<p><strong>ಗುರುಮಠಕಲ್</strong>: ಕರ್ನಾಟಕ– ತೆಲಂಗಾಣ ಗಡಿಯಲ್ಲಿರುವ ಗುರುಮಠಕಲ್ ತಾಲ್ಲೂಕಿನ ಪುಟ್ಟ ಗ್ರಾಮ ಚಲ್ಹೇರಿ. ಯಾದಗಿರಿ ಜಿಲ್ಲಾ ಕೇಂದ್ರದಿಂದ 56 ಕಿ.ಮೀ. ದೂರದಲ್ಲಿದ್ದರೆ, ತೆಲಂಗಾಣದ ಜಿಲ್ಲೆಯಾದ ನಾರಾಯಣಪೇಟ್ದಿಂದ 32 ಕಿ.ಮೀ. ಅಂತರದಲ್ಲಿರುವ ಜಲ, ನೈಸರ್ಗಿಕ ಸಂಪತ್ತು ಹೊಂದಿರುವ ಸಮೃದ್ಧವಾದ ಚಿಕ್ಕ ಗ್ರಾಮ.</p> <p>ಚಲ್ಹೇರಿಯಲ್ಲಿ ಸುಮಾರು 2,000 ಜನಸಂಖ್ಯೆ ಇದ್ದು, ಬಹುತೇಕರು ಕೃಷಿಕರಿದ್ದಾರೆ. 1,000ಕ್ಕೂ ಹೆಚ್ಚು ಮತದಾರರು ಇರುವುದು ಜನಪ್ರತಿನಿಧಿಗಳಿಗೆ ಚುನಾವಣೆಯ ಹೊಸ್ತಿಲಲ್ಲಿ ಮತ್ರ ನೆನಪಾಗುತ್ತಾರೆ. ಚಲ್ಹೇರಿ ಬದಿಯಲ್ಲಿ ಹರಿಯುವ ದೊಡ್ಡ ಹಳ್ಳ ಗ್ರಾಮಕ್ಕೆ ಜಲದ ಆಸರೆಯ ಜೊತೆಗೆ ಸಂಘರ್ಷದ ಆಪತ್ತು ತಂದೊಡುತ್ತದೆ. ಅದಕ್ಕೆ ಮುಖ್ಯ ಕಾರಣ ತೆಲಂಗಾಣದ ಸಂಗಮಬಂಡ ಜಲಾಶಯದ ಹಿನ್ನೀರು ಮತ್ತು ಮರಳು ಸಂಪತ್ತು.</p> <p>ಗ್ರಾಮದ ಕಂದಾಯ ವ್ಯಾಪ್ತಿಯಲ್ಲೇ ಇರುವ ಹೊರವಲಯದ ದೊಡ್ಡ ಹಳ್ಳವು ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಗಡಿಯನ್ನು ಪ್ರತ್ಯೇಕಿಸಿದೆ. ಮಳೆಗಾಲದಲ್ಲಿ ಗುರುಮಠಕಲ್ ಪಟ್ಟಣದ ನಲ್ಲಚೆರು ಕೆರೆಯ ಕೋಡಿ ಬಿದ್ದ ನೀರು, ಮಡೆಪಲ್ಲಿ, ನಜರಾಪುರ, ಮಿನಸಪುರ, ಚಿಂತನಪಲ್ಲಿ, ಕಂದಕೂರು, ಎಲ್ಲೇರಿ, ಕೊಂಕಲ್, ನಂದೇಪಲ್ಲಿ, ಕರಣಗಿ, ಜೈಗ್ರಾಮ, ಇಡ್ಲೂರು ಸೇರಿದಂತೆ ಮತ್ತಿತರ ಗ್ರಾಮಗಳ ಸಣ್ಣ– ಸಣ್ಣ ಹಳ್ಳಗಳ ನೀರು ಒಗ್ಗೂಡಿ ಹರಿದು ಚಲ್ಹೇರಿ ಗ್ರಾಮ ತಲುಪುವ ವೇಳೆಗೆ ಅದು ದೊಡ್ಡ ಹಳ್ಳವಾಗಿ ತೆಲಂಗಾಣ ಪ್ರವೇಶಿಸುತ್ತದೆ.</p> <p>ಕರ್ನಾಟಕದಿಂದ ಹರಿದು ಹೋದ ದೊಡ್ಡ ಹಳ್ಳಕ್ಕೆ ತೆಲಂಗಾಣದಲ್ಲಿ ಅಡ್ಡಲಾಗಿ ಸಂಗಮಬಂಡಾ ಜಲಾಶಯ ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ಜಲಾಶಯದಲ್ಲಿ ಸಂಗ್ರಹವಾಗುವ ಹಿನ್ನೀರು ಚಲ್ಹೇರಿಯ ಹನುಮ ಮಂದಿರದವರೆಗೂ ಆವರಿಸಿಕೊಳ್ಳುತ್ತದೆ. ಜಮೀನುಗಳು ಹಿನ್ನೀರಿನಲ್ಲಿ ಜಮೀನುಗಳು ಮುಳುಗಿ ರೈತರು ಬೆಳೆ ಕಳೆದುಕೊಂಡರೂ ಅವರಿಗೆ ಬಿಡಿಗಾಸಿನ ಪರಿಹಾರ ಸಿಗುವುದಿಲ್ಲ. ಜಲಾಶಯ ತೆಲಂಗಾಣದಲ್ಲಿ ಬರುವುದರಿಂದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದಕ್ಕೆ ಪರಿಹಾರ ನೀಡಲು ಬರುವುದಿಲ್ಲ ಎಂದು ಅಧಿಕಾರಿಗಳು ಕೈ ತೊಳೆದಕೊಳ್ಳುತ್ತಾರೆ. ಬೆಳೆ ಕಳೆದುಕೊಂಡು ರೈತರ ತಲೆಯ ಮೇಲೆ ಕೈ ಹೊತ್ತು, ಹಣೆ ಬಡೆದುಕೊಂಡು ಕಣ್ಣೀರು ಹಾಕುವುದು ತಪ್ಪುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.</p> <p>ತೆಲಂಗಾಣಕ್ಕೆ ಮರಳು: ‘ಚಲ್ಹೇರಿ ದೊಡ್ಡಹಳ್ಳ ಕರ್ನಾಟಕ ವ್ಯಾಪ್ತಿಯಲ್ಲಿದ್ದರೂ ತೆಲಂಗಾಣಕ್ಕೆ ಟ್ರ್ಯಾಕ್ಟರ್ಗಳ ಮೂಲಕ ಮರಳು ಸಾಗಾಟ ಅವ್ಯಾಹತವಾಗಿ ಸಾಗುತ್ತಿದೆ. ಇದರಿಂದ ಹಳ್ಳದ ಮರಳು ಖಾಲಿಯಾಗಿ ಬೇಸಿಗೆ ವೇಳೆ ನೀರಿಲ್ಲದಂತಾಗುತ್ತಿತ್ತು. ತೆಲಂಗಾಣ ಮರಳು ಮಾಫಿಯಾ ವಿರುದ್ಧ ‘ಗ್ರಾಮಸ್ಥರು ಹಲವು ಸಲ ಹೋರಾಡಿ ನಾಡಿನ ಸಂಪತ್ತಿನ ರಕ್ಷಣೆಗೆ ಮುಂದಾಗುತ್ತಿದ್ದಾರೆ. ಇದರ ಪರಿಣಾಮ ಮಾರ್ಚ್ - ಏಪ್ರಿಲ್ನಿಂದ ತೆಲಂಗಾಣದ ಮರಳು ಸಾಗಾಟ ಕಡಿಮೆಯಾಗಿದೆ. ಆದರೆ, ರಾತ್ರಿ ವೇಳೆ ಕದ್ದು ಮುಚ್ಚಿ ಬಂದು ಕಳ್ಳತನದಿಂದ ಸಾಗಾಟ ಮಾಡುವುದು ಮುಂದುವರಿದಿದೆ’ ಎನ್ನುತ್ತಾರೆ ಚಲ್ಹೇರಿ ಗ್ರಾಮಸ್ಥರು.</p> <p>ಹಳ್ಳದಲ್ಲಿ ಟ್ರ್ಯಾಕ್ಟರ್ ಸದ್ದು ಕೇಳುತ್ತಿದ್ದಂತೆ ಗ್ರಾಮಸ್ಥರು ಬಂದು ಅಡ್ಡಿ ಮಾಡುತ್ತಾರೆ. ಅಕ್ರಮ ಮರಳುಗಾರಿಕೆ ನಡೆಸದಂತೆ ವಾಗ್ವಾದಕ್ಕೂ ಇಳಿಯುತ್ತಾರೆ. ಕೆಲವೊಮ್ಮೆ ಮರಳು ದಂಧೆಕೋರರು ಹಲ್ಲೆಗೂ ಯತ್ನಿಸುತ್ತಾರೆ. ಬಡಿಗೆಗಳನ್ನು ಹಿಡಿದು ಹೊಡೆದಾಡಿದ ವಿಡಿಯೊಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಮರಳುಗಾರಿಕೆಗೆ ಬಂದು ಗಲಾಟೆ ಮಾಡಿದ ಆರೋಪದಡಿ ಪೊಲೀಸರು ಕೆಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ವಾಹನಗಳನ್ನು