<p><strong>ಮಂಗಳೂರು:</strong> ತುಳುನಾಡಿನ ಸೀಮೆ, ಸೀಮೆಗಳಲ್ಲಿ ಹಲವಾರು ಗುತ್ತಿನ ಮನೆಗಳಿವೆ. ನೂರಾರು ವರ್ಷ ಹಳೆಯದಾದ ಅದೆಷ್ಟೋ ಗುತ್ತಿನಮನೆಗಳು ಸಮರ್ಪಕ ನಿರ್ವಹಣೆ ಇಲ್ಲದೇ ಅವಸಾನದ ಅಂಚನ್ನು ತಲುಪಿವೆ. ಇಂತಹ ಗುತ್ತಿನ ಮನೆಗಳನ್ನು ‘ಗತ ವೈಭವ’ಕ್ಕೆ ಚ್ಯುತಿಯಾಗದಂತೆ ಮರುನಿರ್ಮಿಸುವ ಪ್ರಯತ್ನಗಳು ಕೆಲವೆಡೆ ನಡೆಯುತ್ತಿವೆ. ಮಂಗಳೂರು ನಗರದ ಹೊರವಲಯದಲ್ಲಿರುವ ‘ಅಡ್ಯಾರ್ ಗುತ್ತು’ ಕುಟುಂಬದ ಗುತ್ತಿನ ಮನೆಯ ಮರು ನಿರ್ಮಾಣ ಇಂತಹ ಸಾರ್ಥಕ ಪ್ರಯತ್ನಗಳಲ್ಲೊಂದು.</p><p>ಹಳೆಯ ಗುತ್ತಿನ ಮನೆಯ ವಾಸ್ತುವಿಗೆ ಪೂರಕವಾಗಿ, ಕುಸರಿ ಕೆತ್ತನೆಯಲ್ಲಿ ಹಳೆಯ ಮನೆಗಿಂತಲೂ ಒಂದು ಕೈ ಮೇಲೆ ಎಂಬಂತೆ ನಿರ್ಮಾಣ ಗೊಂಡಿದೆ ಅಡ್ಯಾರ್ ಗುತ್ತಿನ ಮನೆ. ಈ ಮನೆಯ ಕಾಷ್ಠಶಿಲ್ಪದ ಭವ್ಯತೆ ಕಣ್ಮನ ಸೆಳೆಯುತ್ತದೆ. ಹೆಬ್ಬಾಗಿಲಿನಲ್ಲಿ ಮೂಡಿರುವ ಹೂ–ಬಳ್ಳಿಗಳ ಚಿತ್ತಾರ, ಭಾರಿ ಗಾತ್ರದ ಬೋದಿಗೆ ಕಂಬಗಳಲ್ಲಿ ಅರಳಿರುವ ಆಕರ್ಷಕ ಕೆತ್ತನೆಗಳು, ಆನೆಯ ಮೊಗವನ್ನು ಅಳವಡಿಸಿರುವ ಉಯ್ಯಾಲೆ, ಕುಸರಿ ಕೆತ್ತನೆ ಒಳಗೊಂಡ ಚಾವಣಿ, ಪಡಸಾಲೆ... ಒಂದೊಂದೂ ಅಚ್ಚುಕಟ್ಟಾಗಿ ಮೂಡಿ ಬಂದಿವೆ. ಈ ಮನೆಯ ‘ಧರ್ಮ ಚಾವಡಿ’ಯಲ್ಲಿ ಕೈಮುಗಿದು ನಿಲ್ಲುವ ಭಕ್ತರ ಮನದಲ್ಲಿ ಮೂಡುವ ದೈವಿಕ ಅನುಭೂತಿ ಪದಗಳಿಗೆ ನಿಲುಕದ್ದು.</p>.<p>ತುಳುನಾಡಿನ ಮೌಕಿಕ ಸಾಹಿತ್ಯ ಪ್ರಕಾರವಾಗಿರುವ ಪಾಡ್ದನಗಳು ಅಡ್ಯಾರ್ ಗುತ್ತಿನ ದೈವಾರಾಧನೆಯ ಇತಿಹಾಸ ಕಥನವನ್ನು ರಸವತ್ತಾಗಿ ಕಟ್ಟಿಕೊಡುತ್ತವೆ. ತುಳುವರ ಆರಾಧ್ಯ ದೈವ ಜುಮಾದಿ (ಧೂಮಾವತಿ) ಬಂಟ ಪಾಡ್ದನದಲ್ಲಿ ಅಡ್ಯಾರ್ ಗುತ್ತಿನ ಮನೆಯ ಉಲ್ಲೇಖವಿದೆ. ಘಟ್ಟ ಪ್ರದೇಶದಿಂದ ಇಳಿದುಬಂದ ಜುಮಾದಿ ದೈವ ಇಲ್ಲಿ ನೆಲೆಯಾಗಿ, ಇಲ್ಲಿ ಗುತ್ತಿನ ಮನೆ ನಿರ್ಮಾಣವಾದ ಐತಿಹ್ಯ ಪಾಡ್ದನದಲ್ಲಿ ಸಿಗುತ್ತದೆ.</p><p>'ಘಟ್ಟ ಪ್ರದೇಶದಿಂದ ಕರಾವಳಿಗೆ ಇಳಿದು ಬಂದ ಜುಮಾದಿ ದೈವಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಂಜನಪದವಿನ ಬಳಿ ಅಡ್ಯಾರ್ ಗ್ರಾಮದ ಸೋಮನಾಥ ಕಟ್ಟೆ ಕಾಣುತ್ತದೆ. ಜುಮಾದಿ ದೈವವು ಬಲಗಾಲಿನ ಉಂಗುಷ್ಠವನ್ನು ಇಲ್ಲಿ ಊರಿದಾಗ ಅದಕ್ಕೆ ಅಡ್ಯಾರ್ ಕಾಣಿಸುತ್ತದೆ. ಇಲ್ಲಿನ ಯಜಮಾನ ದುಗ್ಗಣ್ಣ ಭಂಡಾರಿ ಅವರನ್ನು ನೋಡಿ, ಅವರ ಧರ್ಮ ನಿಷ್ಠೆಗೆ ಮೆಚ್ಚಿದ ಜುಮಾದಿ ದೈವ ಈ ಸ್ಥಳದಲ್ಲೇ ನೆಲೆಯಾಯಿತು. ಆಗ ದುಗ್ಗಣ್ಣ ಭಂಡಾರಿ ಹಾಗೂ ಜುಮಾದಿ ದೈವದ ನಡುವೆ ಒಪ್ಪಂದ ನಡೆಯುತ್ತದೆ. ತನಗೆ ಹಾಗೂ ತನ್ನ ಬಂಟನಿಗೆ ತೂಗುಯ್ಯಾಲೆ ಹಾಗೂ ಗ್ರಾಮಕ್ಕೆ ಗುತ್ತು