‘ಮಂಚನಬೆಲೆ ಜಲಾಶಯದ ನೀರನ್ನು ಮಾಗಡಿ ಪಟ್ಟಣ ಮತ್ತು 26 ಹಳ್ಳಿಗಳ ಜನತೆ ಕುಡಿಯಲು ಬಳಸುತ್ತಿದ್ದೇವೆ. ಜಲಮಂಡಳಿಯ ಅವಿವೇಕದ ನಿರ್ಧಾರದಿಂದಾಗಿ ತಾಲ್ಲೂಕಿನ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಬೇಕಿದೆ. ಅರೆಬೆಂದ ಅಧಿಕಾರಿಗಳ ಹಣ ಮಾಡುವ ನಿರ್ಧಾರದಿಂದ ರೈತರ ಬದುಕು ನಾಶವಾಗಲಿದೆ. ಅಲ್ಲದೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನೀರು ಇದ್ದರೆ, ತಾಲ್ಲೂಕಿನ ಬಹುತೇಕ ಕೊಳವೆಬಾವಿಗಳಲ್ಲಿನ ಅಂತರ್ಜಲ ತುಂಬಿರುತ್ತದೆ’ ಎಂದರು.