<p><strong>ವಿಜಯಪುರ</strong>: ಪ್ರಸಕ್ತ ಸಾಲಿನಲ್ಲಿ ವಿಜಯಪುರದ ಒಣ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಲಭಿಸಿರುವುದರಿಂದ ದ್ರಾಕ್ಷಿ ಬೆಳೆಗಾರರು ಖುಷಿಯಾಗಿದ್ದಾರೆ.</p>.<p>ಅಂಗಡಿ, ಮಳಿಗೆ ಸೇರಿದಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ (ಫಸ್ಟ್ ಗ್ರೇಡ್) ಒಣದ್ರಾಕ್ಷಿ ಕೆ.ಜಿಗೆ ಕನಿಷ್ಠ ₹350 ರಿಂದ ಗರಿಷ್ಠ ₹600ಕ್ಕೆ ಮಾರಾಟವಾಗಿದೆ.</p>.<p>ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೆ.ಜಿಗೆ ₹350 ರಿಂದ ₹470ರ ವರೆಗೆ ಈ ಬಾರಿ ದರ ಲಭಿಸಿದೆ. ಸಾಧಾರಣ ಗುಣಮಟ್ಟದ ಒಣ ದ್ರಾಕ್ಷಿಯು ಕೆ.ಜಿಗೆ ಕನಿಷ್ಠ ₹200 ರಿಂದ ₹350ರ ವರೆಗೆ ಮಾರಾಟವಾಗಿದೆ. ಹಸಿ ದ್ರಾಕ್ಷಿಯೂ ಕೆ.ಜಿಗೆ ₹40 ರಿಂದ ₹80ರ ವರೆಗೂ ಮಾರಾಟವಾಗಿದ್ದು, ಬೆಳೆಗಾರರ ಕೈಹಿಡಿದಿದೆ. ಆದರೆ, ಬೆಲೆ ಏರಿಕೆಯಿಂದಾಗಿ ಗ್ರಾಹಕರ ಪಾಲಿಗೆ ಒಣದ್ರಾಕ್ಷಿ ಹುಳಿಯಾಗಿದೆ.</p>.<p>‘ಹಸಿ ದ್ರಾಕ್ಷಿ (ಟೇಬಲ್ ಗ್ರೇಪ್) ಮತ್ತು ಒಣ ದ್ರಾಕ್ಷಿಗೆ ಕಳೆದ ಎರಡು ವರ್ಷಗಳಿಗಿಂತ ಉತ್ತಮ ದರ ಲಭಿಸಿದೆ’ ಎಂದು ದ್ರಾಕ್ಷಿ ಬೆಳೆಗಾರರಾದ ಎಸ್.ಎಂ.ರುದ್ರಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p class="Subhead">ಇಳುವರಿ ಕಡಿಮೆ: ‘ಬೆಳೆಗಾರರಿಗೆ ಉತ್ತಮ ದರ ಲಭಿಸುತ್ತಿದೆ. ಆದರೆ, ಹವಾಮಾನ ವೈಫರಿತ್ಯದ ಪರಿಣಾಮ ಶೇ 30ರಷ್ಟು ಇಳುವರಿ ಕಡಿಮೆಯಾಗಿದೆ’ ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ್ ನಾಂದ್ರೇಕರ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ವಿಜಯಪುರದ ಎಪಿಎಂಸಿ ಆನ್ಲೈನ್ ಮಾರುಕಟ್ಟೆ ಸದ್ಯ ವಾರಕ್ಕೆ ಒಮ್ಮೆ (ಪ್ರತಿ ಶನಿವಾರ) ಮಾತ್ರ ನಡೆಯುತ್ತಿದೆ. ವಾರದಲ್ಲಿ 2–3 ಬಾರಿ ನಡೆಸಿದರೆ ರಾಜ್ಯದ ರೈತರು ನೆರೆಯ ಮಹಾರಾಷ್ಟ್ರದ ತಾಸ್ಗಾಂವ್, ಪಂಢರಪುರದ ಮಾರುಕಟ್ಟೆಗೆ ಹೋಗುವುದು, ಶೋಷಣೆಗೆ ಒಳಗಾಗುವುದು ತಪ್ಪುತ್ತದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಪ್ರಸಕ್ತ ಸಾಲಿನಲ್ಲಿ ವಿಜಯಪುರದ ಒಣ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಲಭಿಸಿರುವುದರಿಂದ ದ್ರಾಕ್ಷಿ ಬೆಳೆಗಾರರು ಖುಷಿಯಾಗಿದ್ದಾರೆ.