ಮನೆ ಬೇಕು ಎಂದು ಜುಮಾದಿ ದೈವ ಕೇಳುತ್ತದೆ. ಒಪ್ಪಂದ ಪ್ರಕಾರ ಇಲ್ಲಿ ಅಡ್ಯಾರ ಗುತ್ತಿನ ಮನೆ ನಿರ್ಮಿಸಿ ಜುಮಾದಿ ಮತ್ತು ಅದರ ಬಂಟನಿಗೆ ತೂಗುಯ್ಯಾಲೆ ಒಪ್ಪಿಸಲಾಗಿತ್ತು ಎಂಬ ಐತಿಹ್ಯ ಇದೆ. ಇದಲ್ಲದೇ ಬೇರೆ ಬೇರೆ ಐತಿಹ್ಯಗಳು ಈ ಗುತ್ತಿನ ಮನೆಯ ಜೊತೆ ಬೆಸೆದುಕೊಂಡಿವೆ’ ಎಂದು ಅಡ್ಯಾರ್ ಗುತ್ತು ಕುಟುಂಬಸ್ಥರ ಟ್ರಸ್ಟ್ನ ಅಧ್ಯಕ್ಷ ಸುರೇಂದ್ರ ಕಂಬಳಿ ತಿಳಿಸಿದರು. </p>.<p><strong>ಶಿಥಿಲಗೊಂಡಿತ್ತು ಗುತ್ತು ಮನೆ:</strong> ಸುಮಾರು 800 ವರ್ಷಗಳ ಇತಿಹಾಸ ಇರುವ ಅಡ್ಯಾರ್ ಗುತ್ತಿನ ಮನೆ ಶಿಥಿಲಗೊಂಡಿತ್ತು. ಗುತ್ತಿನ ಮನೆಯನ್ನು ದುರಸ್ತಿ ಪಡಿಸಲು ಕುಟುಂಬಸ್ಥರು ಮುಂದಾಗಿದ್ದರು. ನಂತರದ ಪೂರ್ತಿ ಮನೆಯನ್ನೇ ಮರುನಿರ್ಮಾಣ ಮಾಡುವ ನಿರ್ಧಾರವನ್ನು ಕೈಗೊಂಡರು. ಈ ಗುತ್ತಿನ ಮನೆ ಇಷ್ಟೊಂದು ಮನಮೋಹಕವಾಗಿ ನಿರ್ಮಾಣಗೊಳ್ಳುತ್ತದೆ ಎಂಬ ಕಲ್ಪನೆಯೂ ಅಡ್ಯಾರ್ ಗುತ್ತು ಕುಟುಂಬದವರಿಗೆ ಆರಂಭದಲ್ಲಿ ಇರಲಿಲ್ಲ.</p><p>‘ಹಳೆಯ ಗುತ್ತಿನ ಮನೆಯ ಎರಡು ಬೊದಿಗೆ ಕಂಬಗಳು ಸಂಪೂರ್ಣ ಶಿಥಿಲಗೊಂಡಿದ್ದವು. ಯಾವುದೇ ಕಾರಣಕ್ಕೂ ಗುತ್ತಿನ ಮನೆ ಬೀಳಲಿಕ್ಕೆ ಬಿಡಬೇಡಿ ಎಂದು ನಮ್ಮ ಕುಟುಂಬದ ಹಿರಿಯರಾದ ಮಹಾಬಲ ಶೆಟ್ಟಿ ಅವರು ಎಚ್ಚರಿಸಿದ್ದರು. ಬಳಿಕ ಗುತ್ತು ಮನೆಯ ನವೀಕರಣ ಮಾಡುವ ಉದ್ದೇಶದಿಂದ ಕುಟುಂಬದ ಹಿರಿಯರಾದ ವಿಶ್ವನಾಥ ಶೆಟ್ಟಿ ನೇತೃತ್ವದಲ್ಲಿ ಸಭೆ ಸೇರಿ ಚರ್ಚಿಸಿದೆವು. ದುರಸ್ತಿಪಡಿಸುವ ಬದಲು ಹಳೆಯ ಗುತ್ತು ಮನೆಯ ಮಾದರಿಯಲ್ಲೇ ಹೊಸ ಮನೆಯನ್ನೇ ನಿರ್ಮಿಸೋಣ ಎಂದು ಯುವಕರೆಲ್ಲ ಒತ್ತಾಯಿಸಿದರು. ಹಳೆಯ ಗುತ್ತಿನ ಮನೆಯ ರೀತಿಯಲ್ಲೇ ಹೊಸ ಗುತ್ತು ಮನೆ ನಿರ್ಮಿಸುವ ಸಂಕಲ್ಪ ಮಾಡಿದೆವು. ಗುತ್ತು ಮನೆ ಇಷ್ಟು ಸೊಗಸಾಗಿ ನಿರ್ಮಾಣವಾಗಲು ಸುಮಾರು ₹3.5 ಕೋಟಿಯಿಂದ ₹ 4 ಕೋಟಿ ವೆಚ್ಚವಾಗಿದೆ’ ಎಂದು ಸುರೇಂದ್ರ ಕಂಬಳಿ ವಿವರಿಸಿದರು. </p>.<p><strong>ನಿರ್ಮಾಣಕ್ಕೆ ಬೇಕಾಯಿತು ಮೂರು ವರ್ಷ:</strong> ಈ ಗುತ್ತಿನ ಮನೆಯ ಮರುನಿರ್ಮಾಣಕ್ಕೆ ಬರೋಬ್ಬರಿ ಮೂರು ವರ್ಷಗಳು ತಗುಲಿವೆ. ಮನೆಯ ಆನೆಬಾಗಿಲನ್ನು (ಹೆಬ್ಬಾಗಿಲು) ಬಲಿತ ಹಲಸಿನ ಮರದಿಂದ, ಬೊದಿಗೆ ಕಂಬಗಳನ್ನು ಹೆಬ್ಬಲಸು ಮರಗಳಿಂದ ನಿರ್ಮಿಸಲಾಗಿದೆ. ಸೂಕ್ಷ್ಮ ಕುಸರಿ ಕೆತ್ತನೆಗಳನ್ನು ಹೊಂದಿರುವ ಈ ಕಂಬಗಳ ಹಾಗೂ ಆನೆಬಾಗಿಲಿನ ನಿರ್ಮಾಣಕ್ಕೆ ಮರವನ್ನು ಹೊಂದಿಸುವುದಕ್ಕೆ ಹರಸಾಹಸ ಪಡಬೇಕಾಗಿತ್ತು. ಎಲ್ಲೆಲ್ಲಿಂದಲೋ ಹುಡುಕಿ ತಂದು ಇವುಗಳನ್ನು ನಿರ್ಮಿಸಲಾಗಿದೆ.