<p><strong>ಬಾಗಲಕೋಟೆ</strong>: ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಫಲಿತಾಂಶಕ್ಕಾಗಿ ಕಾಯುವಿಕೆ ಇನ್ನೆರಡು ದಿನಗಳ ನಂತರ ಕೊನೆಗೊಳ್ಳಲಿದೆ. ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬ ಕುತೂಹಲಕ್ಕೆ ತೆರಬೀಳಲಿದೆ.</p><p>ಏ.9 ರಂದು ಮತದಾನ ನಡೆದಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. ಕಳೆದ 21 ದಿನಗಳಿಂದ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರು ಸೋಲು–ಗೆಲುವಿನ ಲೆಕ್ಕಾಚಾರ ಹಾಕುತ್ತಲೇ ಇದ್ದಾರೆ. ನಾಲ್ಕಾರು ಜನರು ಸೇರಿದರೆ ಸಾಕು ಚುನಾವಣೆಯ ಫಲಿತಾಂಶದ ಕುರಿತು ಒಂದು ಸುತ್ತಿನ ಚರ್ಚೆ ಇದ್ದೇ ಇರುತ್ತದೆ.</p><p>ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿತ್ತು. ಅದರಲ್ಲೂ ತಮ್ಮ ಆತ್ಮೀಯರಾಗಿದ್ದ ಎಚ್.ವೈ. ಮೇಟಿ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಉಳಿಸಿಕೊಳ್ಳುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಷ್ಠೆಯಾಗಿಸಿಕೊಂಡಿದ್ದರು. ಪರಿಣಾಮ ವಾರ ಕಾಲ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.</p><p>ಕಳೆದ ನಾಲ್ಕು ಚುನಾವಣೆಗಳಲ್ಲಿ ಎರಡು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಬಾಗಲಕೋಟೆ ಕ್ಷೇತ್ರ ಮತ್ತೇ ಗೆಲುವು ಸಾಧಿಸುವ ನಿರೀಕ್ಷೆ ಇಟ್ಟುಕೊಂಡು ಈ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿತ್ತು. ರಾಜ್ಯ ನಾಯಕರೂ ಈ ಕ್ಷೇತ್ರದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ನಡೆಸಿದರು. ಗೆದ್ದೇ ಗೆಲ್ಲಬೇಕು ಎಂಬ ಛಲದಿಂದ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನೂ ಕರೆದುಕೊಂಡು ಬಂದು ಪ್ರಚಾರ ಮಾಡಿಸಲಾಯಿತು.</p><p>ಹಿಂದಿನ ನಾಲ್ಕು ಚುನಾವಣೆಗಳಲ್ಲಿ ನಗರ ಪ್ರದೇಶದಲ್ಲಿ ಹೆಚ್ಚಿನ ಲೀಡ್ ಗಳಿಸಿದಾಗ ಬಿಜೆಪಿ ಗೆದ್ದಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಲೀಡ್ ಗಳಿಸಿದಾಗ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಬಾರಿ ಎರಡೂ ಪಕ್ಷಗಳು ನಗರ, ಗ್ರಾಮೀಣ ಪ್ರದೇಶಗಳ ಮತಗಳನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನವನ್ನು ಮಾಡಿವೆ.</p><p>ಮುಸ್ಲಿಂ ಹಾಗೂ ಕುರುಬ ಸಮುದಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ನಂಬಿಕೊಂಡಿದ್ದ ಕಾಂಗ್ರೆಸ್ ಮುಖಂಡರು, ಅವರು ನಮ್ಮ ನಿರೀಕ್ಷೆಯಷ್ಟು ಮತದಾನ ಮಾಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತಗಳೂ ಗಣನೀಯ ಪ್ರಮಾಣದಲ್ಲಿ ಪಕ್ಷಕ್ಕೆ ಬಂದಿವೆ. ಜೊತೆಗೆ ಹಲವಾರು ಸಣ್ಣ ಸಮುದಾಯಗಳೂ ಕೈ ಹಿಡಿದಿವೆ. ಹಲವು ಸಮುದಾಯದ ಹೊಸ ಮತಗಳನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂಬುದು ಕಾಂಗ್ರೆಸ್ ಮುಖಂಡರ ವಾದ.</p><p>ಇನ್ನೊಂದೆಡೆ ಲಿಂಗಾಯತ ಮತಗಳನ್ನು ನೆಚ್ಚಿಕೊಂಡಿದ್ದ ಬಿಜೆಪಿಯು, ಈ ಬಾರಿ ಎಲ್ಲ ಒಳಪಂಗಡಗಳವರು ಒಂದೇ ನಿರ್ಧಾರ ತೆಗೆದುಕೊಂಡು ಮತ ಹಾಕಿದ್ದಾರೆ. ನೇಕಾರರ ಮತಗಳೂ ಗಣನೀಯ ಪ್ರಮಾಣದಲ್ಲಿ ಬಂದಿವೆ. ಜೊತೆಗೆ ಒಳಮೀಸಲಾತಿಯಿಂದಾಗಿ ಕಳೆದುಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತಗಳೂ ಮರಳಿ ಬಿದ್ದಿವೆ ಎಂಬುದು ಬಿಜೆಪಿ ನಾಯಕರ ವಾದ.</p><p>–––</p><p><strong>ಮಹಿಳಾ, ಗ್ರಾಮೀಣ ಮತದಾರರು ನಿರ್ಣಾಯಕ</strong></p><p><strong>ಬಾಗಲಕೋಟೆ</strong>: ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 2,59,797 ಮತದಾರರಿದ್ದು, 1,78,265 ಮತದಾರರು ಹಕ್ಕು ಚಲಾಯಿಸಿದ್ದಾರೆ.</p><p>ಅದರಲ್ಲಿ 1,26,999 ಪುರುಷರಿದ್ದು, 88,241 (ಶೇ 69.48) ಮಂದಿ, 1,32,775 ಮಹಿಳೆಯರಿದ್ದು, ಅದರಲ್ಲಿ 90,024 (ಶೇ 67.80) ಮಂದಿ ಮತ ಹಾಕಿದ್ದಾರೆ. ಪುರುಷರಿಗಿಂತ ಶೇ1.68 ಮಹಿಳೆಯರು ಕಡಿಮೆ ಮತ ಚಲಾಯಿಸಿದ್ದಾರೆ.</p><p>ಮಹಿಳೆಯರಿಗೆ ಶಕ್ತಿ, ಗೃಹಲಕ್ಷ್ಮಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದಾಗಿತ್ತು. ಅವರ ಮತದಾನ ಪ್ರಮಾಣ ಕಡಿಮೆಯಾಗಿರುವುದು ಅವರಲ್ಲಿ ಆತಂಕ ಮೂಡಿಸಿದೆಯಾದರೂ, ಮತ ಚಲಾಯಿಸಿದವರಲ್ಲಿ ಹೆಚ್ಚಿನ ಮಹಿಳಾ ಮತದಾರರು ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ.</p><p>ನವನಗರ, ವಿದ್ಯಾಗಿರಿ ಬಾಗಲಕೋಟೆಯಲ್ಲಿ 1,16,527 ಮತದಾರರಿದ್ದಾರೆ. ಆ ಪೈಕಿ 71,373 (ಶೇ61.25) ಮಂದಿ ಮತ ಚಲಾಯಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 1,43,270 ಮತದಾರರಿದ್ದು, ಆ ಪೈಕಿ 1,06,900 (ಶೇ74.61) ಮತ ಚಲಾಯಿಸಿದ್ದಾರೆ. ಗ್ರಾಮೀಣ ಪ್ರದೇಶದ ನಿವಾಸಿಗಳು ನಗರ ನಿವಾಸಿಗಳಿಗಿಂತ ಶೇ 13.36 ರಷ್ಟು ಹೆಚ್ಚು ಮತ ಹಾಕಿದ್ದಾರೆ.</p><p>----</p>.ಚನ್ನಪಟ್ಟಣ, ಸಂಡೂರು,ಶಿಗ್ಗಾವಿ: ಹಕ್ಕು ಚಲಾವಣೆಗೆ ಮತದಾರರ ಮೇರೆ ಮೀರಿದ ಉತ್ಸಾಹ.