ವ್ಯಾಪ್ತಿಯ ಯರಗಲ್ ಬಿ.ಕೆ ಗ್ರಾಮದ ಲಕ್ಷ್ಮೀ ಶರಣಪ್ಪ ತಳವಾರ ಎಂಬುವರ ಮನೆಯಲ್ಲಿ ₹4.50 ಲಕ್ಷ ಮೌಲ್ಯದ ಬಂಗಾರ ಹಾಗೂ ಹಣ ಕಳವು ಪ್ರಕರಣದಲ್ಲಿ ಮೀರಜ್ನ ಶಂಕರ ಭೋಸ್ಲೆ ಎಂಬಾತನನ್ನು ಬಂಧಿಸಲಾಗಿದೆ. ಇದೇ ಆರೋಪಿಯು ಆಲಮೇಲ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲೂ ಭಾಗಿಯಾಗಿದ್ದು ಕಂಡು ಬಂದಿದ್ದು, ಈತನಿಂದ ₹6.80 ಲಕ್ಷ ಮೌಲ್ಯದ 162 ಗ್ರಾಂ ಬಂಗಾರ ಆಭರಣ ವಶಪಡಿಸಿಕೊಳ್ಳಲಾಗಿದೆ’ ಎಂದರು.</p>.<p>‘ಆಲಮೇಲ ಪಟ್ಟಣದಲ್ಲಿರುವ ದಾನೇಶ್ವರಿ ಫೈನಾನ್ಸ್ನಲ್ಲಿ ₹27.78 ಲಕ್ಷ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಫೈನಾನ್ಸ್ ಮ್ಯಾನೇಜರ್ ಸೋಮಣ್ಣ ಪೂಜಾರಿ ಮತ್ತು ಸಿಪಾಯಿ ಚಂದ್ರಶೇಖರ ಕುಪೇಂದ್ರ ಗೌಂಡಿ ಎಂಬುವರನ್ನು ಬಂಧಿಸಿ, ₹11 ಲಕ್ಷ ಜಪ್ತಿ ಮಾಡಲಾಗಿದೆ’ ಎಂದರು.</p>.<p>‘ಕಲಕೇರಿ ಠಾಣಾ ವ್ಯಾಪ್ತಿಯ ಗೊಲಗೇರಿ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಜೆಸಿಬಿ ಕಳವು ಪ್ರಕರಣದಲ್ಲಿ ಮಹಾರಾಷ್ಟ್ರದ ಹುಲಜಂತಿ ಗ್ರಾಮದ ಶಿವಾಜಿ ರೈತಮುರೆ ಮತ್ತು ಹೂವಣ್ಣ ಬಂಡಗಾರ ಎಂಬುವರನ್ನು ಬಂಧಿಸಿ, ಜೆಸಿಬಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ’ ಎಂದರು.</p>.<p>ತಂಡದ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.</p>.<p>ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಇಂಡಿ ಉಪವಿಭಾಗದ ಡಿಎಸ್ಪಿ ಸದಾಶಿವ ಕಟ್ಟೀಮನಿ, ಇಂಡಿ ಉಪವಿಭಾಗದ ಸಿಪಿಐ, ವಿವಿಧ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಕೈಂ ಸಿಬ್ಬಂದಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-26-174270156</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>