ಹುಟ್ಟಿದ್ದು ಒಂದು ದಿನ ಸಾಯುತ್ತದೆ, ಕಟ್ಟಿದ್ದು ಒಂದು ದಿನ ಬೀಳುತ್ತದೆ, ಮೊಳೆತದ್ದು ಒಂದು ದಿನ ಒಣಗುತ್ತದೆ. ಆದರೆ, ಶರಣರು ಕಟ್ಟಿದ ಕಲ್ಯಾಣ ಎಂದೆಂದಿಗೂ ಇರುತ್ತದೆ. ಏಕೆಂದರೆ ಕಲ್ಯಾಣದ ಶರಣರು ವರ್ಗಾತೀತ, ಜಾತ್ಯತೀತ, ಧರ್ಮಾತೀತವಾಗಿ ಬದುಕಿ ಸೀಮಾತೀತವಾದವರು. ಇಂಥವರು ಕಲ್ಯಾಣದಲ್ಲಿ ಬದುಕಿ, ಬಾಳಿ ಈ ವಿಶ್ವದ ಇತಿಹಾಸದಲ್ಲಿ ಉಳಿದದ್ದಕ್ಕೆ ಮಾದರಿಯೇ ‘ಕಲ್ಯಾಣದೊಳಗಡಗಿದೆ ವಿಶ್ವ ಕಲ್ಯಾಣ’