</p><p>‘ಮನೆ ನಿರ್ಮಾಣಕ್ಕೆ ಮೂರು ವರ್ಷ ಹಿಂದೆ ಕಡವಿ ಬಾಲಾಲಯ ನಿರ್ಮಿಸಲಾಯಿತು. ಕೃಷ್ಣರಾಜ ತಂತ್ರಿ ಅವರ ಮಾರ್ಗದರ್ಶನದಲ್ಲಿ ಸಿವಿಲ್ ಎಂಜಿನಿಯರ್ ಅವರು ರೂಪರೇಷೆ ಸಿದ್ಧಪಡಿಸಿದರು. ಕಾಷ್ಠಶಿಲ್ಪಿ ಹರೀಶ್ ಆಚಾರ್ಯ ನೇತೃತ್ವದ ತಂಡದ ನುರಿತ ಬಡಗಿಗಳ ಕೈಚಳಕದಲ್ಲಿ ಸುಮಾರು 6 ಸಾವಿರ ಚದರ ಅಡಿಯ ಈ ಗುತ್ತುಮನೆ ನಿರ್ಮಾಣಗೊಂಡಿದೆ. ಹೆಬ್ಬಾಗಿಲು, ಪಡಲಾಸೆ, ಬೋದಿಗೆ ಕಂಬಗಳು, ಧರ್ಮ ಚಾವಡಿ, ಗುತ್ತಿನ ಮನೆಯ ವೈಶಿಷ್ಟ. ಅವೆಲ್ಲರೂ ಮರು ನಿರ್ಮಾಣಗೊಂಡ ಮನೆಯಲ್ಲೂ ಹಳೆಯ ಮನೆಯ ವೈಭವಕ್ಕೆ ಚ್ಯುತಿ ಆಗದಂತೆ ಮೂಡಿಬಂದಿವೆ. ಆಕರ್ಷಕ ಕುಸರಿ ಕೆತ್ತನೆಗಳು ಗುತ್ತಿನ ಮನೆಯ ಗತ್ತು ಹೆಚ್ಚುವಂತೆ ಮಾಡಿವೆ’ ಎನ್ನುತ್ತಾರೆ ಈ ಅಡ್ಯಾರ್ ಗುತ್ತು ಮನೆ ಟ್ರಸ್ಟ್ನ ಖಜಾಂಚಿ ಜಯಶೀಲ ಅಡ್ಯಂತಾಯ.</p>.<p>ಹಿಂದಿನ ಗುತ್ತಿನಮನೆಯಲ್ಲಿ ಹೆಬ್ಬಾಗಿಲಿನ ಎತ್ತರ ತುಸು ಕಡಿಮೆ ಇತ್ತು. ಮನೆಯ ಒಳಗೆ ಪ್ರವೇಶಿಸುವವರು ತಲೆ ತಗ್ಗಿಸಿಯೇ ಹೋಗಬೇಕಿತ್ತು. ಈಗಿನ ಹೆಬ್ಬಾಗಿಲಿನ ಗಾತ್ರವನ್ನು ಹೆಚ್ಚಿಸಿದ್ದೇವೆ. ಹಿಂದಿನ ಗುತ್ತಿನ ಮನೆಯ ಪಡಸಾಲೆಯ ಬಳಿ ಮಳೆ ನೀರು ಮೇಲಿನಿಂದ ಬೀಳುತ್ತಿತ್ತು. ಒಳಾಂಗಣ ಪಾಚಿ ಕಟ್ಟುತ್ತಿತ್ತು. ಈಗಲೂ ಪಡಸಾಲೆ ಬಳಿ ಮಳೆ ನೀರು ತೊಟ್ಟಿ ಹಾಗೆಯೇ ಇದೆ. ಆದರೆ ಮಳೆ ನೀರು ಹೊರಗೆ ಹೋಗಲು ವ್ಯವಸ್ಥೆ ಮಾಡಿದ್ದರಿಂದ ಅಲ್ಲಿ ಪಾಚಿಕಟ್ಟುವ ಸಮಸ್ಯೆ ನಿವಾರಿಸಲಾಗಿದೆ. ಇವೆಲ್ಲ ಈಗಿನ ಕಾಲದ ಅಗತ್ಯಕ್ಕೆ ತಕ್ಕುದಾಗಿ ಮಾಡಿಕೊಂಡ ಸಣ್ಣಪುಟ್ಟ ಮಾರ್ಪಾಡುಗಳು. ಉಳಿದಂತೆ ಇಡೀ ಗುತ್ತಿನ ಮನೆಯ ಆಯ ಹಿಂದಿನ ಗುತ್ತಿನ ಮನೆಯಂತೆಯೇ ಇದೆ ಎಂದು ಸುರೇಂದ್ರ ಕಂಬಳಿ ವಿವರಿಸಿದರು. </p><p>‘ಗುತ್ತಿನ ಮನೆಯ ಧರ್ಮ ಚಾವಡಿಯಲ್ಲಿ ಹಿಂದೆಲ್ಲ ನ್ಯಾಯ ತೀರ್ಮಾನ ನಡೆಯುತ್ತಿತ್ತು. ಹಾಗಾಗಿ ಈ ಧರ್ಮ ಚಾವಡಿಗೆ ಪಾರಂಪರಿಕ ಹಿನ್ನೆಲೆ ಹಾಗೂ ಪಾವಿತ್ರ್ಯ ಇದೆ. ಒಳಗಿನ ಪಡಸಾಲೆಯಲ್ಲಿ ಪಿತೃಗಳಿಗೆ ಉಣಬಡಿಸುವ ಸಂಪ್ರದಾಯ ಇದೆ. 16 ಮಣೆಗಳನ್ನು ಇಟ್ಟು, ಅದರ ಮೇಲೆ ಹೊಸ ಬಟ್ಟೆ ಹಾಸಿ, ಎಲೆ ಹಾಕಿ ಅನ್ನ ಹಾಗೂ ಕೋಳಿ ಪದಾರ್ಥವನ್ನು ಬಡಿಸುವುದು ಸಂಪ್ರದಾಯ. ಕುಟುಂಬದ ಸದಸ್ಯರಿಗೆ ಪಿತೃಗಳಿಂದ ಆಶೀರ್ವಾದ ಬೇಡಲು, ಯಾವುದೇ ಬಾಧೆ ಬಾರದಂತೆ ತಡೆಯುವಂತೆ ಕೋರಲು ಆಟಿ (ತುಳುವರ ಆಷಾಢ) ತಿಂಗಳ ಅಮಾವಾಸ್ಯೆಗಿಂತ ಮುಂಚೆ ಈ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ವರ್ಷದಲ್ಲಿ ಒಮ್ಮೆ ದೇವರಿಗೆ ಮುಡಿಪು ಹಣ ಕಟ್ಟುವ ಸಂಪ್ರದಾಯವನ್ನೂ ಈಧರ್ಮ ಚಾವಡಿಯಲ್ಲಿ ನೆರವೇರಿಸಲಾಗುತ್ತದೆ’ ಎಂದು ಅವರು ತಿಳಿಸಿದರು. </p>.<p>800 ವರ್ಷಗಳ ಇತಿಹಾಸವಿರುವ ಮನೆ ಇತಿಹಾಸದ ಪುಟ ಸೇರುವುದನ್ನು ತಪ್ಪಿಸಿ, ಅಷ್ಟೇ ವೈಭವೋಪೇತವಾಗಿ ಹೊಸ ಗುತ್ತಿನ ಮನೆಯನ್ನು ಮರುನಿರ್ಮಿಸಿದ ಬಗ್ಗೆ ಕುಟುಂಬಸ್ಥರಿಗೆ ಸಂತೃಪ್ತಿ ಇದೆ. ಈ ಗುತ್ತಿನ ಮನೆಯ ನಡಾವಳಿ ಹಾಗೂ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆಯೂ ಅವರು ಹೆಮ್ಮೆ ಪಡುತ್ತಾರೆ.</p><p>‘ದುರ್ಗಣ್ಣ ಭಂಡಾರಿಯಂತಹ ಸಾತ್ವಿಕ ವ್ಯಕ್ತಿಗೆ ಒಲಿದು ಬಂದ ಜುಮಾದಿ ಬಂಟ ದೈವಗಳಿಗೆ ಸಂಬಂಧಿಸಿದಂತೆ ಅಡ್ಯಾರ್ ಗುತ್ತಿನ ಮನೆಯ ಆಚರಣೆ ಸಂಪ್ರದಾಯಗಳನ್ನು ನೂರಾರು ವರ್ಷಗಳಿಂದ ಚಾಚೂ ತಪ್ಪದೇ ನಡೆಸಿಕೊಂಡು ಬರಲಾಗುತ್ತಿದೆ. ಬಿದ್ದುಹೋಗುವ ಸ್ಥಿತಿ ತಲುಪಿದ್ದ ಹಳೆಯ ಗುತ್ತಿನ ಮನೆಯನ್ನು ಮತ್ತೆ ನಿರ್ಮಿಸಿ, ಚೌತಿ, ದೀಪಾವಳಿ, ಆಯನ, ನೇಮೋತ್ಸವ ಮುಂತಾದ ನಡಾವಳಿಗಳನ್ನು ಮುಂದುವರಿಸುತ್ತಿರುವುದು ನಮ್ಮ ಭಾಗ್ಯದ ಸಂಪತ್ತು. ಹಿಂದಿನಿಂದಲೂ ಈ ಕುಟುಂಬದ ಧರ್ಮಿಷ್ಠರು ನಡೆಸಿಕೊಂಡು ಬಂದ ಆಚಾರ ಪದ್ಧತಿಯನ್ನು ಮುಂದುವರಿಸುವ ಅನುಗ್ರಹವು ಯುವಕ ಉತ್ಸಾಹದ ಫಲವಾಗಿ ನಮಗೆಲ್ಲರಿಗೂ ಸಿಕ್ಕಿದೆ’ ಎನ್ನುತ್ತಾರೆ ಅಡ್ಯಾರ್ ಗುತ್ತಿನ ಹಿರಿಯರಲ್ಲಿ ಒಬ್ಬರಾದ ಜಯಪ್ರಕಾಶ್ ಶೆಟ್ಟಿ. </p><p>ಅಡ್ಯಾರ್ ಗುತ್ತುಮನೆ ಹಾಗೂ ಧರ್ಮ ಚಾವಡಿ ಪ್ರವೇಶೋತ್ಸವವು 2026ರ ಮಾರ್ಚ್ 25 ರಂದು ನಡೆದಿದೆ. ಅದರ ಪ್ರಯುಕ್ತ ತೀರಾ ಅಪರೂಪಕ್ಕೊಮ್ಮೆ ನೆರವೇರಿಸುವ ಧರ್ಮನೇಮವನ್ನೂ ಹಮ್ಮಿಕೊಳ್ಳಲಾಗಿದೆ. ಧರ್ಮನೇಮವೆಂಬುದು ಪ್ರತಿ ವರ್ಷ ನಡೆಯುವ ಆಚರಣೆಯಲ್ಲ. ಕುಟುಂಬದವರು ಸೇರಿ ಹತ್ತಿಪ್ಪತ್ತು ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ನಡೆಸುವ ಸೇವೆ. ಈ ಸೇವೆಯಲ್ಲಿ ಊರಿನ ಹಾಗೂ ಪರವೂರುಗಳಿಂದ ಬಂದಿದ್ದ 10 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದಾರೆ. ಆ ಬಳಿಕ ಏಪ್ರಿಲ್ ತಿಂಗಳಿನಲ್ಲಿ ವರ್ಷಾವಧಿ ನೇಮೋತ್ಸವವೂ ವಿಜೃಂಭಣೆಯಿಂದ ನೆರವೇರಿದೆ. </p><p>ತುಳುನಾಡಿನ ಗುತ್ತಿನ ಮನೆಗಳು ಇಲ್ಲಿನ ಪೂರ್ವಿಕರ ಸಮೃದ್ಧ ಬದುಕಿನ ಕುರುಹುಗಳು. ಗುತ್ತಿನ ಮನೆಗಳು ಸರಿಯಾದ ನಿರ್ವಹಣೆ ಇಲ್ಲದೇ ಸೊರಗಿದ್ದರೂ, ಅವರುಗಳ ವೈಭವವನ್ನು ಮರಳಿ ಪಡೆಯಬಹುದು ಎಂಬುದಕ್ಕೆ ಅಡ್ಯಾರ್ ಗುತ್ತಿನ ಮನೆಯ ಮರು ನಿರ್ಮಾಣ ಕಾರ್ಯವೇ ಸಾಕ್ಷಿ. ಇದು ಇನ್ನೂ ಹತ್ತು ಹಲವು ಗುತ್ತಿನ ಮನೆಗಳ ನವೀಕರಣಕ್ಕೆ, ಪಾರಂಪರಿಕ ಆಚರಣೆಗಳ ಪುನರುಜ್ಜೀವನಕ್ಕೆ ಪ್ರೇರಣೆ ಒದಗಿಸುತ್ತದೆಯೋ ಕಾದು ನೋಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ತುಳುನಾಡಿನ ಸೀಮೆ, ಸೀಮೆಗಳಲ್ಲಿ ಹಲವಾರು ಗುತ್ತಿನ ಮನೆಗಳಿವೆ. ನೂರಾರು ವರ್ಷ ಹಳೆಯದಾದ ಅದೆಷ್ಟೋ ಗುತ್ತಿನಮನೆಗಳು ಸಮರ್ಪಕ ನಿರ್ವಹಣೆ ಇಲ್ಲದೇ ಅವಸಾನದ ಅಂಚನ್ನು ತಲುಪಿವೆ. ಇಂತಹ ಗುತ್ತಿನ ಮನೆಗಳನ್ನು ‘ಗತ ವೈಭವ’ಕ್ಕೆ ಚ್ಯುತಿಯಾಗದಂತೆ ಮರುನಿರ್ಮಿಸುವ ಪ್ರಯತ್ನಗಳು ಕೆಲವೆಡೆ ನಡೆಯುತ್ತಿವೆ. ಮಂಗಳೂರು ನಗರದ ಹೊರವಲಯದಲ್ಲಿರುವ ‘ಅಡ್ಯಾರ್ ಗುತ್ತು’ ಕುಟುಂಬದ ಗುತ್ತಿನ ಮನೆಯ ಮರು ನಿರ್ಮಾಣ ಇಂತಹ ಸಾರ್ಥಕ ಪ್ರಯತ್ನಗಳಲ್ಲೊಂದು.</p><p>ಹಳೆಯ ಗುತ್ತಿನ ಮನೆಯ ವಾಸ್ತುವಿಗೆ ಪೂರಕವಾಗಿ, ಕುಸರಿ ಕೆತ್ತನೆಯಲ್ಲಿ ಹಳೆಯ ಮನೆಗಿಂತಲೂ ಒಂದು ಕೈ ಮೇಲೆ ಎಂಬಂತೆ ನಿರ್ಮಾಣ ಗೊಂಡಿದೆ ಅಡ್ಯಾರ್ ಗುತ್ತಿನ ಮನೆ. ಈ ಮನೆಯ ಕಾಷ್ಠಶಿಲ್ಪದ ಭವ್ಯತೆ ಕಣ್ಮನ ಸೆಳೆಯುತ್ತದೆ. ಹೆಬ್ಬಾಗಿಲಿನಲ್ಲಿ ಮೂಡಿರುವ ಹೂ–ಬಳ್ಳಿಗಳ ಚಿತ್ತಾರ, ಭಾರಿ ಗಾತ್ರದ ಬೋದಿಗೆ ಕಂಬಗಳಲ್ಲಿ ಅರಳಿರುವ ಆಕರ್ಷಕ ಕೆತ್ತನೆಗಳು, ಆನೆಯ ಮೊಗವನ್ನು ಅಳವಡಿಸಿರುವ ಉಯ್ಯಾಲೆ, ಕುಸರಿ ಕೆತ್ತನೆ ಒಳಗೊಂಡ ಚಾವಣಿ, ಪಡಸಾಲೆ... ಒಂದೊಂದೂ ಅಚ್ಚುಕಟ್ಟಾಗಿ ಮೂಡಿ ಬಂದಿವೆ. ಈ ಮನೆಯ ‘ಧರ್ಮ ಚಾವಡಿ’ಯಲ್ಲಿ ಕೈಮುಗಿದು ನಿಲ್ಲುವ ಭಕ್ತರ ಮನದಲ್ಲಿ ಮೂಡುವ ದೈವಿಕ ಅನುಭೂತಿ ಪದಗಳಿಗೆ ನಿಲುಕದ್ದು.</p>.<p>ತುಳುನಾಡಿನ ಮೌಕಿಕ ಸಾಹಿತ್ಯ ಪ್ರಕಾರವಾಗಿರುವ ಪಾಡ್ದನಗಳು ಅಡ್ಯಾರ್ ಗುತ್ತಿನ ದೈವಾರಾಧನೆಯ ಇತಿಹಾಸ ಕಥನವನ್ನು ರಸವತ್ತಾಗಿ ಕಟ್ಟಿಕೊಡುತ್ತವೆ. ತುಳುವರ ಆರಾಧ್ಯ ದೈವ ಜುಮಾದಿ (ಧೂಮಾವತಿ) ಬಂಟ ಪಾಡ್ದನದಲ್ಲಿ ಅಡ್ಯಾರ್ ಗುತ್ತಿನ ಮನೆಯ ಉಲ್ಲೇಖವಿದೆ. ಘಟ್ಟ ಪ್ರದೇಶದಿಂದ ಇಳಿದುಬಂದ ಜುಮಾದಿ ದೈವ ಇಲ್ಲಿ ನೆಲೆಯಾಗಿ, ಇಲ್ಲಿ ಗುತ್ತಿನ ಮನೆ ನಿರ್ಮಾಣವಾದ ಐತಿಹ್ಯ ಪಾಡ್ದನದಲ್ಲಿ ಸಿಗುತ್ತದೆ.</p><p>'ಘಟ್ಟ ಪ್ರದೇಶದಿಂದ ಕರಾವಳಿಗೆ ಇಳಿದು ಬಂದ ಜುಮಾದಿ ದೈವಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಂಜನಪದವಿನ ಬಳಿ ಅಡ್ಯಾರ್ ಗ್ರಾಮದ ಸೋಮನಾಥ ಕಟ್ಟೆ ಕಾಣುತ್ತದೆ. ಜುಮಾದಿ ದೈವವು ಬಲಗಾಲಿನ ಉಂಗುಷ್ಠವನ್ನು ಇಲ್ಲಿ ಊರಿದಾಗ ಅದಕ್ಕೆ ಅಡ್ಯಾರ್ ಕಾಣಿಸುತ್ತದೆ. ಇಲ್ಲಿನ ಯಜಮಾನ ದುಗ್ಗಣ್ಣ ಭಂಡಾರಿ ಅವರನ್ನು ನೋಡಿ, ಅವರ ಧರ್ಮ ನಿಷ್ಠೆಗೆ ಮೆಚ್ಚಿದ ಜುಮಾದಿ ದೈವ ಈ ಸ್ಥಳದಲ್ಲೇ ನೆಲೆಯಾಯಿತು. ಆಗ ದುಗ್ಗಣ್ಣ ಭಂಡಾರಿ ಹಾಗೂ ಜುಮಾದಿ ದೈವದ ನಡುವೆ ಒಪ್ಪಂದ ನಡೆಯುತ್ತದೆ. ತನಗೆ ಹಾಗೂ ತನ್ನ ಬಂಟನಿಗೆ ತೂಗುಯ್ಯಾಲೆ ಹಾಗೂ ಗ್ರಾಮಕ್ಕೆ ಗುತ್ತು ಮನೆ ಬೇಕು ಎಂದು