ಚಾಮರಾಜನಗರ ಲೋಕಸಭಾ ಚುನಾವಣೆ | ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಫಲಿತಾಂಶಕ್ಕಾಗಿ ಕಾಯುವಿಕೆ ಇನ್ನೆರಡು ದಿನಗಳ ನಂತರ ಕೊನೆಗೊಳ್ಳಲಿದೆ. ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬ ಕುತೂಹಲಕ್ಕೆ ತೆರಬೀಳಲಿದೆ.</p><p>ಏ.9 ರಂದು ಮತದಾನ ನಡೆದಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. ಕಳೆದ 21 ದಿನಗಳಿಂದ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರು ಸೋಲು–ಗೆಲುವಿನ ಲೆಕ್ಕಾಚಾರ ಹಾಕುತ್ತಲೇ ಇದ್ದಾರೆ. ನಾಲ್ಕಾರು ಜನರು ಸೇರಿದರೆ ಸಾಕು ಚುನಾವಣೆಯ ಫಲಿತಾಂಶದ ಕುರಿತು ಒಂದು ಸುತ್ತಿನ ಚರ್ಚೆ ಇದ್ದೇ ಇರುತ್ತದೆ.</p><p>ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿತ್ತು. ಅದರಲ್ಲೂ ತಮ್ಮ ಆತ್ಮೀಯರಾಗಿದ್ದ ಎಚ್.ವೈ. ಮೇಟಿ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಉಳಿಸಿಕೊಳ್ಳುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಷ್ಠೆಯಾಗಿಸಿಕೊಂಡಿದ್ದರು. ಪರಿಣಾಮ ವಾರ ಕಾಲ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.</p><p>ಕಳೆದ ನಾಲ್ಕು ಚುನಾವಣೆಗಳಲ್ಲಿ ಎರಡು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಬಾಗಲಕೋಟೆ ಕ್ಷೇತ್ರ ಮತ್ತೇ ಗೆಲುವು ಸಾಧಿಸುವ ನಿರೀಕ್ಷೆ ಇಟ್ಟುಕೊಂಡು ಈ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿತ್ತು. ರಾಜ್ಯ ನಾಯಕರೂ ಈ ಕ್ಷೇತ್ರದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ನಡೆಸಿದರು. ಗೆದ್ದೇ ಗೆಲ್ಲಬೇಕು ಎಂಬ ಛಲದಿಂದ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನೂ ಕರೆದುಕೊಂಡು ಬಂದು ಪ್ರಚಾರ ಮಾಡಿಸಲಾಯಿತು.</p><p>ಹಿಂದಿನ ನಾಲ್ಕು ಚುನಾವಣೆಗಳಲ್ಲಿ ನಗರ ಪ್ರದೇಶದಲ್ಲಿ ಹೆಚ್ಚಿನ ಲೀಡ್ ಗಳಿಸಿದಾಗ ಬಿಜೆಪಿ ಗೆದ್ದಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಲೀಡ್ ಗಳಿಸಿದಾಗ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಬಾರಿ ಎರಡೂ ಪಕ್ಷಗಳು ನಗರ, ಗ್ರಾಮೀಣ ಪ್ರದೇಶಗಳ ಮತಗಳನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನವನ್ನು ಮಾಡಿವೆ.