ಜಪ್ತಿಯೂ ಮಾಡಿಕೊಂಡಿದ್ದಾರೆ. ಆದರೂ ನಾಡಿನ ಸಂಪತ್ತು ಲೂಟಿ ನಿಲ್ಲುತ್ತಿಲ್ಲ ಎಂಬುದು ಸ್ಥಳೀಯರ ಬೇಸರ. </p> <p>ಚೆಕ್ ಪೋಸ್ಟ್, ರಾಯಾಲ್ಟಿ ಕೇಂದ್ರ ಸ್ಥಾಪಿಸಿ: ಕನ್ನಡ ನೆಲದ ಗ್ರಾಮಗಳಿಂದ ಹರಿದು ಹೋದ ಮರಳು ಚಲ್ಹೇರಿ ಬಳಿಯ ವಿಶಾಲ ಪ್ರದೇಶದಲ್ಲಿ ಜಮೆಯಾಗಿದೆ. ಅದು, ನೆರೆ ರಾಜ್ಯದ ಪಾಲಾಗುತ್ತಿದೆ. ಜತೆಗೆ ಮರಳು ಮಾಫಿಯಾದಿಂದ ಪ್ರಾಕೃತಿಕ ಸಂಪನ್ಮೂಲವು ಕಳ್ಳತನವಾಗುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಈ ಹಳ್ಳದ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಬೇಕಿದೆ. ಜತೆಗೆ ಮರಳು ಸರಬರಾಜಿನ ರಾಯಾಲ್ಟಿ ಕೇಂದ್ರ ಸ್ಥಾಪಿಸಿದರೆ ಸರ್ಕಾರಕ್ಕೆ ರಾಜಸ್ವವನ್ನೂ ಸಂಗ್ರಹಿಸುವ ಮತ್ತು ಮರಳು ಸೋರಿಕೆ ನಿಯಂತ್ರಿಸುವ ಅವಕಾಶ ಇದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಚಿಂತಿಸಬೇಕಿದೆ.</p> <p>ಹಿಂದಿನ ತಲೆಮಾರುಗಳು ದೂರದೃಷ್ಟಿಯಿಂದ ಬರಗಾಲ ಸೇರಿದಂತೆ ಜಲಸಂಕಷ್ಟವನ್ನು ಎದುರಿಸಲು ಮಳೆಗಾಲದಲ್ಲಿ ಕೆರೆಗಳು ತುಂಬಿದ ನಂತರ ಇನ್ನೊಂದು ಕೆರೆಗೆ ನೀರು ಹರಿಸುವ ಜಲವನ್ನು ನಿರ್ಮಿಸಿದ್ದರು. ಆದರೆ, ಈಗ ಕೆಲವರ ಸ್ವಾರ್ಥದಿಂದಾಗಿ ಮತ್ತು ರಿಯಲ್ ಎಸ್ಟೇಟ್ ಕಾರಣಕ್ಕಾಗಿ ಕೆರೆಗಳಿಂದ ಕೆರೆಗಳಿಗೆ ನಿರ್ಮಿಸಿದ ಜಲ ಜಾಲ ಒತ್ತುವರಿಯಾಗಿದ್ದು, ಸಂಬಂಧಿತ ಇಲಾಖೆ ಒತ್ತುವರಿ ತೆರವುಗೊಳಿಸಿ, ಈ ಜಲ ಜಲಕ್ಕೆ ಮರುಜೀವ ನೀಡಬೇಕಿದೆ.</p> <p>ತೆಲಂಗಾಣದ ಪಾಲಾದ ಜಲ ಸಂಪನ್ಮೂಲ: ‘ದೊಡ್ಡಹಳ್ಳದ ನೀರು ಹರಿದು ತೆಲಂಗಾಣ ರಾಜ್ಯಕ್ಕೆ ಹೋಗುತ್ತಿದೆ. ಈ ಹಿಂದೆ ತೆಲಂಗಾಣ ಪ್ರತ್ಯೇಕ ರಾಜ್ಯವಾಗುವ ಮೊದಲೇ ಅಂದಿನ ಆಂಧ್ರಪ್ರದೇಶ ಸರ್ಕಾರವು ಸಂಗಮಬಂಡಾ ಗ್ರಾಮದಲ್ಲಿ 3 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ನಿರ್ಮಿಸಿದೆ. ನಮ್ಮ ಸರ್ಕಾರ ಮಾತ್ರ ಮಲ ತಾಯಿಯಂತೆ ನಿರ್ಲಕ್ಷವಹಿಸಿ, ಜಾಣ ನಿದ್ರೆಯಲ್ಲಿದೆ. ಇದರಿಂದ ಸರಾಗವಾಗಿ ನಮ್ಮ ಜಲ ಸಂಪನ್ಮೂಲ ತೆಲಂಗಾಣಕ್ಕೆ ಹರಿಯುತ್ತಿದೆ. ಅದರೆ, ನಮ್ಮ ರಾಜ್ಯದ ರೈತರು ನೀರಾವರಿಯಿಂದ ವಂಚಿತರಾಗುತ್ತಿದ್ದಾರೆ. ಜತೆಗೆ ಸಾಕಷ್ಟು ಮಳೆಯಾದ ವರ್ಷ ಜಲಾಶಯದ ಹಿನ್ನೀರು ಚಲ್ಹೇರಿ ರೈತರ ಬೆಳೆಯನ್ನು ಆಪೋಶನಗೈಯ್ಯುತ್ತಿದೆ’ ಎಂದು ರೈತರು ಅಸಹಾಯಕತೆ ಮತ್ತು ಆಕ್ರೋಶ ಹೊರಹಾಕಿದರು.</p>. <p>ರಾಜ್ಯ ಸರ್ಕಾರದ ಮೌನ, ನಿರ್ಲಕ್ಷ ಹಾಗೂ 'ತಮಗೂ ಸಮಸ್ಯೆಗೂ ಸಂಬಂಧವಿಲ್ಲ' ಎಂಬಂತಾ ಧೋರಣೆಯಿಂದಾಗಿ ಕರ್ನಾಟಕ - ತೆಲಂಗಾಣ ಗಡಿಯಲ್ಲಿನ ನಮ್ಮ ನೆಲ ಮತ್ತು ಜಲ ತೆಲಂಗಾಣ ರಾಜ್ಯದ ಪಾಲಾಗುತ್ತಿದ್ದು, ತಾಲ್ಲೂಕಿನ ಗಡಿ ಗ್ರಾಮಸ್ಥರು ಮಾತ್ರ ಅವಕಾಶ ವಂಚಿತರಾಗುತ್ತಿದ್ದಾರೆ. </p> <p>ನನಸಾಗದ ಕನಸು: ಈ ಹಿಂದೆ ಚಲ್ಹೇರಿ ದೊಡ್ಡಹಳ್ಳಕ್ಕೆ ₹ 50 ಕೋಟಿ ಅನುದಾನದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಯೋಜನೆ ರೂಪೀಸಲಾಗಿತ್ತು. ಹಲವು ರಾಜಕೀಯ ಬೆಳವಣಿಗೆಗಳು ಮತ್ತು ಬದಲಾದ ಸನ್ನಿವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನವಾಯಿತು. ನಂತರ ಈ ಕುರಿತು ಯಾವ ಬೆಳವಣಿಗೆಯೂ ಇಲ್ಲವಾಗಿ, ರೈತರ ಕನಸು ನನಸಾಗದೆ ಉಳಿಯಿತು' ಎಂದು ವಿವರಿಸಿದ್ದು ಅಶೋಕ ಮತ್ತು ಮಹೇಂದ್ರರೆಡ್ಡಿ.</p> <p>ಈ ಭಾಗದ ರೈತರ ಬಹುದಿನಗಳ ಕನಸಾದ ಬ್ರಿಡ್ಜ್ ಕಂ ಬ್ಯಾರೇಜ್ ಅಥವಾ ಜಲಾಶಯದ ನಿರ್ಮಾಣವಾದರೆ ರೈತರಿಗೆ ನೀರಾವರಿ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುತ್ತದೆ. ಜತೆಗೆ ತೆಲಂಗಾಣ ಗಡಿ ವಿವಾಧವನ್ನೂ ಗಂಭೀರವಾಗಿ ಪರಿಗಣಿಸಿ, ಶೀಘ್ರ ನಮ್ಮ ಗಡಿ ರಕ್ಷಣೆಗೆ ಆಧ್ಯತೆ ನೀಡಬೇಕಿದೆ’ ಎನ್ನುತ್ತಾರೆ ಗ್ರಾಮದ ಮುಖಂಡ ರಾಮಾಚಾರಿ ಚಲ್ಹೇರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್</strong>: ಕರ್ನಾಟಕ– ತೆಲಂಗಾಣ ಗಡಿಯಲ್ಲಿರುವ ಗುರುಮಠಕಲ್ ತಾಲ್ಲೂಕಿನ ಪುಟ್ಟ ಗ್ರಾಮ ಚಲ್ಹೇರಿ. ಯಾದಗಿರಿ ಜಿಲ್ಲಾ ಕೇಂದ್ರದಿಂದ 56 ಕಿ.