ಜುಮಾದಿ ದೈವ ಕೇಳುತ್ತದೆ. ಒಪ್ಪಂದ ಪ್ರಕಾರ ಇಲ್ಲಿ ಅಡ್ಯಾರ ಗುತ್ತಿನ ಮನೆ ನಿರ್ಮಿಸಿ ಜುಮಾದಿ ಮತ್ತು ಅದರ ಬಂಟನಿಗೆ ತೂಗುಯ್ಯಾಲೆ ಒಪ್ಪಿಸಲಾಗಿತ್ತು ಎಂಬ ಐತಿಹ್ಯ ಇದೆ. ಇದಲ್ಲದೇ ಬೇರೆ ಬೇರೆ ಐತಿಹ್ಯಗಳು ಈ ಗುತ್ತಿನ ಮನೆಯ ಜೊತೆ ಬೆಸೆದುಕೊಂಡಿವೆ’ ಎಂದು ಅಡ್ಯಾರ್ ಗುತ್ತು ಕುಟುಂಬಸ್ಥರ ಟ್ರಸ್ಟ್ನ ಅಧ್ಯಕ್ಷ ಸುರೇಂದ್ರ ಕಂಬಳಿ ತಿಳಿಸಿದರು. </p>.<p><strong>ಶಿಥಿಲಗೊಂಡಿತ್ತು ಗುತ್ತು ಮನೆ:</strong> ಸುಮಾರು 800 ವರ್ಷಗಳ ಇತಿಹಾಸ ಇರುವ ಅಡ್ಯಾರ್ ಗುತ್ತಿನ ಮನೆ ಶಿಥಿಲಗೊಂಡಿತ್ತು. ಗುತ್ತಿನ ಮನೆಯನ್ನು ದುರಸ್ತಿ ಪಡಿಸಲು ಕುಟುಂಬಸ್ಥರು ಮುಂದಾಗಿದ್ದರು. ನಂತರದ ಪೂರ್ತಿ ಮನೆಯನ್ನೇ ಮರುನಿರ್ಮಾಣ ಮಾಡುವ ನಿರ್ಧಾರವನ್ನು ಕೈಗೊಂಡರು. ಈ ಗುತ್ತಿನ ಮನೆ ಇಷ್ಟೊಂದು ಮನಮೋಹಕವಾಗಿ ನಿರ್ಮಾಣಗೊಳ್ಳುತ್ತದೆ ಎಂಬ ಕಲ್ಪನೆಯೂ ಅಡ್ಯಾರ್ ಗುತ್ತು ಕುಟುಂಬದವರಿಗೆ ಆರಂಭದಲ್ಲಿ ಇರಲಿಲ್ಲ.</p><p>‘ಹಳೆಯ ಗುತ್ತಿನ ಮನೆಯ ಎರಡು ಬೊದಿಗೆ ಕಂಬಗಳು ಸಂಪೂರ್ಣ ಶಿಥಿಲಗೊಂಡಿದ್ದವು. ಯಾವುದೇ ಕಾರಣಕ್ಕೂ ಗುತ್ತಿನ ಮನೆ ಬೀಳಲಿಕ್ಕೆ ಬಿಡಬೇಡಿ ಎಂದು ನಮ್ಮ ಕುಟುಂಬದ ಹಿರಿಯರಾದ ಮಹಾಬಲ ಶೆಟ್ಟಿ ಅವರು ಎಚ್ಚರಿಸಿದ್ದರು. ಬಳಿಕ ಗುತ್ತು ಮನೆಯ ನವೀಕರಣ ಮಾಡುವ ಉದ್ದೇಶದಿಂದ ಕುಟುಂಬದ ಹಿರಿಯರಾದ ವಿಶ್ವನಾಥ ಶೆಟ್ಟಿ ನೇತೃತ್ವದಲ್ಲಿ ಸಭೆ ಸೇರಿ ಚರ್ಚಿಸಿದೆವು. ದುರಸ್ತಿಪಡಿಸುವ ಬದಲು ಹಳೆಯ ಗುತ್ತು ಮನೆಯ ಮಾದರಿಯಲ್ಲೇ ಹೊಸ ಮನೆಯನ್ನೇ ನಿರ್ಮಿಸೋಣ ಎಂದು ಯುವಕರೆಲ್ಲ ಒತ್ತಾಯಿಸಿದರು. ಹಳೆಯ ಗುತ್ತಿನ ಮನೆಯ ರೀತಿಯಲ್ಲೇ ಹೊಸ ಗುತ್ತು ಮನೆ ನಿರ್ಮಿಸುವ ಸಂಕಲ್ಪ ಮಾಡಿದೆವು. ಗುತ್ತು ಮನೆ ಇಷ್ಟು ಸೊಗಸಾಗಿ ನಿರ್ಮಾಣವಾಗಲು ಸುಮಾರು ₹3.5 ಕೋಟಿಯಿಂದ ₹ 4 ಕೋಟಿ ವೆಚ್ಚವಾಗಿದೆ’ ಎಂದು ಸುರೇಂದ್ರ ಕಂಬಳಿ ವಿವರಿಸಿದರು. </p>.<p><strong>ನಿರ್ಮಾಣಕ್ಕೆ ಬೇಕಾಯಿತು ಮೂರು ವರ್ಷ:</strong> ಈ ಗುತ್ತಿನ ಮನೆಯ ಮರುನಿರ್ಮಾಣಕ್ಕೆ ಬರೋಬ್ಬರಿ ಮೂರು ವರ್ಷಗಳು ತಗುಲಿವೆ. ಮನೆಯ ಆನೆಬಾಗಿಲನ್ನು (ಹೆಬ್ಬಾಗಿಲು) ಬಲಿತ ಹಲಸಿನ ಮರದಿಂದ, ಬೊದಿಗೆ ಕಂಬಗಳನ್ನು ಹೆಬ್ಬಲಸು ಮರಗಳಿಂದ ನಿರ್ಮಿಸಲಾಗಿದೆ. ಸೂಕ್ಷ್ಮ ಕುಸರಿ ಕೆತ್ತನೆಗಳನ್ನು ಹೊಂದಿರುವ ಈ ಕಂಬಗಳ ಹಾಗೂ ಆನೆಬಾಗಿಲಿನ ನಿರ್ಮಾಣಕ್ಕೆ ಮರವನ್ನು ಹೊಂದಿಸುವುದಕ್ಕೆ ಹರಸಾಹಸ ಪಡಬೇಕಾಗಿತ್ತು. ಎಲ್ಲೆಲ್ಲಿಂದಲೋ ಹುಡುಕಿ ತಂದು ಇವುಗಳನ್ನು ನಿರ್ಮಿಸಲಾಗಿದೆ.