ವಿಜಯಪುರ:ಲಯನ್ಸ್ ಪರಿವಾರದ ಮುಂಬರುವ ದಿನಗಳಲ್ಲಿ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವಂತೆ ಡಾ.ಬಾಬುರಾಜೇಂದ್ರ ನಾಯಿಕ ಸಲಹೆ ನೀಡಿದರು.
ನಗರದ ಅಪ್ಸರಾ ಟಾಕೀಸ್ನಲ್ಲಿ ಲಯನ್ಸ್ ಪರಿವಾರದ ವತಿಯಿಂದ ವಲಯ ಮಟ್ಟದ ಪ್ರಥಮ ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿಇಂಡಿ, ಸಿಂದಗಿ, ಮುದ್ದೇಬಿಹಾಳ, ಬಾಗಲಕೋಟೆ, ವಿಜಯಪುರದ ಎಲ್ಲ ಲಯನ್ಸ್ ಕ್ಲಬ್ ಗಳ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಕ್ಲಬ್ನ ಸದಸ್ಯರು ಭಾಗವಹಿಸಿದ್ದರು. ಎಲ್ಲ ಕ್ಲಬ್ಗಳ ಕಾರ್ಯ ಚಟುವಟಿಕೆಗಳ ಅವಲೋಕನ ನಡೆಯಿತು.
ವಿಭಾಗ ಅಧ್ಯಕ್ಷ ಲಯನ್ ರಾವಸಾಹೇಬ್ ದೇಸಾಯಿ ಮಾರ್ಗದರ್ಶನ ನೀಡಿದರು.
ರಾಜ್ಯ ಪ್ರಶಸ್ತಿ ವಿಜೇತ ಉಪನ್ಯಾಸಕ ಎಂ.ಬಿ. ರಜಪುತ, ವಿಶೇಷ ಸಾಧನೆಗೆ ಶ್ರವಣಕುಮಾರ ಮಹೇಂದ್ರಕರ, ಡಾ.ಅಶೋಕುಮಾರ ಜಾಧವ್ ಅವರನ್ನು ಸನ್ಮಾನಿಸಲಾಯಿತು.