ಮೀ. ದೂರದಲ್ಲಿದ್ದರೆ, ತೆಲಂಗಾಣದ ಜಿಲ್ಲೆಯಾದ ನಾರಾಯಣಪೇಟ್ದಿಂದ 32 ಕಿ.ಮೀ. ಅಂತರದಲ್ಲಿರುವ ಜಲ, ನೈಸರ್ಗಿಕ ಸಂಪತ್ತು ಹೊಂದಿರುವ ಸಮೃದ್ಧವಾದ ಚಿಕ್ಕ ಗ್ರಾಮ.</p> <p>ಚಲ್ಹೇರಿಯಲ್ಲಿ ಸುಮಾರು 2,000 ಜನಸಂಖ್ಯೆ ಇದ್ದು, ಬಹುತೇಕರು ಕೃಷಿಕರಿದ್ದಾರೆ. 1,000ಕ್ಕೂ ಹೆಚ್ಚು ಮತದಾರರು ಇರುವುದು ಜನಪ್ರತಿನಿಧಿಗಳಿಗೆ ಚುನಾವಣೆಯ ಹೊಸ್ತಿಲಲ್ಲಿ ಮತ್ರ ನೆನಪಾಗುತ್ತಾರೆ. ಚಲ್ಹೇರಿ ಬದಿಯಲ್ಲಿ ಹರಿಯುವ ದೊಡ್ಡ ಹಳ್ಳ ಗ್ರಾಮಕ್ಕೆ ಜಲದ ಆಸರೆಯ ಜೊತೆಗೆ ಸಂಘರ್ಷದ ಆಪತ್ತು ತಂದೊಡುತ್ತದೆ. ಅದಕ್ಕೆ ಮುಖ್ಯ ಕಾರಣ ತೆಲಂಗಾಣದ ಸಂಗಮಬಂಡ ಜಲಾಶಯದ ಹಿನ್ನೀರು ಮತ್ತು ಮರಳು ಸಂಪತ್ತು.</p> <p>ಗ್ರಾಮದ ಕಂದಾಯ ವ್ಯಾಪ್ತಿಯಲ್ಲೇ ಇರುವ ಹೊರವಲಯದ ದೊಡ್ಡ ಹಳ್ಳವು ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಗಡಿಯನ್ನು ಪ್ರತ್ಯೇಕಿಸಿದೆ. ಮಳೆಗಾಲದಲ್ಲಿ ಗುರುಮಠಕಲ್ ಪಟ್ಟಣದ ನಲ್ಲಚೆರು ಕೆರೆಯ ಕೋಡಿ ಬಿದ್ದ ನೀರು, ಮಡೆಪಲ್ಲಿ, ನಜರಾಪುರ, ಮಿನಸಪುರ, ಚಿಂತನಪಲ್ಲಿ, ಕಂದಕೂರು, ಎಲ್ಲೇರಿ, ಕೊಂಕಲ್, ನಂದೇಪಲ್ಲಿ, ಕರಣಗಿ, ಜೈಗ್ರಾಮ, ಇಡ್ಲೂರು ಸೇರಿದಂತೆ ಮತ್ತಿತರ ಗ್ರಾಮಗಳ ಸಣ್ಣ– ಸಣ್ಣ ಹಳ್ಳಗಳ ನೀರು ಒಗ್ಗೂಡಿ ಹರಿದು ಚಲ್ಹೇರಿ ಗ್ರಾಮ ತಲುಪುವ ವೇಳೆಗೆ ಅದು ದೊಡ್ಡ ಹಳ್ಳವಾಗಿ ತೆಲಂಗಾಣ ಪ್ರವೇಶಿಸುತ್ತದೆ.</p> <p>ಕರ್ನಾಟಕದಿಂದ ಹರಿದು ಹೋದ ದೊಡ್ಡ ಹಳ್ಳಕ್ಕೆ ತೆಲಂಗಾಣದಲ್ಲಿ ಅಡ್ಡಲಾಗಿ ಸಂಗಮಬಂಡಾ ಜಲಾಶಯ ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ಜಲಾಶಯದಲ್ಲಿ ಸಂಗ್ರಹವಾಗುವ ಹಿನ್ನೀರು ಚಲ್ಹೇರಿಯ ಹನುಮ ಮಂದಿರದವರೆಗೂ ಆವರಿಸಿಕೊಳ್ಳುತ್ತದೆ. ಜಮೀನುಗಳು