</p><p>ಮುಸ್ಲಿಂ ಹಾಗೂ ಕುರುಬ ಸಮುದಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ನಂಬಿಕೊಂಡಿದ್ದ ಕಾಂಗ್ರೆಸ್ ಮುಖಂಡರು, ಅವರು ನಮ್ಮ ನಿರೀಕ್ಷೆಯಷ್ಟು ಮತದಾನ ಮಾಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತಗಳೂ ಗಣನೀಯ ಪ್ರಮಾಣದಲ್ಲಿ ಪಕ್ಷಕ್ಕೆ ಬಂದಿವೆ. ಜೊತೆಗೆ ಹಲವಾರು ಸಣ್ಣ ಸಮುದಾಯಗಳೂ ಕೈ ಹಿಡಿದಿವೆ. ಹಲವು ಸಮುದಾಯದ ಹೊಸ ಮತಗಳನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂಬುದು ಕಾಂಗ್ರೆಸ್ ಮುಖಂಡರ ವಾದ.</p><p>ಇನ್ನೊಂದೆಡೆ ಲಿಂಗಾಯತ ಮತಗಳನ್ನು ನೆಚ್ಚಿಕೊಂಡಿದ್ದ ಬಿಜೆಪಿಯು, ಈ ಬಾರಿ ಎಲ್ಲ ಒಳಪಂಗಡಗಳವರು ಒಂದೇ ನಿರ್ಧಾರ ತೆಗೆದುಕೊಂಡು ಮತ ಹಾಕಿದ್ದಾರೆ. ನೇಕಾರರ ಮತಗಳೂ ಗಣನೀಯ ಪ್ರಮಾಣದಲ್ಲಿ ಬಂದಿವೆ. ಜೊತೆಗೆ ಒಳಮೀಸಲಾತಿಯಿಂದಾಗಿ ಕಳೆದುಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತಗಳೂ ಮರಳಿ ಬಿದ್ದಿವೆ ಎಂಬುದು ಬಿಜೆಪಿ ನಾಯಕರ ವಾದ.</p><p>–––</p><p><strong>ಮಹಿಳಾ, ಗ್ರಾಮೀಣ ಮತದಾರರು ನಿರ್ಣಾಯಕ</strong></p><p><strong>ಬಾಗಲಕೋಟೆ</strong>: ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 2,59,797 ಮತದಾರರಿದ್ದು, 1,78,265 ಮತದಾರರು ಹಕ್ಕು ಚಲಾಯಿಸಿದ್ದಾರೆ.</p><p>ಅದರಲ್ಲಿ 1,26,999 ಪುರುಷರಿದ್ದು, 88,241 (ಶೇ 69.48) ಮಂದಿ, 1,32,775 ಮಹಿಳೆಯರಿದ್ದು, ಅದರಲ್ಲಿ 90,024 (ಶೇ 67.80) ಮಂದಿ ಮತ ಹಾಕಿದ್ದಾರೆ. ಪುರುಷರಿಗಿಂತ ಶೇ1.68 ಮಹಿಳೆಯರು ಕಡಿಮೆ ಮತ ಚಲಾಯಿಸಿದ್ದಾರೆ.</p><p>ಮಹಿಳೆಯರಿಗೆ ಶಕ್ತಿ, ಗೃಹಲಕ್ಷ್ಮಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದಾಗಿತ್ತು. ಅವರ ಮತದಾನ ಪ್ರಮಾಣ ಕಡಿಮೆಯಾಗಿರುವುದು ಅವರಲ್ಲಿ ಆತಂಕ ಮೂಡಿಸಿದೆಯಾದರೂ, ಮತ ಚಲಾಯಿಸಿದವರಲ್ಲಿ ಹೆಚ್ಚಿನ ಮಹಿಳಾ ಮತದಾರರು ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ.</p><p>ನವನಗರ, ವಿದ್ಯಾಗಿರಿ ಬಾಗಲಕೋಟೆಯಲ್ಲಿ 1,16,527 ಮತದಾರರಿದ್ದಾರೆ. ಆ ಪೈಕಿ 71,373 (ಶೇ61.25) ಮಂದಿ ಮತ ಚಲಾಯಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 1,43,270 ಮತದಾರರಿದ್ದು, ಆ ಪೈಕಿ 1,06,900 (ಶೇ74.61) ಮತ ಚಲಾಯಿಸಿದ್ದಾರೆ. ಗ್ರಾಮೀಣ ಪ್ರದೇಶದ ನಿವಾಸಿಗಳು ನಗರ ನಿವಾಸಿಗಳಿಗಿಂತ ಶೇ 13.36 ರಷ್ಟು ಹೆಚ್ಚು ಮತ ಹಾಕಿದ್ದಾರೆ.</p><p>----</p>.ಚನ್ನಪಟ್ಟಣ, ಸಂಡೂರು,ಶಿಗ್ಗಾವಿ: ಹಕ್ಕು ಚಲಾವಣೆಗೆ ಮತದಾರರ ಮೇರೆ ಮೀರಿದ ಉತ್ಸಾಹ.ಚಾಮರಾಜನಗರ ಲೋಕಸಭಾ ಚುನಾವಣೆ | ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>