</p><p>‘ಮನೆ ನಿರ್ಮಾಣಕ್ಕೆ ಮೂರು ವರ್ಷ ಹಿಂದೆ ಕಡವಿ ಬಾಲಾಲಯ ನಿರ್ಮಿಸಲಾಯಿತು. ಕೃಷ್ಣರಾಜ ತಂತ್ರಿ ಅವರ ಮಾರ್ಗದರ್ಶನದಲ್ಲಿ ಸಿವಿಲ್ ಎಂಜಿನಿಯರ್ ಅವರು ರೂಪರೇಷೆ ಸಿದ್ಧಪಡಿಸಿದರು. ಕಾಷ್ಠಶಿಲ್ಪಿ ಹರೀಶ್ ಆಚಾರ್ಯ ನೇತೃತ್ವದ ತಂಡದ ನುರಿತ ಬಡಗಿಗಳ ಕೈಚಳಕದಲ್ಲಿ ಸುಮಾರು 6 ಸಾವಿರ ಚದರ ಅಡಿಯ ಈ ಗುತ್ತುಮನೆ ನಿರ್ಮಾಣಗೊಂಡಿದೆ. ಹೆಬ್ಬಾಗಿಲು, ಪಡಲಾಸೆ, ಬೋದಿಗೆ ಕಂಬಗಳು, ಧರ್ಮ ಚಾವಡಿ, ಗುತ್ತಿನ ಮನೆಯ ವೈಶಿಷ್ಟ. ಅವೆಲ್ಲರೂ ಮರು ನಿರ್ಮಾಣಗೊಂಡ ಮನೆಯಲ್ಲೂ ಹಳೆಯ ಮನೆಯ ವೈಭವಕ್ಕೆ ಚ್ಯುತಿ ಆಗದಂತೆ ಮೂಡಿಬಂದಿವೆ. ಆಕರ್ಷಕ ಕುಸರಿ ಕೆತ್ತನೆಗಳು ಗುತ್ತಿನ ಮನೆಯ ಗತ್ತು ಹೆಚ್ಚುವಂತೆ ಮಾಡಿವೆ’ ಎನ್ನುತ್ತಾರೆ ಈ ಅಡ್ಯಾರ್ ಗುತ್ತು ಮನೆ ಟ್ರಸ್ಟ್ನ ಖಜಾಂಚಿ ಜಯಶೀಲ ಅಡ್ಯಂತಾಯ.</p>.<p>ಹಿಂದಿನ ಗುತ್ತಿನಮನೆಯಲ್ಲಿ ಹೆಬ್ಬಾಗಿಲಿನ ಎತ್ತರ ತುಸು ಕಡಿಮೆ ಇತ್ತು. ಮನೆಯ ಒಳಗೆ ಪ್ರವೇಶಿಸುವವರು ತಲೆ ತಗ್ಗಿಸಿಯೇ ಹೋಗಬೇಕಿತ್ತು. ಈಗಿನ ಹೆಬ್ಬಾಗಿಲಿನ ಗಾತ್ರವನ್ನು ಹೆಚ್ಚಿಸಿದ್ದೇವೆ. ಹಿಂದಿನ ಗುತ್ತಿನ ಮನೆಯ ಪಡಸಾಲೆಯ ಬಳಿ ಮಳೆ ನೀರು ಮೇಲಿನಿಂದ ಬೀಳುತ್ತಿತ್ತು. ಒಳಾಂಗಣ ಪಾಚಿ ಕಟ್ಟುತ್ತಿತ್ತು. ಈಗಲೂ ಪಡಸಾಲೆ ಬಳಿ ಮಳೆ ನೀರು ತೊಟ್ಟಿ ಹಾಗೆಯೇ ಇದೆ. ಆದರೆ ಮಳೆ ನೀರು ಹೊರಗೆ ಹೋಗಲು ವ್ಯವಸ್ಥೆ ಮಾಡಿದ್ದರಿಂದ ಅಲ್ಲಿ ಪಾಚಿಕಟ್ಟುವ ಸಮಸ್ಯೆ ನಿವಾರಿಸಲಾಗಿದೆ. ಇವೆಲ್ಲ ಈಗಿನ ಕಾಲದ ಅಗತ್ಯಕ್ಕೆ ತಕ್ಕುದಾಗಿ ಮಾಡಿಕೊಂಡ ಸಣ್ಣಪುಟ್ಟ ಮಾರ್ಪಾಡುಗಳು. ಉಳಿದಂತೆ ಇಡೀ ಗುತ್ತಿನ ಮನೆಯ ಆಯ ಹಿಂದಿನ ಗುತ್ತಿನ ಮನೆಯಂತೆಯೇ ಇದೆ ಎಂದು ಸುರೇಂದ್ರ ಕಂಬಳಿ ವಿವರಿಸಿದರು. </p><p>‘ಗುತ್ತಿನ ಮನೆಯ ಧರ್ಮ ಚಾವಡಿಯಲ್ಲಿ ಹಿಂದೆಲ್ಲ ನ್ಯಾಯ ತೀರ್ಮಾನ ನಡೆಯುತ್ತಿತ್ತು. ಹಾಗಾಗಿ ಈ ಧರ್ಮ ಚಾವಡಿಗೆ ಪಾರಂಪರಿಕ ಹಿನ್ನೆಲೆ ಹಾಗೂ ಪಾವಿತ್ರ್ಯ ಇದೆ. ಒಳಗಿನ ಪಡಸಾಲೆಯಲ್ಲಿ ಪಿತೃಗಳಿಗೆ ಉಣಬಡಿಸುವ ಸಂಪ್ರದಾಯ ಇದೆ. 16 ಮಣೆಗಳನ್ನು ಇಟ್ಟು, ಅದರ ಮೇಲೆ ಹೊಸ ಬಟ್ಟೆ ಹಾಸಿ, ಎಲೆ ಹಾಕಿ ಅನ್ನ ಹಾಗೂ ಕೋಳಿ ಪದಾರ್ಥವನ್ನು ಬಡಿಸುವುದು ಸಂಪ್ರದಾಯ. ಕುಟುಂಬದ ಸದಸ್ಯರಿಗೆ ಪಿತೃಗಳಿಂದ ಆಶೀರ್ವಾದ ಬೇಡಲು, ಯಾವುದೇ ಬಾಧೆ ಬಾರದಂತೆ ತಡೆಯುವಂತೆ ಕೋರಲು ಆಟಿ (ತುಳುವರ ಆಷಾಢ) ತಿಂಗಳ ಅಮಾವಾಸ್ಯೆಗಿಂತ ಮುಂಚೆ ಈ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ವರ್ಷದಲ್ಲಿ ಒಮ್ಮೆ ದೇವರಿಗೆ ಮುಡಿಪು ಹಣ ಕಟ್ಟುವ ಸಂಪ್ರದಾಯವನ್ನೂ ಈಧರ್ಮ ಚಾವಡಿಯಲ್ಲಿ ನೆರವೇರಿಸಲಾಗುತ್ತದೆ’ ಎಂದು ಅವರು ತಿಳಿಸಿದರು. </p>.<p>800 ವರ್ಷಗಳ ಇತಿಹಾಸವಿರುವ ಮನೆ ಇತಿಹಾಸದ ಪುಟ ಸೇರುವುದನ್ನು ತಪ್ಪಿಸಿ, ಅಷ್ಟೇ ವೈಭವೋಪೇತವಾಗಿ ಹೊಸ ಗುತ್ತಿನ ಮನೆಯನ್ನು ಮರುನಿರ್ಮಿಸಿದ ಬಗ್ಗೆ ಕುಟುಂಬಸ್ಥರಿಗೆ ಸಂತೃಪ್ತಿ ಇದೆ. ಈ ಗುತ್ತಿನ ಮನೆಯ ನಡಾವಳಿ ಹಾಗೂ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆಯೂ ಅವರು ಹೆಮ್ಮೆ ಪಡುತ್ತಾರೆ.</p><p>‘ದುರ್ಗಣ್ಣ ಭಂಡಾರಿಯಂತಹ ಸಾತ್ವಿಕ ವ್ಯಕ್ತಿಗೆ ಒಲಿದು ಬಂದ ಜುಮಾದಿ ಬಂಟ ದೈವಗಳಿಗೆ ಸಂಬಂಧಿಸಿದಂತೆ ಅಡ್ಯಾರ್ ಗುತ್ತಿನ ಮನೆಯ ಆಚರಣೆ ಸಂಪ್ರದಾಯಗಳನ್ನು ನೂರಾರು ವರ್ಷಗಳಿಂದ ಚಾಚೂ ತಪ್ಪದೇ ನಡೆಸಿಕೊಂಡು ಬರಲಾಗುತ್ತಿದೆ. ಬಿದ್ದುಹೋಗುವ ಸ್ಥಿತಿ ತಲುಪಿದ್ದ ಹಳೆಯ ಗುತ್ತಿನ ಮನೆಯನ್ನು ಮತ್ತೆ ನಿರ್ಮಿಸಿ, ಚೌತಿ, ದೀಪಾವಳಿ, ಆಯನ, ನೇಮೋತ್ಸವ ಮುಂತಾದ ನಡಾವಳಿಗಳನ್ನು ಮುಂದುವರಿಸುತ್ತಿರುವುದು ನಮ್ಮ ಭಾಗ್ಯದ ಸಂಪತ್ತು. ಹಿಂದಿನಿಂದಲೂ ಈ ಕುಟುಂಬದ ಧರ್ಮಿಷ್ಠರು ನಡೆಸಿಕೊಂಡು ಬಂದ ಆಚಾರ ಪದ್ಧತಿಯನ್ನು ಮುಂದುವರಿಸುವ ಅನುಗ್ರಹವು ಯುವಕ ಉತ್ಸಾಹದ ಫಲವಾಗಿ ನಮಗೆಲ್ಲರಿಗೂ ಸಿಕ್ಕಿದೆ’ ಎನ್ನುತ್ತಾರೆ ಅಡ್ಯಾರ್ ಗುತ್ತಿನ ಹಿರಿಯರಲ್ಲಿ ಒಬ್ಬರಾದ ಜಯಪ್ರಕಾಶ್ ಶೆಟ್ಟಿ. </p><p>ಅಡ್ಯಾರ್ ಗುತ್ತುಮನೆ ಹಾಗೂ ಧರ್ಮ ಚಾವಡಿ ಪ್ರವೇಶೋತ್ಸವವು 2026ರ ಮಾರ್ಚ್ 25 ರಂದು ನಡೆದಿದೆ. ಅದರ ಪ್ರಯುಕ್ತ ತೀರಾ ಅಪರೂಪಕ್ಕೊಮ್ಮೆ ನೆರವೇರಿಸುವ ಧರ್ಮನೇಮವನ್ನೂ ಹಮ್ಮಿಕೊಳ್ಳಲಾಗಿದೆ. ಧರ್ಮನೇಮವೆಂಬುದು ಪ್ರತಿ ವರ್ಷ ನಡೆಯುವ ಆಚರಣೆಯಲ್ಲ. ಕುಟುಂಬದವರು ಸೇರಿ ಹತ್ತಿಪ್ಪತ್ತು ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ನಡೆಸುವ ಸೇವೆ. ಈ ಸೇವೆಯಲ್ಲಿ ಊರಿನ ಹಾಗೂ ಪರವೂರುಗಳಿಂದ ಬಂದಿದ್ದ 10 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದಾರೆ. ಆ ಬಳಿಕ ಏಪ್ರಿಲ್ ತಿಂಗಳಿನಲ್ಲಿ ವರ್ಷಾವಧಿ ನೇಮೋತ್ಸವವೂ ವಿಜೃಂಭಣೆಯಿಂದ ನೆರವೇರಿದೆ. </p><p>ತುಳುನಾಡಿನ ಗುತ್ತಿನ ಮನೆಗಳು ಇಲ್ಲಿನ ಪೂರ್ವಿಕರ ಸಮೃದ್ಧ ಬದುಕಿನ ಕುರುಹುಗಳು. ಗುತ್ತಿನ ಮನೆಗಳು ಸರಿಯಾದ ನಿರ್ವಹಣೆ ಇಲ್ಲದೇ ಸೊರಗಿದ್ದರೂ, ಅವರುಗಳ ವೈಭವವನ್ನು ಮರಳಿ ಪಡೆಯಬಹುದು ಎಂಬುದಕ್ಕೆ ಅಡ್ಯಾರ್ ಗುತ್ತಿನ ಮನೆಯ ಮರು ನಿರ್ಮಾಣ ಕಾರ್ಯವೇ ಸಾಕ್ಷಿ. ಇದು ಇನ್ನೂ ಹತ್ತು ಹಲವು ಗುತ್ತಿನ ಮನೆಗಳ ನವೀಕರಣಕ್ಕೆ, ಪಾರಂಪರಿಕ ಆಚರಣೆಗಳ ಪುನರುಜ್ಜೀವನಕ್ಕೆ ಪ್ರೇರಣೆ ಒದಗಿಸುತ್ತದೆಯೋ ಕಾದು ನೋಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>