ಹಿನ್ನೀರಿನಲ್ಲಿ ಜಮೀನುಗಳು ಮುಳುಗಿ ರೈತರು ಬೆಳೆ ಕಳೆದುಕೊಂಡರೂ ಅವರಿಗೆ ಬಿಡಿಗಾಸಿನ ಪರಿಹಾರ ಸಿಗುವುದಿಲ್ಲ. ಜಲಾಶಯ ತೆಲಂಗಾಣದಲ್ಲಿ ಬರುವುದರಿಂದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದಕ್ಕೆ ಪರಿಹಾರ ನೀಡಲು ಬರುವುದಿಲ್ಲ ಎಂದು ಅಧಿಕಾರಿಗಳು ಕೈ ತೊಳೆದಕೊಳ್ಳುತ್ತಾರೆ. ಬೆಳೆ ಕಳೆದುಕೊಂಡು ರೈತರ ತಲೆಯ ಮೇಲೆ ಕೈ ಹೊತ್ತು, ಹಣೆ ಬಡೆದುಕೊಂಡು ಕಣ್ಣೀರು ಹಾಕುವುದು ತಪ್ಪುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.</p> <p>ತೆಲಂಗಾಣಕ್ಕೆ ಮರಳು: ‘ಚಲ್ಹೇರಿ ದೊಡ್ಡಹಳ್ಳ ಕರ್ನಾಟಕ ವ್ಯಾಪ್ತಿಯಲ್ಲಿದ್ದರೂ ತೆಲಂಗಾಣಕ್ಕೆ ಟ್ರ್ಯಾಕ್ಟರ್ಗಳ ಮೂಲಕ ಮರಳು ಸಾಗಾಟ ಅವ್ಯಾಹತವಾಗಿ ಸಾಗುತ್ತಿದೆ. ಇದರಿಂದ ಹಳ್ಳದ ಮರಳು ಖಾಲಿಯಾಗಿ ಬೇಸಿಗೆ ವೇಳೆ ನೀರಿಲ್ಲದಂತಾಗುತ್ತಿತ್ತು. ತೆಲಂಗಾಣ ಮರಳು ಮಾಫಿಯಾ ವಿರುದ್ಧ ‘ಗ್ರಾಮಸ್ಥರು ಹಲವು ಸಲ ಹೋರಾಡಿ ನಾಡಿನ ಸಂಪತ್ತಿನ ರಕ್ಷಣೆಗೆ ಮುಂದಾಗುತ್ತಿದ್ದಾರೆ. ಇದರ ಪರಿಣಾಮ ಮಾರ್ಚ್ - ಏಪ್ರಿಲ್ನಿಂದ ತೆಲಂಗಾಣದ ಮರಳು ಸಾಗಾಟ ಕಡಿಮೆಯಾಗಿದೆ. ಆದರೆ, ರಾತ್ರಿ ವೇಳೆ ಕದ್ದು ಮುಚ್ಚಿ ಬಂದು ಕಳ್ಳತನದಿಂದ ಸಾಗಾಟ ಮಾಡುವುದು ಮುಂದುವರಿದಿದೆ’ ಎನ್ನುತ್ತಾರೆ ಚಲ್ಹೇರಿ ಗ್ರಾಮಸ್ಥರು.</p> <p>ಹಳ್ಳದಲ್ಲಿ ಟ್ರ್ಯಾಕ್ಟರ್ ಸದ್ದು ಕೇಳುತ್ತಿದ್ದಂತೆ ಗ್ರಾಮಸ್ಥರು ಬಂದು ಅಡ್ಡಿ ಮಾಡುತ್ತಾರೆ. ಅಕ್ರಮ ಮರಳುಗಾರಿಕೆ ನಡೆಸದಂತೆ ವಾಗ್ವಾದಕ್ಕೂ ಇಳಿಯುತ್ತಾರೆ. ಕೆಲವೊಮ್ಮೆ ಮರಳು ದಂಧೆಕೋರರು ಹಲ್ಲೆಗೂ ಯತ್ನಿಸುತ್ತಾರೆ. ಬಡಿಗೆಗಳನ್ನು ಹಿಡಿದು ಹೊಡೆದಾಡಿದ ವಿಡಿಯೊಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಮರಳುಗಾರಿಕೆಗೆ ಬಂದು ಗಲಾಟೆ ಮಾಡಿದ ಆರೋಪದಡಿ ಪೊಲೀಸರು ಕೆಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ವಾಹನಗಳನ್ನು