ವಿಜಯಪುರ: ಹೋಟೆಲ್ ಪರವಾನಗಿ ನವೀಕರಿಸಲು ₹2 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹೊರಗುತ್ತಿಗೆ ನೌಕರ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಬಲೆಗೆ ಬಿದ್ದಿದ್ದಾನೆ.
ಇಲ್ಲಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕೇಸ್ ವರ್ಕರ್ ಕಿರಣಕುಮಾರ ಡಂಗೆ ಎಸಿಬಿ ಬಲೆಗೆ ಬಿದ್ದ ಹೊರಗುತ್ತಿಗೆ ಸಿಬ್ಬಂದಿ.
ಹೋಟೆಲ್ ಪರವಾನಗಿಯನ್ನು ನವೀಕರಿಸಲು ₹ 2 ಸಾವಿರ ಬೇಡಿಕೆ ಇರಿಸಿದ್ದ ಕಿರಣಕುಮಾರ ಆ ಮೊತ್ತ ಸ್ವೀಕರಿಸುವಾಗ ಸಾಕ್ಷಿ ಸಹಿತ ಸಿಕ್ಕಿ ಬಿದ್ದಿದ್ದಾನೆ.
ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಮಂಜುನಾಥ ಗಂಗಲ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಪರಮೇಶ್ವರ ಜಿ.ಕವಟಗಿ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.