</p>.<p>ಅಂಗಡಿ, ಮಳಿಗೆ ಸೇರಿದಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ (ಫಸ್ಟ್ ಗ್ರೇಡ್) ಒಣದ್ರಾಕ್ಷಿ ಕೆ.ಜಿಗೆ ಕನಿಷ್ಠ ₹350 ರಿಂದ ಗರಿಷ್ಠ ₹600ಕ್ಕೆ ಮಾರಾಟವಾಗಿದೆ.</p>.<p>ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೆ.ಜಿಗೆ ₹350 ರಿಂದ ₹470ರ ವರೆಗೆ ಈ ಬಾರಿ ದರ ಲಭಿಸಿದೆ. ಸಾಧಾರಣ ಗುಣಮಟ್ಟದ ಒಣ ದ್ರಾಕ್ಷಿಯು ಕೆ.ಜಿಗೆ ಕನಿಷ್ಠ ₹200 ರಿಂದ ₹350ರ ವರೆಗೆ ಮಾರಾಟವಾಗಿದೆ. ಹಸಿ ದ್ರಾಕ್ಷಿಯೂ ಕೆ.ಜಿಗೆ ₹40 ರಿಂದ ₹80ರ ವರೆಗೂ ಮಾರಾಟವಾಗಿದ್ದು, ಬೆಳೆಗಾರರ ಕೈಹಿಡಿದಿದೆ. ಆದರೆ, ಬೆಲೆ ಏರಿಕೆಯಿಂದಾಗಿ ಗ್ರಾಹಕರ ಪಾಲಿಗೆ ಒಣದ್ರಾಕ್ಷಿ ಹುಳಿಯಾಗಿದೆ.</p>.<p>‘ಹಸಿ ದ್ರಾಕ್ಷಿ (ಟೇಬಲ್ ಗ್ರೇಪ್) ಮತ್ತು ಒಣ ದ್ರಾಕ್ಷಿಗೆ ಕಳೆದ ಎರಡು ವರ್ಷಗಳಿಗಿಂತ ಉತ್ತಮ ದರ ಲಭಿಸಿದೆ’ ಎಂದು ದ್ರಾಕ್ಷಿ ಬೆಳೆಗಾರರಾದ ಎಸ್.ಎಂ.ರುದ್ರಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p class="Subhead">ಇಳುವರಿ ಕಡಿಮೆ: ‘ಬೆಳೆಗಾರರಿಗೆ ಉತ್ತಮ ದರ ಲಭಿಸುತ್ತಿದೆ. ಆದರೆ, ಹವಾಮಾನ ವೈಫರಿತ್ಯದ ಪರಿಣಾಮ ಶೇ 30ರಷ್ಟು ಇಳುವರಿ ಕಡಿಮೆಯಾಗಿದೆ’ ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ್ ನಾಂದ್ರೇಕರ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ವಿಜಯಪುರದ ಎಪಿಎಂಸಿ ಆನ್ಲೈನ್ ಮಾರುಕಟ್ಟೆ ಸದ್ಯ ವಾರಕ್ಕೆ ಒಮ್ಮೆ (ಪ್ರತಿ ಶನಿವಾರ) ಮಾತ್ರ ನಡೆಯುತ್ತಿದೆ. ವಾರದಲ್ಲಿ 2–3 ಬಾರಿ ನಡೆಸಿದರೆ ರಾಜ್ಯದ ರೈತರು ನೆರೆಯ ಮಹಾರಾಷ್ಟ್ರದ ತಾಸ್ಗಾಂವ್, ಪಂಢರಪುರದ ಮಾರುಕಟ್ಟೆಗೆ ಹೋಗುವುದು, ಶೋಷಣೆಗೆ ಒಳಗಾಗುವುದು ತಪ್ಪುತ್ತದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>