ಜಪ್ತಿಯೂ ಮಾಡಿಕೊಂಡಿದ್ದಾರೆ. ಆದರೂ ನಾಡಿನ ಸಂಪತ್ತು ಲೂಟಿ ನಿಲ್ಲುತ್ತಿಲ್ಲ ಎಂಬುದು ಸ್ಥಳೀಯರ ಬೇಸರ. </p> <p>ಚೆಕ್ ಪೋಸ್ಟ್, ರಾಯಾಲ್ಟಿ ಕೇಂದ್ರ ಸ್ಥಾಪಿಸಿ: ಕನ್ನಡ ನೆಲದ ಗ್ರಾಮಗಳಿಂದ ಹರಿದು ಹೋದ ಮರಳು ಚಲ್ಹೇರಿ ಬಳಿಯ ವಿಶಾಲ ಪ್ರದೇಶದಲ್ಲಿ ಜಮೆಯಾಗಿದೆ. ಅದು, ನೆರೆ ರಾಜ್ಯದ ಪಾಲಾಗುತ್ತಿದೆ. ಜತೆಗೆ ಮರಳು ಮಾಫಿಯಾದಿಂದ ಪ್ರಾಕೃತಿಕ ಸಂಪನ್ಮೂಲವು ಕಳ್ಳತನವಾಗುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಈ ಹಳ್ಳದ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಬೇಕಿದೆ. ಜತೆಗೆ ಮರಳು ಸರಬರಾಜಿನ ರಾಯಾಲ್ಟಿ ಕೇಂದ್ರ ಸ್ಥಾಪಿಸಿದರೆ ಸರ್ಕಾರಕ್ಕೆ ರಾಜಸ್ವವನ್ನೂ ಸಂಗ್ರಹಿಸುವ ಮತ್ತು ಮರಳು ಸೋರಿಕೆ ನಿಯಂತ್ರಿಸುವ ಅವಕಾಶ ಇದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಚಿಂತಿಸಬೇಕಿದೆ.</p> <p>ಹಿಂದಿನ ತಲೆಮಾರುಗಳು ದೂರದೃಷ್ಟಿಯಿಂದ ಬರಗಾಲ ಸೇರಿದಂತೆ ಜಲಸಂಕಷ್ಟವನ್ನು ಎದುರಿಸಲು ಮಳೆಗಾಲದಲ್ಲಿ ಕೆರೆಗಳು ತುಂಬಿದ ನಂತರ ಇನ್ನೊಂದು ಕೆರೆಗೆ ನೀರು ಹರಿಸುವ ಜಲವನ್ನು ನಿರ್ಮಿಸಿದ್ದರು. ಆದರೆ, ಈಗ ಕೆಲವರ ಸ್ವಾರ್ಥದಿಂದಾಗಿ ಮತ್ತು ರಿಯಲ್ ಎಸ್ಟೇಟ್ ಕಾರಣಕ್ಕಾಗಿ ಕೆರೆಗಳಿಂದ ಕೆರೆಗಳಿಗೆ ನಿರ್ಮಿಸಿದ ಜಲ ಜಾಲ ಒತ್ತುವರಿಯಾಗಿದ್ದು, ಸಂಬಂಧಿತ ಇಲಾಖೆ ಒತ್ತುವರಿ ತೆರವುಗೊಳಿಸಿ, ಈ ಜಲ ಜಲಕ್ಕೆ ಮರುಜೀವ ನೀಡಬೇಕಿದೆ.</p> <p>ತೆಲಂಗಾಣದ ಪಾಲಾದ ಜಲ ಸಂಪನ್ಮೂಲ: ‘ದೊಡ್ಡಹಳ್ಳದ ನೀರು ಹರಿದು ತೆಲಂಗಾಣ ರಾಜ್ಯಕ್ಕೆ ಹೋಗುತ್ತಿದೆ. ಈ ಹಿಂದೆ ತೆಲಂಗಾಣ ಪ್ರತ್ಯೇಕ ರಾಜ್ಯವಾಗುವ ಮೊದಲೇ ಅಂದಿನ ಆಂಧ್ರಪ್ರದೇಶ ಸರ್ಕಾರವು ಸಂಗಮಬಂಡಾ ಗ್ರಾಮದಲ್ಲಿ 3 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ನಿರ್ಮಿಸಿದೆ. ನಮ್ಮ ಸರ್ಕಾರ ಮಾತ್ರ ಮಲ ತಾಯಿಯಂತೆ ನಿರ್ಲಕ್ಷವಹಿಸಿ, ಜಾಣ ನಿದ್ರೆಯಲ್ಲಿದೆ. ಇದರಿಂದ ಸರಾಗವಾಗಿ ನಮ್ಮ ಜಲ ಸಂಪನ್ಮೂಲ ತೆಲಂಗಾಣಕ್ಕೆ ಹರಿಯುತ್ತಿದೆ. ಅದರೆ, ನಮ್ಮ ರಾಜ್ಯದ ರೈತರು ನೀರಾವರಿಯಿಂದ ವಂಚಿತರಾಗುತ್ತಿದ್ದಾರೆ. ಜತೆಗೆ ಸಾಕಷ್ಟು ಮಳೆಯಾದ ವರ್ಷ ಜಲಾಶಯದ ಹಿನ್ನೀರು ಚಲ್ಹೇರಿ ರೈತರ ಬೆಳೆಯನ್ನು ಆಪೋಶನಗೈಯ್ಯುತ್ತಿದೆ’ ಎಂದು ರೈತರು ಅಸಹಾಯಕತೆ ಮತ್ತು ಆಕ್ರೋಶ ಹೊರಹಾಕಿದರು.</p>. <p>ರಾಜ್ಯ ಸರ್ಕಾರದ ಮೌನ, ನಿರ್ಲಕ್ಷ ಹಾಗೂ 'ತಮಗೂ ಸಮಸ್ಯೆಗೂ ಸಂಬಂಧವಿಲ್ಲ' ಎಂಬಂತಾ ಧೋರಣೆಯಿಂದಾಗಿ ಕರ್ನಾಟಕ - ತೆಲಂಗಾಣ ಗಡಿಯಲ್ಲಿನ ನಮ್ಮ ನೆಲ ಮತ್ತು ಜಲ ತೆಲಂಗಾಣ ರಾಜ್ಯದ ಪಾಲಾಗುತ್ತಿದ್ದು, ತಾಲ್ಲೂಕಿನ ಗಡಿ ಗ್ರಾಮಸ್ಥರು ಮಾತ್ರ ಅವಕಾಶ ವಂಚಿತರಾಗುತ್ತಿದ್ದಾರೆ. </p> <p>ನನಸಾಗದ ಕನಸು: ಈ ಹಿಂದೆ ಚಲ್ಹೇರಿ ದೊಡ್ಡಹಳ್ಳಕ್ಕೆ ₹ 50 ಕೋಟಿ ಅನುದಾನದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಯೋಜನೆ ರೂಪೀಸಲಾಗಿತ್ತು. ಹಲವು ರಾಜಕೀಯ ಬೆಳವಣಿಗೆಗಳು ಮತ್ತು ಬದಲಾದ ಸನ್ನಿವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನವಾಯಿತು. ನಂತರ ಈ ಕುರಿತು ಯಾವ ಬೆಳವಣಿಗೆಯೂ ಇಲ್ಲವಾಗಿ, ರೈತರ ಕನಸು ನನಸಾಗದೆ ಉಳಿಯಿತು' ಎಂದು ವಿವರಿಸಿದ್ದು ಅಶೋಕ ಮತ್ತು ಮಹೇಂದ್ರರೆಡ್ಡಿ.</p> <p>ಈ ಭಾಗದ ರೈತರ ಬಹುದಿನಗಳ ಕನಸಾದ ಬ್ರಿಡ್ಜ್ ಕಂ ಬ್ಯಾರೇಜ್ ಅಥವಾ ಜಲಾಶಯದ ನಿರ್ಮಾಣವಾದರೆ ರೈತರಿಗೆ ನೀರಾವರಿ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುತ್ತದೆ. ಜತೆಗೆ ತೆಲಂಗಾಣ ಗಡಿ ವಿವಾಧವನ್ನೂ ಗಂಭೀರವಾಗಿ ಪರಿಗಣಿಸಿ, ಶೀಘ್ರ ನಮ್ಮ ಗಡಿ ರಕ್ಷಣೆಗೆ ಆಧ್ಯತೆ ನೀಡಬೇಕಿದೆ’ ಎನ್ನುತ್ತಾರೆ ಗ್ರಾಮದ ಮುಖಂಡ ರಾಮಾಚಾರಿ ಚಲ್ಹೇರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>